March 14, 2026

Newsnap Kannada

The World at your finger tips!

krs full

ನವೆಂಬರ್ 2 ರಂದು ಕೆ.ಆರ್.ಎಸ್ ನಲ್ಲಿ ಸಿಎಂ ಬೊಮ್ಮಾಯಿ ಬಾಗಿನ ಅರ್ಪಣೆ

Spread the love

ಕೆ. ಆರ್.ಎಸ್ ಸಂಪೂರ್ಣ ಭರ್ತಿ ಹಿನ್ನೆಲೆಯಲ್ಲಿ ನವೆಂಬರ್ 2 ರಂದು ಕಾವೇರಿಗೆ ಸಿಎಂ ಬಸವರಾಜ್​ ಬೊಮ್ಮಾಯಿ ಬಾಗಿನ ಅರ್ಪಿಸಲಿದ್ದಾರೆ. ಮುಖ್ಯಮಂತ್ರಿಯಾದ ವರ್ಷವೇ ಕಾವೇರಿ ಹಾಗೂ ಕಪಿಲೆಗೆ ಸಿಎಂ ಬೊಮ್ಮಾಯಿ ಬಾಗಿನ ಅರ್ಪಿಸಲಿದ್ದಾರೆ.

ಕಬಿನಿಗೆ ಮೊದಲು ಬಾಗೀನ

ಕಾವೇರಿಗೂ ಮುನ್ನ ಮೈಸೂರಿನ ಹೆಚ್.ಡಿ. ಕೋಟೆಯಲ್ಲಿರುವ ಕಬಿನಿ‌ ಡ್ಯಾಂಗೆ ಬೊಮ್ಮಾಯಿ ಬಾಗಿನ ಅರ್ಪಣೆ ಮಾಡಲಿದ್ದಾರೆ. ನ. 2 ರ ಮಂಗಳವಾರ ಕಬಿನಿ ಡ್ಯಾಂಗೆ ಬಾಗಿನ ಅರ್ಪಿಸಿ ಬಳಿಕ ಬೆಳಗ್ಗೆ 11.35ಕ್ಕೆ ಹೆಲಿಕಾಪ್ಟರ್ ಮೂಲಕ ಕೆಆರ್ ಸಾಗರದ ಹೆಲಿಪ್ಯಾಡ್ ಗೆ ಬಂದಿಳಿಯಲಿದ್ದಾರೆ.

ಕಾವೇರಿ ಮಾತೆಗೆ ಬಾಗಿನ ಅರ್ಪಣೆ ಮಾಡಿ ಮಧ್ಯಾಹ್ನ 1.15ಕ್ಕೆ ಹೆಲಿಕಾಪ್ಟರ್ ಮೂಲಕ ಬೆಂಗಳೂರಿನತ್ತ ಪ್ರಯಾಣ ಬೆಳೆಸಲಿದ್ದಾರೆ.

ಜಲಾಶಯದ ಇಂದಿನ ನೀರಿನ ಮಟ್ಟ

ಗರಿಷ್ಠ ಮಟ್ಟ 124.80 ಅಡಿ
ಜಲಾಶಯದ ಇಂದಿನ ನೀರಿನ ಮಟ್ಟ 124.80 ಅಡಿಗಳು
ಇಂದಿನ ಒಳಹರಿವಿನ ಪ್ರಮಾಣ 6447 ಕ್ಯೂಸೆಕ್
ಇಂದಿನ ಹೊರ ಹರಿವಿನ ಪ್ರಮಾಣ 4859 ಕ್ಯೂಸೆಕ್

error: Content is protected !!