January 29, 2026

Newsnap Kannada

The World at your finger tips!

jarakihole

ರಮೇಶ್ ಜಾರಕಿಹೊಳಿ CD ಕೇಸ್; ಸದನದಲ್ಲಿ ​ನಿಲುವಳಿ ಸೂಚನೆ ಮಂಡನೆಗೆ ಕಾಂಗ್ರೆಸ್ ಸಿದ್ಧತೆ?

Spread the love

ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧದ ಸಿಡಿ ಕೇಸ್ ತನಿಖೆಯ ಪ್ರಗತಿ ಬಗ್ಗೆ ಕಾಂಗ್ರೆಸ್ ಮಾಹಿತಿ ಕೇಳಿದೆ.

ಶುಕ್ರವಾರ ಇದೇ ವಿಚಾರವಾಗಿ ಸದನದ ಕಲಾಪದಲ್ಲಿ ನಿಲುವಳಿ ಸೂಚನೆಯನ್ನು ಮಂಡಿಸಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ.

ಈ ಹಿನ್ನೆಲೆ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಸಚಿವ ಡಾ ಕೆ. ಸುಧಾಕರ್, ನಿಲುವಳಿ ಸೂಚನೆ ಮಂಡನೆ ಮಾಡದಂತೆ ಮನವಿ ಮಾಡಿದ್ದಾರೆ.

ಈ ವಿಚಾರವಾಗಿ ವಿಪಕ್ಷದ ಮನವೊಲಿಸಲು ಸಚಿವ ಸುಧಾಕರ್​​ಗೆ ಜವಾಬ್ದಾರಿ ನೀಡಲಾಗಿದೆ.
ಅದರಂತೆ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಕರೆ ಮಾಡಿರುವ ಡಾ.ಕೆ ಸುಧಾಕರ್, ನಿಲುವಳಿ ಸೂಚನೆ ಮಂಡನೆ ಮಾಡದಂತೆ ಮನವಿ ಮಾಡಿಕೊಂಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ಸರ್ಕಾರದ ಪರವಾಗಿ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

error: Content is protected !!