March 14, 2026

Newsnap Kannada

The World at your finger tips!

kolar, lokayukta , SDA

20 ಸಾವಿರ ಲಂಚ ಪಡೆಯುವಾಗ PDO ಅಧಿಕಾರಿ ಲೋಕಾಯುಕ್ತ ಬಲೆಗೆ

Spread the love

ಬೆಂಗಳೂರು: ನೆಲಮಂಗಲ ತಾಲೂಕಿನಲ್ಲಿ ಟಿ.ಬೇಗೂರು ಗ್ರಾಮ ಪಂಚಾಯಿತಿ PDO ಅಧಿಕಾರಿ ಶೋಭಾ ರಾಣಿ 20 ಸಾವಿರ ರೂ. ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ತೊರೆಕೆಂಪೋಹಳ್ಳಿ ಗ್ರಾಮದ ನಿವಾಸಿ ರಮೇಶ್ ತಮ್ಮ ಹೆಂಡತಿಯ ಹೆಸರಿಗೆ ತಮ್ಮ ಖಾಲಿ ನಿವೇಶನದ ಖಾತಾ ವರ್ಗಾವಣೆ ಮಾಡಿಸಲು ಅರ್ಜಿ ಸಲ್ಲಿಸಿದ್ದರು.

ಈ ಪ್ರಕ್ರಿಯೆಗೆ ಶೋಭಾ ರಾಣಿ ಮಧ್ಯವರ್ತಿ ರುದ್ರಪ್ಪ ಮೂಲಕ 20 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಳು. ರಮೇಶ್ ಅವರನ್ನು ರುದ್ರಪ್ಪ ಪಂಚಾಯಿತಿ ಕಚೇರಿಗೆ ಕರೆತಂದಿದ್ದು, ಲಂಚದ ಹಣ ಹಸ್ತಾಂತರಿಸುವ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಎಸ್ಪಿ ಪವನ್ ನಲ್ಲೂರು ನೇತೃತ್ವದ ತಂಡ ದಾಳಿ ನಡೆಸಿದೆ.ಇದನ್ನು ಓದಿ –ಬಸ್ -ಟಿಪ್ಪರ್ ನಡುವೆ ಓವರ್ ಟೇಕ್ : ಮಹಿಳೆ ಸಾವು

ಶೋಭಾ ರಾಣಿ ಅವರಿಂದ ಲಂಚದ ಹಣ ವಶಪಡಿಸಿಕೊಂಡು, ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಸ್ಥಳೀಯ ಅಧಿಕಾರಿಗಳು ಈ ಕುರಿತು ಹೆಚ್ಚಿನ ಮಾಹಿತಿ ನೀಡಿದ್ದು, ತನಿಖೆ ಮುಂದುವರಿಯುತ್ತಿದೆ.

error: Content is protected !!