ಕರ್ಚೀಪ್ಗೆ ಗ್ಲಿಸರಿನ್ ಹಾಕಿ ಕಣ್ಣೀರು ಹಾಕ್ತೀಯಾ! ಎಂದು ಏಕ ವಚನದಲ್ಲಿ ಗುಬ್ಬಿ ಜೆಡಿಎಸ್ ಶಾಸಕ ಎಸ್ ಆರ್ ಶ್ರೀನಿವಾಸ್ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಹಿಗ್ಗಾಮುಗ್ಗ ವಾಗ್ದಾಳಿ ಮಾಡಿದರು.
ತುಮಕೂರಿನಲ್ಲಿ ಖಾಸಗಿ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಎಸ್ಆರ್ ಶ್ರೀನಿವಾಸ್ ಸಿದ್ದರಾಮಯ್ಯ ಎದುರಿನಲ್ಲೇ ಹೆಚ್ ಡಿಕೆ ಶೇಪ್ ಔಟ್ ಔಟ್ ಮಾಡಿದರು
ಮೊನ್ನೆ ನಡೆದ ಸಭೆ ನನಗಾಗಲಿ ನಮ್ಮ ಕಾರ್ಯಕರ್ತರಿಗಾಗಲೀ ಗೊತ್ತಿಲ್ಲದೆ ನಡೆದ ಸಭೆ ಅದು. ಆ ಸಭೆಗೆ ಮಾನ ಮರ್ಯಾದೆ ಇದ್ರೆ ಯಾರೂ ಹೋಗಬೇಡಿ ಅಂತಾ ಹೇಳಿದ್ದೆ ಎಂದರು.
ನಾನು ಯಾವುದೇ ಕಾರಣಕ್ಕೂ ಪಕ್ಷ ಬಿಡಲ್ಲ ಅಂತಾ ಹೇಳಿದ್ದೆ. ನಿಂಗೆನಾರ ಮಾನ ಮರ್ಯಾದೆ ಇದ್ಯಾ..? ನಾಚಿಕೆ ಆಗಲ್ವಾ ನಿನಗೆ. ನಿಂದು ನಾಲಿಗೆನಾ ಮತ್ತಿನ್ನೇನು..? ಹೊಟ್ಟೆಗೆ ಏನ್ ತಿಂತಿಯಾ.. ಮಾಟ ಮಂತ್ರ ಮಾಡೋ ಕುಟುಂಬ ನಿನ್ನದು ಎಂದು ಏಕ ವಚನದಲ್ಲಿ ಹೆಚ್ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.
ಬಾಯಿ ಬಿಟ್ಟರೆ ಅಸತ್ಯ, ಕರ್ಚೀಪ್ಗೆ ಗ್ಲಿಸರಿನ್ ಹಾಕಿ ಕಣ್ಣೀರು ಹಾಕ್ತಿಯಾ.. ಎಂಥಾ ಆಸಾಮಿಗಳು ಇವರು. 20 ವರ್ಷ ಪಕ್ಷ ಕಟ್ಟಿದ್ದ ನನ್ನ ಆಚೆಗೆ ಹಾಕ್ತಿಯಾ.. ಗಣಿ ದುಡ್ಡು ಬಂತು ಅಂತೇಳಿ ಯಾರನ್ನೋ ಕರೆ ತಂದ್ಯಲ್ಲ. ನಿನಗೆ ಮಾನಮರ್ಯಾದೆ ಇದೆಯಾ..? ಮೊಸಳೆ ಕಣ್ಣೀರಿನ ಮೂಲಕ ಜನರನ್ನು ತಲುಪಲು ಆಗಲ್ಲ. ಮೊಸಳೆ ಕಣ್ಣೀರು ಹಾಕಿದ್ರೆ ಯಾರು ನಂಬುತ್ತಾರೆ..? ಜನರಿಗೆ ನೀಡಿದ ಕಾರ್ಯಕ್ರಮಗಳ ಮೂಲಕ ಜನರ ಬಳಿ ಹೋಗಬೇಕು. ಮುಂದೆ ನಮಗೆ ದಿಕ್ಕಿಲ್ಲ, ಇವರೇ ನಮಗೆ ದಿಕ್ಕು, ನನಗೆ ಯಾರೂ ದಿಕ್ಕಿಲ್ಲ. ಕಾಂಗ್ರೆಸ್ನವರೇ ಈಗ ನನಗೆ ದಿಕ್ಕು.
ಸಿದ್ದರಾಮಣ್ಣ ಜೊತೆಯಲ್ಲಿ ಕರಕೊಂಡು ಹೋದರೆ ಅವರ ಜೊತೆ ಹೋಗ್ತೇನೆ. ನಾನು ದೇವೇಗೌಡರ ಕತ್ತು ಕೊಯ್ದೆ ಅಂತಾರೆ ಕುಮಾರಸ್ವಾಮಿ. ಅಲ್ಲಿ ಶಿವನಂಜಪ್ಪಗೆ ಟಿಕೆಟ್ ಕೊಟ್ಟು, ನಂಗೆ ಇಂಡಿಪೆಂಡೆಂಟ್ ಆಗಿ ನಿಂತ್ಕೊಳ್ಳಿ ಅಂದೋರು ಯಾರು..? ಹಾಗಾದ್ರೆ ಶಿವನಂಜಪ್ಪಗೆ ಕತ್ತುಕೊಯ್ದಿದ್ದು ಯಾರು.? ಎಂದು ಪ್ರಶ್ನೆ ಮಾಡಿದರು.
ಜನರ ಸಮಸ್ಯೆಗಳಿಗಿಂತ ಟಿವಿ ಚಾನಲ್ ಗಳಿಗೆ ಗಂಡ ಹೆಂಡ್ತಿ ಜಗಳಗಳ ಬಗ್ಗೆಯೇ ಹೆಚ್ಚು ಆಸಕ್ತಿ: ಸಿಎಂ ವ್ಯಂಗ್ಯ ಫೇಕ್ ನ್ಯೂಸ್… Read More
ಹಾಸನ: 10 ವರ್ಷದ ಬಾಲಕನೊಬ್ಬ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ಹಾಸನದ ಅಲೂರು ತಾಲೂಕಿನ ಚಿನ್ನಪುರದಲ್ಲಿ ನಡೆದಿದೆ. ಮೃತ ಬಾಲಕ ಸಚಿನ್… Read More
ಮೈಸೂರು: ಶುಕ್ರವಾರ ( 20-09-2024 ) ರಾತ್ರಿ ದಸರಾ ಗಜಪಡೆಯ ಆನೆ ಧನಂಜಯ ಮತ್ತೊಂದು ಆನೆ ಕಂಜನ್ ಮೇಲೆ ಏಕಾಏಕಿ… Read More
ಮೈಸೂರು: ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದ್ದು, ದೇಶದ ಜಿ ಡಿಪಿ… Read More
ಬೆಂಗಳೂರು : BMTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ,ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ… Read More
ಮಂಗಳೂರು : ಕಾಮಗಾರಿಯ ಬಿಲ್ ಪಾವತಿಗಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲೋಕಾಯುಕ್ತ… Read More
This website uses cookies.
Leave a Comment