ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ರಾಜ್ಯ ಸರ್ಕಾರ ಎತ್ತಂಗಡಿ ಮಾಡಲು ನಿರ್ಧರಿಸಿದೆ.
ಈ ಹಿಂದಿನ ಜಿಲ್ಲಾಧಿಕಾರಿ ಬಿ ಶರತ್ ವರ್ಗಾವಣೆ ಪ್ರಕರಣದಲ್ಲಿ ಕೋಟ್೯ ನೀಡಿರುವ ತೀರ್ಪಿನಂತೆ ರೋಹಿಣಿ ಸಿಂಧೂರಿಯನ್ನು ಎತ್ತಂಗಡಿ ಮಾಡಲು ಸಧ್ಯದಲ್ಲೇ ಸರ್ಕಾರ ತೀರ್ಮಾನ ಮಾಡಲಿದೆ.
ತಮ್ಮ ವರ್ಗಾವಣೆ ರದ್ದು ಮಾಡುವಂತೆ ಕೋರಿ ಬಿ. ಶರತ್ ಸಿಎಟಿ ಮೋರೆ ಹೋಗಿದ್ದರು. 6 ತಿಂಗಳು ಕಾಲ ವಾದ ವಿವಾದ ಆಲಿಸಿದ ನ್ಯಾಯಾಲಯವು ಸರ್ಕಾರಕ್ಕೆ ನಿರ್ಧಾರ ಮಾಡುವ ಅವಕಾಶವನ್ನು ನೀಡಿತ್ತು.
ಈಗ ಅವಕಾಶ ಉಪಯೋಗಿಸಿಕೊಂಡ ಸರ್ಕಾರ ಆಮ್ಲಜನಕ ಸಿಲಿಂಡರ್ ವಿವಾದದಲ್ಲಿ ರೋಹಿಣಿ ಸಿಂಧೂರಿ ಅವರನ್ನು ಎತ್ತಂಗಡಿ ಮಾಡಲು ನಿರ್ಧರಿಸಲಾಗಿದೆ.