ಅತ್ಯಾಚಾರ ಎಂದಾದರೆ ವಿಡಿಯೋ ಚಿತ್ರೀಕರಿಸಿದ್ದು ಯಾರು ಮತ್ತು ಯಾಕೆ ? ಎಂಬ ಪ್ರಶ್ನೆಯೂ ಸೇರಿ ನೂರಕ್ಕೂ ಹೆಚ್ಚು ಎಸ್ ಐಟಿ ಕೇಳುವ ಪ್ರಶ್ನೆಗೆ ಸಂತ್ರಸ್ತ ಯುವತಿ ಉತ್ತರ ಪಡೆಯುವ ಕಾರ್ಯ ಆರಂಭವಾಗಿದೆ.
ಬೆಂಗಳೂರಿನ ಆಡುಗೋಡಿಯ ಟೆಕ್ನಿಕಲ್ ವಿಂಗ್ನಲ್ಲಿರುವ ಸಿಡಿ ಲೇಡಿಗೆ ಅಧಿಕಾರಿಗಳು ಕೇಸ್ ಸಂಬಂಧ ಮೌಖಿಕವಾಗಿ ಬೇಸಿಕ್ ಪ್ರಶ್ನೆಗಳನ್ನು ರೆಡಿಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಬಂದಿದೆ.
ಪ್ರಮುಖ ಪ್ರಶ್ನೆ ಗಳು :
ಈ ಘಟನೆ ನಡೆದಿದ್ದು ಯಾವಾಗ?
ಅತ್ಯಾಚಾರ ಎಂದಾದರೆ ವಿಡಿಯೋ ಚಿತ್ರೀಕರಿಸಿದ್ದು ಯಾರು ಮತ್ತು ಯಾಕೆ?/ ವಿಡಿಯೋದಲ್ಲಿದ್ದ ಯುವತಿ ನಾನಲ್ಲ ಎನ್ನಲು ಕಾರಣವೇನು? ಪೋಷಕರ ಬಳಿ ಮೊದಲು ನಾನಲ್ಲ ಎನ್ನಲು ಕಾರಣವೇನು? ದ್ವಂದ್ವ ಹೇಳಿಕೆಗಳ ಹಿಂದೆ ಯಾವುದಾದರೂ ಒತ್ತಡವಿತ್ತಾ? ಬೆದರಿಕೆ ಇದೆ ಎಂದಿದ್ದೀರಿ, ಯಾರಿಂದ ಬೆದರಿಕೆ ಇದೆ? ಪ್ರಕರಣದಲ್ಲಿ ಇತರೇ ಶಂಕಿತ ಆರೋಪಿಗಳ ಪಾತ್ರವೇನು? ಎಂಬ ನೂರು ಪ್ರಶ್ನೆಗಳಿಗೆ ಎಸ್ಐಟಿ ತಂಡ ಉತ್ತರ ಪಡೆದುಕೊಳ್ಳಲಿದೆ.
ಆಡುಗೋಡಿಯ ಟೆಕ್ನಿಕಲ್ ವಿಂಗ್ನಲ್ಲಿ CD ಲೇಡಿ ವಿಚಾರಣೆ ನಡೆಯುತ್ತಿದೆ. ಎಸ್ಐಟಿ ಅಧಿಕಾರಿಗಳ ತಂಡದಿಂದ CD ಲೇಡಿ ವಿಚಾರಣೆ ನಡೆಯುತ್ತಿದೆ. ಈ ನಡುವೆ, ಆಡುಗೋಡಿಯ ಟೆಕ್ನಿಕಲ್ ವಿಂಗ್ ಸುತ್ತಮುತ್ತ ಹೈಅಲರ್ಟ್ ಪರಿಸ್ಥಿತಿ ನಿರ್ಮಾಣವಾಗಿದೆ. ಟೆಕ್ನಿಕಲ್ ವಿಂಗ್ ಬಳಿ 50ಕ್ಕೂ ಹೆಚ್ಚು ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ.
ಎಸ್ಐಟಿ ವಶಕ್ಕೆ ನೀಡಿಲ್ಲ : ವಕೀಲರು
ಆಡುಗೋಡಿ ಟೆಕ್ನಿಕಲ್ ಸೆಲ್ನಲ್ಲಿ ಯುವತಿಯ ಧ್ವನಿ ಪರೀಕ್ಷೆ ಮತ್ತು ಸಿಆರ್ಪಿಸಿ161 ಅಡಿ ಹೇಳಿಕೆ ಪಡೆಯಲಾಗುತ್ತದೆ ಎಂದು ಸಂತ್ರಸ್ತೆಯ ಪರ ವಕೀಲರಾದ ಜಗದೀಶ್ ಹೇಳಿಕೆ ನೀಡಿದ್ದಾರೆ. ನಾಳೆ ವೈದ್ಯಕೀಯ ಪರೀಕ್ಷೆಗಳು, ಸಾಕ್ಷಿ ಸಂಗ್ರಹದ ಪ್ರಕ್ರಿಯೆಗಳು ನಡೆಯಲಿವೆ. ಅವರನ್ನು ಎಸ್ಐಟಿ ವಶಕ್ಕೆ ನೀಡಲಾಗಿಲ್ಲ.. ನಮಗೆ ಮನವಿ ಮಾಡಿ ಕರೆತಂದಿದ್ದಾರೆ ಎಂದು ಜಗದೀಶ್ ಸ್ಪಷ್ಟನೆ ನೀಡಿದ್ದಾರೆ.
- 50:50 ಅನುಪಾತದಲ್ಲಿ ಹಂಚಿಕೆಗೊಂಡ 1,400 ನಿವೇಶನಗಳ ಜಪ್ತಿ ಮಾಡಬೇಕು: ಸಿಎಂಗೆ ಬಿಜೆಪಿ ಶಾಸಕ ಆಗ್ರಹ
- ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವ
- ಕಲಬುರಗಿಯಲ್ಲಿ ಭೀಕರ ಅಪಘಾತ – ನಾಲ್ವರು ದುರ್ಮರಣ
- ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು
- ಸಿಎಂ ಸಿದ್ದರಾಮಯ್ಯ ಆಪ್ತ ಕೆ.ಮರೀಗೌಡ ಮುಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ
More Stories
ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು
ಸಿಎಂ ಸಿದ್ದರಾಮಯ್ಯ ಆಪ್ತ ಕೆ.ಮರೀಗೌಡ ಮುಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ
ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯಾಗಿ ಒಮರ್ ಅಬ್ದುಲ್ಲಾ ಪ್ರಮಾಣ ವಚನ ಸ್ವೀಕಾರ