ನದಿಯಲ್ಲಿ ಮುಳುಗಿ ನಿವೃತ್ತ ವಿಜ್ಞಾನಿ, ರತ್ನಾಕರ್ ಸಾವು

Team Newsnap
0 Min Read

ಇಸ್ರೋ ನಿವೃತ್ತ ವಿಜ್ಞಾನಿ ರತ್ನಾಕರ್‌ ಎಸ್‌.ಸಿ ಕಾರ್ಕಳ ತಾಲೂಕಿನ ಸ್ವರ್ಣ ನದಿಯಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ.

ಬೆಂಗಳೂರಿನ ಬಸವನಗುಡಿ ನಿವಾಸಿ ರತ್ನಾಕರ್‌ ಕಾರ್ಕಳದ ಗೋವಿಂದೂರು ಎರ್ಲಪಾಡಿಯ ಶ್ರೀರಾಕೃಷ್ಣಾಶ್ರಮದಲ್ಲಿ ವಾಸವಾಗಿದ್ದರು.

ಆಶ್ರಮದ ಬಳಿ ಇರುವ ಸ್ವರ್ಣ ನದಿಗೆ ಸ್ನಾನಕ್ಕೆಂದು ಹೋಗಿದ್ದಾಗ ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿದ್ದಾರೆ.

ಪೊಲೀಸರು ಕಾರ್ಯಾಚರಣೆ ನಡೆಸಿ ಮೃತದೇಹ ಹೊರತೆಗೆದಿದ್ದಾರೆ. ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a comment