ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ 5 ನೇ ಜೆ ಎಂ ಎಫ್ ಸಿ ನ್ಯಾಯಾಲಯ ದಿಂದ ಜಾಮೀನು ರಹಿತ ಬಂಧನದ ವಾರೆಂಟ್ ಪಡೆದಿದ್ದ ಹಿರಿಯ ನಟಿ ಪದ್ಮಜಾ ರಾವ್ ಶುಕ್ರವಾರ ಮಂಗಳೂರು ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದುಕೊಂಡರು.
ನಟಿ ಪದ್ಮಜಾ ರಾವ್ ನ್ಯಾಯಾಲಯಕ್ಕೆ ಬಾಂಡ್ ನೀಡಿ ಜಾಮೀನು ಪಡೆದರು.
ಜಾಮೀನು ಪಡೆದುಕೊಂಡ ನಂತರ ಸುದ್ದಿಗಾರರ ಜೊತೆ ಮಾತನಾಡಿದ
ನಟಿ ಪದ್ಮಜಾ ರಾವ್ ನನಗೆ ನಮ್ಮ ಕಾನೂನು, ನ್ಯಾಯಾಲಯದ ಮೇಲೆ ಸಂಪೂರ್ಣ ಭರವಸೆ ಇದೆ,
ನನ್ನ ಮೇಲೆ ನನಗೆ ಪೂರ್ಣ ಭರವಸೆ ಇದೆ, ಈ ಪ್ರಕರಣದಲ್ಲಿ ನಾನು ಗೆದ್ದೆ ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ ಎಂದರು.
ನೀವೆಲ್ಲಾ ಕಾದು ನೋಡ ಬೇಕು. ಈಗ ಏನು ಹೇಳಲು ಆಗುವುದಿಲ್ಲ ಪ್ರಕರಣ ನ್ಯಾಯಾಲಯದಲ್ಲಿದೆ. ಈ ಪ್ರಕರಣದಲ್ಲಿ ಸಂಪೂರ್ಣ ವಾಗಿ ಗೆದ್ದೇ ಗೆಲ್ಲುತ್ತೇನೆ ಎಂದರು.