ದೆಹಲಿಯಲ್ಲಿ ರಾಕ್ಷಸರು ಮುಕ್ಕಿತಿಂದ ಯುವತಿ ನಿರ್ಭಯಾಳ ಸಹೋದರನನ್ನು ಯಾರಿಗೂ ಗೊತ್ತಾಗದಂತೆ ಪೈಲಟ್ ತರಬೇತಿ ಕೊಡಿಸಿದ ಪೈಲಟ್ ಆಗಲು ಸಹಕಾರ ನೀಡಿದ ರಾಹುಲ್ ಗಾಂಧಿ ಇದುವರೆಗೂ ಆ ಸತ್ಯವನ್ನು ಹೊರಗೆಳೆದಿಲ್ಲ..!
ಆದರೆ ರಾಹುಲ್ ಗಾಂಧಿಗೆ ಅದು ಹೇಳುವುದು ಇಷ್ಟವಿಲ್ಲದಿದ್ದರೂ ನಾನು ಆ ಸತ್ಯವನ್ನು ಹೇಳುತ್ತಿದ್ದೇನೆ ಎಂದು ಹೇಳಿದ್ದು ನಿರ್ಭಯಾಳ ತಾಯಿ ರಾಹುಲ್ ಗಾಂಧಿ ಮಾಡಿದ ಉಪಕಾರವನ್ನು ನೆನದಿದ್ದಾರೆ.
ಸೈನ್ಯದಲ್ಲಿ ಪೈಲಟ್ ಆಗಬೇಕೆಂಬ ಬಾಲ್ಯದ ಕನಸುಗಳಿಗೆ ಸಹೋದರಿ ನಿರ್ಭಯಾಳ ಸಾವು ದೊಡ್ಡ ಹೊಡೆತವಾಗಿತ್ತು.
ನಂತರ ಅವನ ಜವಾಬ್ದಾರಿಯನ್ನು ರಾಹುಲ್ ಗಾಂಧಿ ವಹಿಸಿಕೊಂಡರು.
ಸೋನಿಯಾ ಗಾಂಧಿಯ ಕ್ಷೇತ್ರವಾದ ರಾಯಿಬರೇಲಿಯಾದಲ್ಲಿರುವ ಇಂದಿರಾಗಾಂಧಿ ರಾಷ್ಟ್ರೀಯ ಉಡಾನ್ ಅಕಾಡೆಮಿಯಲ್ಲಿ ಪೈಲಟ್ ತರಬೇತಿಗೆ ಅನುಕೂಲ ಮಾಡಿಕೊಟ್ಟ ರಾಹುಲ್ ಗಾಂಧಿ ವಿಶೇಷ ಕೌನ್ಸೆಲಿಂಗ್ ಕೂಡ ಕೊಡಿಸಿದರು
ಅಧ್ಯಯನದ ಸಂಪೂರ್ಣ ವೆಚ್ಚವನ್ನು ರಾಹುಲ್ ಗಾಂಧಿ ಭರಿಸಿದ್ದರು. ತಮ್ಮ ಮಗ ಪೈಲಟ್ ಆಗಿರುವುದನ್ನು ನೋಡಿ ನನಗೆ ತುಂಬಾ ಸಂತೋಷವಾಗುತ್ತಿದೆ ಎಂದು ನಿರ್ಭಯಾ ಅವರ ತಾಯಿ ಆಶಾದೇವಿ ಹೇಳುತ್ತಾರೆ.
ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರಿಗೆ ವಿಶೇಷ ಧನ್ಯವಾದಗಳನ್ನೂ ಅವರು ತಿಳಿಸಿದರು.
ಅವನನ್ನು ಪೈಲಟ್ ಆಗಿ ಕಾಣಲು ಅತಿಯಾಗಿ ಬಯಸಿದ್ದಳು ನಿರ್ಭಯಾ.
ಈಗ ಸಹೋದರನ ಸಾಧನೆಯನ್ನು ಅವಳು ನೋಡುತ್ತಿರಬಹುದು ಎಂದು ಕಣ್ಣೀರು ಹಾಕುತ್ತಾರೆ ಆಶಾದೇವಿ..!
ನಾನೇ ಸರ್ವಸ್ವ ಎಂದು ಹೆಮ್ಮೆ ಪಡುವವರ ಮುಂದೆ ನಾಟಕವಾಡದ ಹೀರೋ ರಾಹುಲ್ ಗಾಂಧಿ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.ಇದನ್ನು ಓದಿ –‘ಪ್ರಧಾನಿ’ ಭದ್ರತೆಯಲ್ಲಿ ಮತ್ತೆ ಲೋಪ, ‘ಮೋದಿ’ ಬಳಿ ಓಡಿ ಬಂದ ಯುವಕ
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ
- ಹಾಸನ : ಮೀನು ಹಿಡಿಯಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ಜಲ ಸಮಾಧಿ