ವಿವಿಧ ಬೇಡಿಕೆಗಳ ಈಡೇರಿಕೆಗೆ ಪಟ್ಟು ಹಿಡಿದಿರುವ ಖಾಸಗಿ ಸಾರಿಗೆ ಒಕ್ಕೂಟವು ಬೆಂಗಳೂರು ಬಂದ್ಗೆ ಕರೆ ನೀಡಿದೆ. ಈ ನಡುವೆ ಹಲವು ಕಡೆಗಳಲ್ಲಿ ಪ್ರತಿಭಟನೆ ಕಾವು ಜೋರಾಗಿದ್ದು, ಪೋಲಿಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯಿಂದಾಗಿ ರಾಜ್ಯದ ಸಾವಿರಾರು ಚಾಲಕರ ಪರಿಸ್ಥಿತಿಯು ಹೀನಾಯ ಹಂತಕ್ಕೆ ತಲುಪಿದ್ದು, ಹಣಕ್ಕಾಗಿ ಪರದಾಡುವ ಸನ್ನಿವೇಶ ಹೆಚ್ಚುತ್ತಿದೆ.
ಆಟೋ, ಟ್ಯಾಕ್ಸಿ, ಗೂಡ್ಸ್, ಖಾಸಗಿ ಬಸ್ ಸೇರಿ ವಿವಿಧ ಮಾದರಿಯ ಖಾಸಗಿ ಸಾರಿಗೆ ರಾಜ್ಯ ಸರ್ಕಾರಕ್ಕೆ ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಇಂದು ಬೆಂಗಳೂರು ಬಂದ್ಗೆ ಕರೆ ನೀಡಿದೆ.
ಅನೇಕಕಡೆಗಳಲ್ಲಿ ಆಟೋ ಸೇರಿದಂತೆ ಇತರೆ ಖಾಸಗಿ ವಾಹನಗಳು ಸಿಗದೇ ಇರುವುದು ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ, ಕಚೇರಿಗೆ ತೆರಳುವವರಿಗೆ ತೊಂದರೆಯಾಗಿದೆ.
ಖಾಸಗಿ ಸಾರಿಗೆ ಒಕ್ಕೂಟ ಕರೆ ನೀಡಿರುವ ಬೆಂಗಳೂರು ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಹಲವು ಕಡೆಗಳಲ್ಲಿ ದೂರದ ಊರಿನಿಂದ ಬಂದ ಪ್ರಯಾಣಿಕರು ತಮ್ಮ ತಮ್ಮ ಗಮ್ಯ ಸ್ಥಳಗಳಿಗೆ ಹೋಗುವುದಕ್ಕೆ ಪರದಾಡುತ್ತಿದ್ದಾರೆ.
ಈ ನಡುವೆ ರಾಜ್ಯ ಸರ್ಕಾರ ಕೂಡ ಹೆಚ್ಚುವರಿ ಬಸ್ ಸೇವೆಗಳನ್ನು ಕೂಡ ನೀಡಿದೆ. ಇನ್ನೂ ಬಂದ್ ಹಿನ್ನಲೆಯಲ್ಲಿ ಬೆಂಗಳೂರು ನಗರದ ಹಲವು ಕಡೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹಮ್ಮಿಕೊಳ್ಳಲಾಗಿದ್ದು, ಪೊಲೀಸ್ ಸಿಬ್ಬಂದಿಗಳು ಯಾವುದೇ ಅಹಿತಕರ ಘಟನೆ ನಡೆದಂತೆ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಂಡಿದ್ದಾರೆ.
ರಾಮು ಅವರದು ಪ್ರತಿಷ್ಠಿತ ಕುಟುಂಬ. ರವಿ ಅವರ ಮೊದಲ ಹೆಂಡತಿಯ ಮಗ. ಎಳೆ ಪ್ರಾಯದಲ್ಲೇ ಹೆಂಡತಿಯನ್ನು ಕಳೆದುಕೊಂಡ ರಾಮು ಸುಮಿತ್ರಳನ್ನು… Read More
ಕಥೆ ನೀನಾದರೆ ಪದವು ನಾನಾಗುವೆಕವಿತೆ ನೀನಾದರೆ ಭಾವ ನಾನಾಗುವೆನಿನ್ನೊಲವ ಕಡಲಲ್ಲಿ ಮೀನಾಗುವೆಬಾಳಲ್ಲಿ ಸಂತಸದ ಸುಧೆ ತುಂಬುವೆ.// // Join WhatsApp… Read More
ದೇವನೆಂಬ ಭಾವ ಎಲ್ಲರಲ್ಲೂ ಇದ್ದರೂ ಅವನನ್ನು ಕಾಣುವ ದೃಷ್ಟಿಕೋನ ಮಾತ್ರ ಭಿನ್ನ ಭಿನ್ನವಾಗಿವೆ. ಈ ಸುಂದರವಾದ ಪ್ರಕೃತಿಯ ನಡುವೆ ಹಚ್ಚ… Read More
ಆರೋಗ್ಯಕರ ಮಾವಿನಹಣ್ಣು ಮತ್ತು ಓಟ್ಸ್ ಸ್ಮೂದಿ..ಇದು ವೇಟ್ ಲಾಸ್ ಕೂಡ ಮಾಡುತ್ತೆ.ಬನ್ನಿ ಹೇಗ್ ಮಾಡೋದು ಅಂತ ತಿಳಿಸುವೆ. ವಿಧಾನ :… Read More
ರಾಜಕೀಯ ನಾಯಕರೆಂದರೆ ದೇಶದ ಕಾನೂನುಗಳನ್ನು ರಚಿಸಿ ದೇಶವನ್ನು ಮುನ್ನಡೆಸುವವರು. ಜನ ಸಾಮಾನ್ಯರ ನಾಡಿ ಮಿಡಿತ ಅರಿತವರು. ಜನರಿಗೆ ಆದರ್ಶವಾಗಿರಬೇಕಾದವರು. ಇಂದಿನ… Read More
ಬೆಂಗಳೂರಿನಲ್ಲಿ ನಡೆಯುವ ಟೆಕ್ ಶೃಂಗಸಭೆಗೆ ಪೂರ್ವ ಸಿದ್ದತೆ ಬೆಂಗಳೂರು :ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಅಸೋಸಿಯೇಷನ್ (ELCIA) ಜುಲೈ 26 -2024… Read More
This website uses cookies.
Leave a Comment