Main News

3 ತಿಂಗಳು ಪ್ಲಾನ್ ಮಾಡಿ ಭ್ರಷ್ಟರ ಬೇಟೆ ಆಡಿದ್ದೇ ರೋಚಕ ಕತೆ !

ರಾಜ್ಯ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬುಧವಾರ ಬೆಳ್ಳಂಬೆಳಿಗ್ಗೆ ಭ್ರಷ್ಟರ ಎದೆಯಲ್ಲಿ ನಡುಕ ಹುಟ್ಟಿಸುವ ಈ ದಾಳಿಗೆ ಕಳೆದ 3 ತಿಂಗಳಿನಿಂದ ರಹಸ್ಯವಾಗಿ ಕಾರ್ಯ ತಂತ್ರ ರೂಪಿಸಿದ್ದು ತುಂಬಾರೋಚಕವಾಗಿತ್ತು.

15 ಅಧಿಕಾರಿಗಳ ನಿವಾಸಗಳ ಮೇಲೆ  68 ಸ್ಥಳಗಳಲ್ಲಿ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಭ್ರಷ್ಟಾಚಾರ ಎಸಗಿರುವವರ ವಿರುದ್ಧ ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಸಾಕಷ್ಟು ಅಕ್ರಮ ಸಂಪತ್ ಅನ್ನು ಬಗೆದು ತೆಗೆದಿದ್ದಾರೆ

ಈ ಬೇಟೆಯ ಹಿಂದೆ ಸಾಕಷ್ಟು ದಿನಗಳ ಹಿಂದೆ ಮಾಸ್ಟರ್​ ಪ್ಲಾನ್​ ರೂಪಿಸಲಾಗಿತ್ತು. ಅದು ಇಂದು ಅನಾವರಣಗೊಂಡಿದೆ.

ಬುಧವಾರ ಬೆಳಗ್ಗೆ 6 ಗಂಟೆಗೆ ಏಕಕಾಲದಲ್ಲಿ ಒಟ್ಟು 15 ಅಧಿಕಾರಿಗಳ ವಿರುದ್ಧ ರಾಜ್ಯದ 68 ಕಡೆಗಳಲ್ಲಿ 68 ತಂಡಗಳಿಂದ ದಾಳಿ ನಡೆಸಲಾಗಿದೆ.  

ಈ ಯಶಸ್ವಿ​ ದಾಳಿಗೆ 3 ತಿಂಗಳುಗಳಿಂದ ತಂತ್ರ ಹೆಣೆಯಲಾಗಿತ್ತಂತೆ. ದಾಳಿ ನಡೆಸಬೇಕೆಂದಿರುವ ಒಬ್ಬೊಬ್ಬ ಅಧಿಕಾರಗಳ ಜನ್ಮ ಜಾಲಾಡಿದ ಎಸಿಬಿ ಪ್ರತಿಯೊಬ್ಬ ಅಧಿಕಾರಿಯ ಮಾಹಿತಿಯನ್ನು ಇಂಚಿಂಚಾಗಿ ಕಲೆ ಹಾಕಿತ್ತು. ಕೊನೆಯದಾಗಿ 15 ಮಂದಿಯ ಲಿಸ್ಟ್​ ರೆಡಿ ಮಾಡಿ ಬೇಟೆ ಆಡಲು ಮುಹೂರ್ತ ನಿಗದಿ​ ಮಾಡಲಾಗಿತ್ತು.

ಕಳೆದ3 ತಿಂಗಳುಗಳವರೆಗೆ ಈ ಅಧಿಕಾರಿಗಳ ಮಾಹಿತಿ ಕಲೆ ಹಾಕುವುದೇ ದೊಡ್ಡ ಸವಾಲಾಗಿತ್ತು. ಜೊತೆಗೆ ಅದನ್ನು ರಹಸ್ಯವಾಗಿ ಕಾಪಾಡಿಕೊಂಡು ಬರೋದು ಅಷ್ಟೇ ರೋಚಕತೆಯಿಂದ ಕೂಡಿತ್ತು

ಮೇಲಾಧಿಕಾರಿಗಳು ಯಾವುದೇ ಸಂದರ್ಭದಲ್ಲಿ ಮಾಹಿತಿ ಸೋರಿಕೆಯಾಗಬಾರದೆಂದು ಖಡಕ್​ ಮಾಹಿತಿ ನೀಡಿದ್ದರಂತೆ.

ಪ್ರತಿ ಅಧಿಕಾರಿಗೆ ಒಬ್ಬರಿಂದ ಇಬ್ಬರನ್ನು ನೇಮಿಸಿ ಪ್ರತಿನಿತ್ಯ ಮಾಹಿತಿ ಕಲೆ ಹಾಕಲಾಗುತ್ತಿತ್ತು. ಹೀಗೆ ಮಾಹಿತಿ ಕಲೆ ಹಾಕಿದ ನಂತರ ದಾಳಿಗೆ ಸಿದ್ಧತೆ ನಡೆಸಲಾಗಿತ್ತು.

ಇಂದು ಮಧ್ಯರಾತ್ರಿ ನಂತರ 3 ಗಂಟೆಗೆ ಕಚೇರಿಗೆ ಬಂದಿದ್ದ ಅಧಿಕಾರಿಗಳು 4.30 ಕ್ಕೆ ಎಲ್ಲರೂ ಒಟ್ಟಿಗೆ ಕಚೇರಿಗಳಿಂದ ತೆರಳಿದ್ದರು. 6 ಗಂಟೆಗೆ ಏಕಕಾಲಕ್ಕೆ ದಾಳಿ ನಡೆಸಬೇಕೆಂದು ಮೇಲಾಧಿಕಾರಿಗಳು ಗ್ರೀನ್​ಸಿಗ್ನಲ್​ ನೀಡಿದ್ದರಂತೆ. ಆ ಪ್ರಕಾರ ನುಗ್ಗಿದ ಎಸಿಬಿ ಭ್ರಷ್ಟರ ಬೆವರಿಳಿಸಿದೆ. ಅಕ್ರಮ ಆಸ್ತಿ ಸಂಪತ್ ನೋಡಿ ದಾಳಿಗೆ ಹೋಗಿರುವ ತಂಡದ ಅಧಿಕಾರಿಗಳು ಮೂಛೆ೯ ಹೋಗಿದ್ದಾರಂತೆ.

Team Newsnap
Leave a Comment
Share
Published by
Team Newsnap

Recent Posts

ಪ್ರಜ್ವಲ್ ರೇವಣ್ಣನ ಮಾಜಿ ಕಾರು ಚಾಲಕ ‘ಕಾರ್ತಿಕ್’ ನಾಪತ್ತೆ

ಹಾಸನ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ಕುರಿತು ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದ ಮಾಜಿ… Read More

May 2, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 2 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,550 ರೂಪಾಯಿ ದಾಖಲಾಗಿದೆ. 24… Read More

May 2, 2024

ಪಿಎಚ್ಡಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಅನುಮಾನಾಸ್ಪದ ಸಾವು

ಬೆಂಗಳೂರು: ವಿದ್ಯಾರ್ಥಿಯೊಬ್ಬ ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ಪಿಹೆಚ್‌ಡಿ (PhD) ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪವಾಗಿ ಮೃತಪಟ್ಟಿದ್ದಾನೆ. ರಂಗನಾಥ್ ನಾಯಕ್ (27)… Read More

May 2, 2024

ಪ್ರೀತಿಯೆಂದರೆ…. ಇಷ್ಟೇನಾ

(ಬ್ಯಾಂಕರ್ಸ್ ಡೈರಿ) -ಡಾ. ಶುಭಶ್ರೀಪ್ರಸಾದ್ ಮಂಡ್ಯ ಅಂದೂ ಎಂದಿನಂತೆಯೇ ಬ್ಯಾಂಕಿನಲ್ಲಿ ವಿಪರೀತ ರಶ್ಶು. ಆ ಹುಡುಗಿ ಹೊಸ ಖಾತೆ ತೆರೆಯಲು… Read More

May 1, 2024

2024ರ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟ

ನವದೆಹಲಿ : ಟೀಂ ಇಂಡಿಯಾ ಮುಂಬರುವ ಟಿ20 ವಿಶ್ವಕಪ್‍ಗಾಗಿ 15 ಮಂದಿ ಆಟಗಾರರ ತಂಡವನ್ನು ಪ್ರಕಟಿಸಿದೆ. ಇಂದು ಭಾರತೀಯ ಕ್ರಿಕೆಟ್… Read More

April 30, 2024

ಅಧಿಕೃತವಾಗಿ ಪ್ರಜ್ವಲ್ ರೇವಣ್ಣ ಜೆಡಿಎಸ್ ಪಕ್ಷದಿಂದ ಅಮಾನತು

ಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಬಳಿಕ ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣರನ್ನು ಅಮಾನತು ಮಾಡಿ ಜೆಡಿಎಸ್… Read More

April 30, 2024