ಅಕ್ಕನಿಗೆ ನಿಶ್ಚಯವಾಗಿದ್ದ ವರನೊಂದಿಗೆ ತಂಗಿ ಮದುವೆಯಾದ, ತಂಗಿಗೆ ನಿಶ್ಚಯವಾದ ವರನೊಂದಿಗೆ ಅಕ್ಕನನ್ನು ಒಂದೇ ಮಂಟಪದಲ್ಲಿ ಮದುವೆಯಾಗಿರುವ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ. ಮದುವೆ ವೇಳೆ ವಿದ್ಯುತ್ ವ್ಯತ್ಯಯದಿಂದಾಗಿ. ಅಚಾತುರ್ಯ ನಡೆದಿದೆ.
ರಮೇಶ್ಲಾಲ್ ಅರವರ ಇಬ್ಬರು ಪುತ್ರಿಯರಾದ ನಿಕಿತಾ ಮತ್ತು ಕರಿಷ್ಮಾಗೆ ಬೇರೆ, ಬೇರೆ ಊರಿನ ಯುವಕರಾದ ದಂಗ್ವಾರಾ ಭೋಲಾ ಮತ್ತು ಗಣೇಶ್ ಅವರೊಂದಿಗೆ ಮದುವೆ ನಿಶ್ಚಯವಾಗಿತ್ತು.
ಭಾನುವಾರ ಮುಹೂರ್ತದ ವೇಳೆ ಕರೆಂಟ್ ಹೋಗಿದ್ದರಿಂದ, ಅಕ್ಕ, ತಂಗಿ ಇಬ್ಬರು ಒಂದೇ ಬಣ್ಣದ ಉಡುಗೆ ಮತ್ತು ಹೂ ಮುಡಿದುಕೊಂಡಿದ್ದರಿಂದ ಅದಲು, ಬದಲು ಆಗಿ ವರರ ಜೊತೆಗೆ ಮದುವೆಯಾಗಿದೆ.
ಮದುವೆ ವೇಳೆ ಪುರೋಹಿತರು ಕೂಡ ಬದಲಾಗಿದ್ದ ವಧುಗಳ ಕೈ ಹಿಡಿದು ವರರಿಗೆ ಅಗ್ನಿ ಕುಂಡಲವನ್ನು ಸುತ್ತಿಸಿದ್ದಾರೆ. ಆದರೆ ಈ ವೇಳೆ ಸಹ ವಧು ಬದಲಾಗಿರುವ ವಿಚಾರ ತಿಳಿದಿಲ್ಲ. ಆದರೆ ವಿವಾಹ ನಂತರ ವರರಿಬ್ಬರು ತಮ್ಮ ಪತ್ನಿಯನ್ನು ಮನೆಗೆ ಕರೆದೊಯ್ದಾಗ ಅದಲು, ಬದಲು ಆಗಿರುವ ವಿಚಾರ ತಿಳಿದುಬಂದಿದೆ.
ಇದೀಗ ವಧು-ವರರು ಮರುದಿನ ಮತ್ತೊಮ್ಮೆ ವಿವಾಹ ಮಾಡುವಂತೆ ಕೇಳಿಕೊಂಡಿದ್ದಾರೆ!
ಬೆಂಗಳೂರು : ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅರಸೀಕೆರೆ ಮೂಲದ ಕರಡಿಹಳ್ಳಿ… Read More
ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಬಜೆಟ್ನಲ್ಲಿ ಘೋಷಣೆ… Read More
ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಈ ಪ್ರಕರಣದಲ್ಲಿ… Read More
ಹಾಸನ : ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ಕು ಮಕ್ಕಳು ಜಲ ಸಮಾಧಿ ಆದ ಘಟನೆ ಆಲೂರು ತಾಲೂಕಿನ, ತಿಮ್ಮನಹಳ್ಳಿ… Read More
ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಆಪ್ತರ… Read More
ಬೆಂಗಳೂರು : ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಿಸಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ದಳ(ಎನ್ಐಎ)… Read More
This website uses cookies.
Leave a Comment