ರಾಜ್ಯ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬುಧವಾರ ಬೆಳ್ಳಂಬೆಳಿಗ್ಗೆ ಭ್ರಷ್ಟರ ಎದೆಯಲ್ಲಿ ನಡುಕ ಹುಟ್ಟಿಸುವ ಈ ದಾಳಿಗೆ ಕಳೆದ 3 ತಿಂಗಳಿನಿಂದ ರಹಸ್ಯವಾಗಿ ಕಾರ್ಯ ತಂತ್ರ ರೂಪಿಸಿದ್ದು ತುಂಬಾರೋಚಕವಾಗಿತ್ತು.
15 ಅಧಿಕಾರಿಗಳ ನಿವಾಸಗಳ ಮೇಲೆ 68 ಸ್ಥಳಗಳಲ್ಲಿ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಭ್ರಷ್ಟಾಚಾರ ಎಸಗಿರುವವರ ವಿರುದ್ಧ ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಸಾಕಷ್ಟು ಅಕ್ರಮ ಸಂಪತ್ ಅನ್ನು ಬಗೆದು ತೆಗೆದಿದ್ದಾರೆ
ಈ ಬೇಟೆಯ ಹಿಂದೆ ಸಾಕಷ್ಟು ದಿನಗಳ ಹಿಂದೆ ಮಾಸ್ಟರ್ ಪ್ಲಾನ್ ರೂಪಿಸಲಾಗಿತ್ತು. ಅದು ಇಂದು ಅನಾವರಣಗೊಂಡಿದೆ.
ಬುಧವಾರ ಬೆಳಗ್ಗೆ 6 ಗಂಟೆಗೆ ಏಕಕಾಲದಲ್ಲಿ ಒಟ್ಟು 15 ಅಧಿಕಾರಿಗಳ ವಿರುದ್ಧ ರಾಜ್ಯದ 68 ಕಡೆಗಳಲ್ಲಿ 68 ತಂಡಗಳಿಂದ ದಾಳಿ ನಡೆಸಲಾಗಿದೆ.
ಈ ಯಶಸ್ವಿ ದಾಳಿಗೆ 3 ತಿಂಗಳುಗಳಿಂದ ತಂತ್ರ ಹೆಣೆಯಲಾಗಿತ್ತಂತೆ. ದಾಳಿ ನಡೆಸಬೇಕೆಂದಿರುವ ಒಬ್ಬೊಬ್ಬ ಅಧಿಕಾರಗಳ ಜನ್ಮ ಜಾಲಾಡಿದ ಎಸಿಬಿ ಪ್ರತಿಯೊಬ್ಬ ಅಧಿಕಾರಿಯ ಮಾಹಿತಿಯನ್ನು ಇಂಚಿಂಚಾಗಿ ಕಲೆ ಹಾಕಿತ್ತು. ಕೊನೆಯದಾಗಿ 15 ಮಂದಿಯ ಲಿಸ್ಟ್ ರೆಡಿ ಮಾಡಿ ಬೇಟೆ ಆಡಲು ಮುಹೂರ್ತ ನಿಗದಿ ಮಾಡಲಾಗಿತ್ತು.
ಕಳೆದ3 ತಿಂಗಳುಗಳವರೆಗೆ ಈ ಅಧಿಕಾರಿಗಳ ಮಾಹಿತಿ ಕಲೆ ಹಾಕುವುದೇ ದೊಡ್ಡ ಸವಾಲಾಗಿತ್ತು. ಜೊತೆಗೆ ಅದನ್ನು ರಹಸ್ಯವಾಗಿ ಕಾಪಾಡಿಕೊಂಡು ಬರೋದು ಅಷ್ಟೇ ರೋಚಕತೆಯಿಂದ ಕೂಡಿತ್ತು
ಮೇಲಾಧಿಕಾರಿಗಳು ಯಾವುದೇ ಸಂದರ್ಭದಲ್ಲಿ ಮಾಹಿತಿ ಸೋರಿಕೆಯಾಗಬಾರದೆಂದು ಖಡಕ್ ಮಾಹಿತಿ ನೀಡಿದ್ದರಂತೆ.
ಪ್ರತಿ ಅಧಿಕಾರಿಗೆ ಒಬ್ಬರಿಂದ ಇಬ್ಬರನ್ನು ನೇಮಿಸಿ ಪ್ರತಿನಿತ್ಯ ಮಾಹಿತಿ ಕಲೆ ಹಾಕಲಾಗುತ್ತಿತ್ತು. ಹೀಗೆ ಮಾಹಿತಿ ಕಲೆ ಹಾಕಿದ ನಂತರ ದಾಳಿಗೆ ಸಿದ್ಧತೆ ನಡೆಸಲಾಗಿತ್ತು.
ಇಂದು ಮಧ್ಯರಾತ್ರಿ ನಂತರ 3 ಗಂಟೆಗೆ ಕಚೇರಿಗೆ ಬಂದಿದ್ದ ಅಧಿಕಾರಿಗಳು 4.30 ಕ್ಕೆ ಎಲ್ಲರೂ ಒಟ್ಟಿಗೆ ಕಚೇರಿಗಳಿಂದ ತೆರಳಿದ್ದರು. 6 ಗಂಟೆಗೆ ಏಕಕಾಲಕ್ಕೆ ದಾಳಿ ನಡೆಸಬೇಕೆಂದು ಮೇಲಾಧಿಕಾರಿಗಳು ಗ್ರೀನ್ಸಿಗ್ನಲ್ ನೀಡಿದ್ದರಂತೆ. ಆ ಪ್ರಕಾರ ನುಗ್ಗಿದ ಎಸಿಬಿ ಭ್ರಷ್ಟರ ಬೆವರಿಳಿಸಿದೆ. ಅಕ್ರಮ ಆಸ್ತಿ ಸಂಪತ್ ನೋಡಿ ದಾಳಿಗೆ ಹೋಗಿರುವ ತಂಡದ ಅಧಿಕಾರಿಗಳು ಮೂಛೆ೯ ಹೋಗಿದ್ದಾರಂತೆ.
ಹಾಸನ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ಕುರಿತು ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದ ಮಾಜಿ… Read More
ನವದೆಹಲಿ ,ಮೇ 2 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,550 ರೂಪಾಯಿ ದಾಖಲಾಗಿದೆ. 24… Read More
ಬೆಂಗಳೂರು: ವಿದ್ಯಾರ್ಥಿಯೊಬ್ಬ ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ಪಿಹೆಚ್ಡಿ (PhD) ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪವಾಗಿ ಮೃತಪಟ್ಟಿದ್ದಾನೆ. ರಂಗನಾಥ್ ನಾಯಕ್ (27)… Read More
(ಬ್ಯಾಂಕರ್ಸ್ ಡೈರಿ) -ಡಾ. ಶುಭಶ್ರೀಪ್ರಸಾದ್ ಮಂಡ್ಯ ಅಂದೂ ಎಂದಿನಂತೆಯೇ ಬ್ಯಾಂಕಿನಲ್ಲಿ ವಿಪರೀತ ರಶ್ಶು. ಆ ಹುಡುಗಿ ಹೊಸ ಖಾತೆ ತೆರೆಯಲು… Read More
ನವದೆಹಲಿ : ಟೀಂ ಇಂಡಿಯಾ ಮುಂಬರುವ ಟಿ20 ವಿಶ್ವಕಪ್ಗಾಗಿ 15 ಮಂದಿ ಆಟಗಾರರ ತಂಡವನ್ನು ಪ್ರಕಟಿಸಿದೆ. ಇಂದು ಭಾರತೀಯ ಕ್ರಿಕೆಟ್… Read More
ಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಬಳಿಕ ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣರನ್ನು ಅಮಾನತು ಮಾಡಿ ಜೆಡಿಎಸ್… Read More
This website uses cookies.
Leave a Comment