ವೃದ್ಧರಿಗೂ ಇನ್ನು ಮುಂದೆ ಬಿಸಿಯೂಟ ಯೋಜನೆ

Team Newsnap
1 Min Read

ಆಹಾರಕ್ಕೆ ತೊಂದರೆ ಅನುಭವಿಸುತ್ತಿರುವ ವಯೋವೃದ್ಧರಿಗಾಗಿ ( ಹಿರಿಯ ನಾಗರೀಕರಿಗೆ) ಕೇಂದ್ರ ಸರ್ಕಾರ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೆ ತರಲು ಮುಂದಾಗಿದೆ.

ವೃದ್ಧರ ಕಲ್ಯಾಣಕ್ಕಾಗಿ ಕೆಲಸ ಮಾಡುವ ಸ್ಟಾರ್ಟಪ್, ವೃದ್ಧರಿಗೆ ಸಹಾಯ ಮಾಡಲು ಸಾಧ್ಯವಾಗುವಂತೆ ಸ್ವಸಹಾಯ ಗುಂಪುಗಳ ಮೂಲಕ ವೃದ್ಧರಿಗೆ ಬಿಸಿಯೂಟ ಯೋಜನೆ ಜಾರಿ ಮಾಡಲು ಕೇಂದ್ರದ ಚಿಂತನೆ ಇದೆ.

ಹಿರಿಯ ನಾಗರಿಕರ ಕಲ್ಯಾಣ ನಿಧಿಯ ಅಂತರ್ ಸಚಿವಾಲಯ ಸಮಿತಿ ಫೆಬ್ರವರಿ 4 ರಂದು ಈ ಯೋಜನೆಗೆ ಅನುಮೋದನೆ ನೀಡಿದೆ.

ಅನಾಥರು ಮತ್ತು ಅಪೌಷ್ಟಿಕತೆಯಿಂದ ಬಳಲುವ ಹಾಗೂ ಯಾವುದೇ ವೃದ್ಧಾಶ್ರಮದಲ್ಲಿ ಆಶ್ರಯ ಪಡೆಯದ ವೃದ್ಧರನ್ನು ಗುರುತಿಸಿ ಪ್ರತಿದಿನ ಮಧ್ಯಾಹ್ನ ಬಿಸಿಯಾದ ಊಟ ನೀಡುವುದು ಯೋಜನೆಯ ಮುಖ್ಯ ಅಂಶವಾಗಿದೆ.

Share This Article
Leave a comment