ಯಾರೂ ಸತ್ಯಹರಿಶ್ಚಂದ್ರ ಅಲ್ಲ – ಕುಮಾರಸ್ವಾಮಿ

Team Newsnap
1 Min Read

ಇಲ್ಲಿ ಯಾರೂ ಸತ್ಯಹರಿಶ್ಚಂದ್ರ ಅಲ್ಲಾ. ನಾನು ಒಮ್ಮೆ ತಪ್ಪು ಮಾಡಿದ್ದೇನೆ ಎಂದು ಧೈರ್ಯವಾಗಿಯೇ ಹೇಳಿದ್ದೇನೆ ಅಂತ ಮಾಜಿ ಸಿಎಂ ಹೆಚ್​​.ಡಿ ಕುಮಾರಸ್ವಾಮಿ ಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ‌ ಕುಮಾರಸ್ವಾಮಿ
ಸದನದಲ್ಲಿ ಅನಗತ್ಯ ಚರ್ಚೆಗಳೇ ನಡೆಯುತ್ತಿದೆ. ಆದ್ದರಿಂದಲೇ ನಾನು ಸದನಕ್ಕೆ ಗೈರು ಹಾಜರಾಗಿದ್ದೇನೆ ಎಂದರು.

ಸದನದಲ್ಲಿ ಬಟ್ಟೆ, ರಾಜೀನಾಮೆ, ಚುನಾವಣೆ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ. ಆದರೆ ರಾಜ್ಯದ ನೈಜ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿಲ್ಲ. ಸಿ.ಡಿ ವಿಚಾರದ ಬಗ್ಗೆ ಚರ್ಚೆ ಮಾಡೋದು ಎಷ್ಟು ಸರಿ? ಎಂದು ಪ್ರಶ್ನಿಸಿದರು.

ಇದೇ ವೇಳೆ ವಿರೋಧ ಪಕ್ಷದ ನಾಯಕರೆಲ್ಲ ಶ್ರೀರಾಮಚಂದ್ರರೇ? ಎಲ್ಲರ ವಿರುದ್ಧವೂ ತನಿಖೆಯಾಗಲಿ ಎಂಬ ಸಚಿವ ಸುಧಾಕರ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ನಾನು ಒಂದು ಬಾರಿ ಎಡವಿದ್ದೇನೆ. ಸಚಿವರು ತಪ್ಪು ಮಾಡಿಕೊಂಡಿದ್ದಾರೆ. ಇವರು ಯಾಕೆ ಕೋರ್ಟಿಗೆ ಹೋಗಬೇಕಾಯಿತು..? ಇವರೇ ಸಮಸ್ಯೆಗಳನ್ನು ಉದ್ಭವ ಮಾಡಿಕೊಂಡಿದ್ದಾರೆ. ಹೀಗಿರುವಾಗ ಬೇರೆಯವರ ಮೇಲೆ ಯಾಕೆ ರಾಡಿ ಎರಚುತ್ತಾರೆ. ಇಲ್ಲಿ ಯಾರೂ ಸತ್ಯಹರಿಶ್ಚಂದ್ರ ಅಲ್ಲ. ನಾನು ಧೈರ್ಯವಾಗಿಯೇ ಹೇಳಿದ್ದೇನೆ. ನಾನು ಒಮ್ಮೆ ತಪ್ಪು ಮಾಡಿದ್ದೇನೆ ಎಂದರು.

Share This Article
Leave a comment