Trending

ಸ್ವಂತ ಮನೆ ನಮ್ಮ ಹಕ್ಕು, ಹೋರಾಟ ಸಮಿತಿಯಿಂದ ಅ. 2 ರಂದು ಮಂಡ್ಯದಲ್ಲಿ ಅರೆಬೆತ್ತಲೆ ಪ್ರತಿಭಟನೆ

ಮಂಡ್ಯ ತಾಲೂಕಿನ ಹಳೇ ಬೂದನೂರು ಗ್ರಾಮದ ಸ್ವಂತಮನೆ ನಮ್ಮ ಹಕ್ಕು ಹೋರಾಟ ಸಮಿತಿಯು ನಿವೇಶನ ರಹಿತರ ಸಮಸ್ಯೆ ಬಗೆಹರಿಸಲು ಅಕ್ಟೋಬರ್ 2 ರಂದು ರಾಷ್ಟ್ರಪಿತ ಮಹಾತ್ಮಗಾಂಧಿ ಜಯಂತಿ ದಿನಾಚರಣೆ ದಿನ ವಸತಿ ರಹಿತರೊಡಗೂಡಿ ಅರೆಬೆತ್ತಲೆ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧಾರಿಸಿದೆ.

ಸಮಿತಿಯ ಸಂಚಾಲ ಬಿ ಕೆ ಸತೀಶ್ ಈ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಈ ಕುರಿತಾದ ಹೋರಾಟಕ್ಕೆ ಸಂಬಂಧಿಸಿದಂತೆ ಕಳೆದ 5 ವರ್ಷಗಳಿಂದ ಮಂಡ್ಯ ತಾಲ್ಲೂಕು ಬೂದನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ನಿವೇಶನರಹಿತ ಕುಟುಂಬಗಳು ಆಶ್ರಯ ಯೋಜನೆಗೆ ಗುರುತಿಸಿರುವ ಸರ್ಕಾರಿ ಭೂಮಿ ದೊರಕಿಸಿಕೊಡಲು ಹಲವು ಹೋರಾಟ ನಡೆಸಿಕೊಂಡು ಮನವಿ ನೀಡಿದರೂ ಯಾವುದೇ ಫಲ ಕೊಟ್ಟಿಲ್ಲ.

ತಾವು ಸರ್ಕಾರಿ ಭೂಮಿಯ ಒತ್ತುವರಿ ತೆರವುಗೊಳಿಸಲು ಆದೇಶ ಮಾಡಿರುವುದು ಶ್ಲಾಘನೀಯ. ಸದ್ಯ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ತಹಶೀಲ್ದಾರ್ ಸುಮೊಟೋ ಪ್ರಕರಣ ದಾಖಲಿಸಿ ನಿವೇಶನಕ್ಕೆ ಗುರುತಿಸಿರುವ ಭೂಮಿ ವಿವಾದ ಕಂಗಟ್ಟಾಗಿದೆ.

ಈ ನಿವೇಶನರಹಿತರಿಗೆ ಮಾನ್ಯ ಸಂಸದರು, ಶಾಸಕರ ಒತ್ತಾಸೆಯಿಂದ ಒಂದೇ ಬಾರಿಗೆ ಅಮೃತ್ ವಸತಿ ಯೋಜನೆಯಲ್ಲಿ 130 ಮನೆ ನಿರ್ಮಿಸಲು ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳು ವಸತಿ ಸಚಿವರಿಗೆ ಸೂಚಿಸಿರುತ್ತಾರೆ.

ಆದರೂ ನಿವೇಶನ ಹಂಚಿಕೆ ಕೂಡ ಅರಂಭವಾಗಿಲ್ಲ. ಸರ್ಕಾರಿ ಭೂಮಿಯಲ್ಲಿನ ಬೆಳೆ ಕಟಾವು ಕಾರ್ಯ ಮುಗಿದಿದೆ. ಕಾನೂನು ಪ್ರಕ್ರಿಯೆ ಕಾರಣದಿಂದ ಭೂಮಿ ಗುರುತಿಸುವಿಕೆ ತಡವಾಗಿ ಒತ್ತುವರಿ ಭೂಮಿಯಲ್ಲಿ ಬೆಳೆ ಹಾಕುವ ಕಾರ್ಯ ಅರಂಭವಾಗುತ್ತಿದೆ. ಪರಿಣಾಮ ಮತ್ತೆ ಭೂಮಿ ಗುರುತಿಸುವಿಕೆ ಕಾರ್ಯ ವಿಳಂಬವಾಗಲಿದೆ. ತಾವು ಮಧ್ಯ ಪ್ರವೇಶಿಸಿ ವಾರದೊಳಗೆ ಭೂಮಿ ವಿವಾದ ಇತ್ಯರ್ಥಪಡಿಸಲು ಈ ಮೂಲಕ ಆಗ್ರಹಪಡಿಸುತ್ತೇವೆ.

ಕೆಲವು ಪ್ರಮುಖ ಬೇಡಿಕೆ ಇಟ್ಟು ಕೊಂಡು ಸಮಿತಿಯು ಅಕ್ಟೋಬರ್ 2 ರಂದು ರಾಷ್ಟ್ರಪಿತ ಮಹಾತ್ಮಗಾಂಧಿ ಜಯಂತಿ ದಿನಾಚರಣೆ ದಿನ ವಸತಿ ರಹಿತರೊಡಗೂಡಿ ಅರೆಬೆತ್ತಲೆ ಪ್ರತಿಭಟನೆ ಹಮ್ಮಿಕೊಳ್ಳುತ್ತಿರುವು ದಾಗಿ ಸತೀಶ್ ಹೇಳಿದ್ದಾರೆ.

ಬೇಡಿಕೆಗಳು:

  1. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಾರದೊಳಗೆ ಸರ್ಕಾರಿ ಭೂಮಿ ವಿವಾದ ಬಗೆಹರಿಸಬೇಕು.
  2. ಈಗಾಗಲೇ ಉಪ ವಿಭಾಗಾಧಿಕಾರಿ, ತಹಶೀಲ್ದಾರ್, ಭೂಮಾಪಕರ ನೇತೃತ್ವದಲ್ಲಿ ಗುರುತಿಸಿರುವ ನಿವೇಶನ ಭೂಮಿಯ ಅಳತೆ ಹದ್ದಬಸ್ತ್ ಮಾಡಿ ನಿವೇಶನರಹಿತರಿಗೆ ಕಾಯ್ದಿರಿಸಬೇಕು.
  3. ನಿವೇಶನರಹಿತರ ಸರ್ಕಾರಿ ಭೂಮಿ ಪ್ರಕರಣವನ್ನು ವಿಶೇಷ ಪ್ರಕರಣವಾಗಿ ಪರಿಗಣಿಸಿ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಬೇಕು.
  4. ಈ ಹಿಂದೆ ಗರೀಭಿ ಹಠಾವೋ ಅಲ್ಲಿ ಭೂಸ್ವಾಧೀನಗೊಂಡು ಉಳಿಕೆ ಇರುವ 2 ಎಕರೆ ಭೂಮಿಯ ಅಳತೆ, ಹದ್ದುಬಸ್ತ್ ಮಾಡಿ ವಿತರಣೆ ಆದೇಶ ನೀಡಬೇಕು.
Team Newsnap
Leave a Comment
Share
Published by
Team Newsnap

Recent Posts

ಹೆಚ್‌.ಡಿ ರೇವಣ್ಣಗೆ ಹೊಟ್ಟೆ ಉರಿ, ಎದೆನೋವು: ದಿಢೀರ್‌ ಆಸ್ಪತ್ರೆಗೆ ಶಿಫ್ಟ್‌!

ಹೆಚ್‌.ಡಿ ರೇವಣ್ಣಗೆ ಮಧ್ಯಾಹ್ನದಿಂದ ಹೊಟ್ಟೆ ಉರಿ, ಎದೆನೋವು ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್‌ ಟೆಸ್ಟ್ ಮಾಡಿಸಿದ್ದ ಎಸ್‌ಐಟಿ ಅಧಿಕಾರಿಗಳು ಎದೆ ಉರಿ… Read More

May 7, 2024

ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಇಬ್ಬರು ಸರ್ಕಾರಿ ನೌಕರರು ಸಾವು

ಬೆಂಗಳೂರು : ಸೋಮವಾರ ಬಾಗಲಕೋಟೆ ಮತ್ತು ಬೀದರ್ ಜಿಲ್ಲೆಗಳಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಸರ್ಕಾರಿ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಸಹಾಯಕ… Read More

May 7, 2024

Lok Sabha Election 2024 : ಕರ್ನಾಟಕದಲ್ಲಿ ಶೇ. 9.45% ರಷ್ಟು ಮತದಾನ

ನವದೆಹಲಿ : ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನದಲ್ಲಿ ಶೇ. 9.45% ರಷ್ಟು ಮತದಾನವಾಗಿದೆ ಎಂದು ಎಂದು ಚುನಾವಣಾ… Read More

May 7, 2024

ಪ್ರಜ್ವಲ್‌ ಮಾತ್ರವಲ್ಲ , ತುಂಬ ರಾಜಕಾರಣಿಗಳ ವಿಡಿಯೋಗಳು ಸದ್ಯದಲ್ಲೇ ಹೊರಬರಲಿದೆ : ಕೆ ಎಸ್‌ ಈಶ್ವರಪ್ಪ

ಶಿವಮೊಗ್ಗ : ರಾಷ್ಟ್ರ ಮಟ್ಟದಲ್ಲಿ ಹಾಸನದ ಹಾಲಿ ಸಂಸದ ಪ್ರಜ್ವಲ್‌ ರೇವಣ್ಣ ಪೆನ್‌ ಡ್ರೈ ಪ್ರಕರಣ ಸದ್ದು ಮಾಡುತ್ತಿದ್ದು, ಪ್ರಜ್ವಲ್‌… Read More

May 7, 2024

ರಾಜ್ಯ ಸರ್ಕಾರವೇ ಪ್ರಜ್ವಲ್‌ ರೇವಣ್ಣ ವಿದೇಶಕ್ಕೆ ಹಾರಲು ಹೊಣೆ : ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಮೊದಲ ಬಾರಿಗೆ ಪ್ರಜ್ವಲ್ ರೇವಣ್ಣ (Prajwal Revanna) ವಿಡಿಯೋ ಪ್ರಕರಣಕ್ಕೆ… Read More

May 7, 2024

ಮಂಡ್ಯ : ಭಾರಿ ಮಳೆಗೆ ಕಾರಿನ ಮೇಲೆ ಮರ ಬಿದ್ದು ವ್ಯಕ್ತಿ ದುರ್ಮರಣ

ಮಂಡ್ಯ :ನೆನ್ನೆ ಮಳೆಯಿಂದಾಗಿ ಮರವೊಂದು ಕಾರಿನ ಮೇಲೆ ಬಿದ್ದ ಪರಿಣಾಮ ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಡ್ಯ ನಗರದ ಜನರಲ್… Read More

May 7, 2024