ಮೈಸೂರಿನಲ್ಲಿ ಬೈಕ್ ನ ಹಿಂಬದಿ ಸವಾರ ಸಾವು – ಘಟನೆಗೆ ಕಾರಣರಾದ ಪೋಲಿಸರು : ಉದ್ರಿಕ್ತ ಜನರಿಂದ ದಾಂಧಲೆ

Team Newsnap
1 Min Read

ಸಂಚಾರಿ ಪೊಲೀಸ್ ತಪಾಸಣೆ ವೇಳೆ ಬೈಕ್ ಸವಾರನಿಗೆ ಲಾಠಿ ಬೀಸಿದ್ದರಿಂದ ಕೆಳಗೆ ಬಿದ್ದ ಹಿಂಬದಿಯ ಸವಾರ ಕೆಳಗೆ ಬಿದ್ದ ನಂತರ ಲಾರಿ ಹರಿದ ಪರಿಣಾಮ ಆತ ಸ್ಥಳದಲ್ಲಿ ಸಾವನ್ನಪ್ಪಿದ್ದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಪೋಲಿಸರ ಮೇಲೆ ದಾಳಿ ನಡೆಸಿ, ಹಿಗ್ಗಾಮುಗ್ಗ ಧರ್ಮದೇಟು ಹಾಕಿ ಘಟನೆ ಮೈಸೂರಿನ ಹಿನಕಲ್ ರಿಂಗ್ ರಸ್ತೆಯಲ್ಲಿ ನಡೆದಿದೆ.

93ecf481 04c8 4d80 a4f6 e547867f4613

ಹಿನಕಲ್ ರಿಂಗ್ ರಸ್ತೆಯಲ್ಲಿ ವಿವಿ ಪುರಂ ಸಂಚಾರಿ ಪೊಲೀಸರು ತಪಾಸಣೆ ನಡೆಸುತ್ತಿದ್ದ, ಈ ವೇಳೆ ಹೆಲ್ಮೆಟ್ ಹಾಕಿದ್ದರೂ ಬೈಕ್ ಸವಾರನೋರ್ವನನ್ನು ತಪಾಸಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ

ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಬೈಕ್ ಸವಾರನ ಹ್ಯಾಂಡಲ್​ಗೆ ಪೊಲೀಸರ ಲಾಠಿ ಸಿಲುಕಿಕೊಂಡು ಆಯತಪ್ಪಿ ಕೆಳಗೆ ಬಿದ್ದಿದ್ದಾನೆಂದು ಆರೋಪಿಸಲಾಗಿದೆ.

ಇದೇ ಸಂದರ್ಭದಲ್ಲಿ ಹಿಂಬದಿಯಿಂದ ಬರುತ್ತಿದ್ದ ಲಾರಿವೊಂದು ಸವಾರನ ಮೇಲೆ ಹರಿದಿದ್ದರ ಪರಿಣಾಮ ಬೈಕ್​ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಈ ಘಟನೆಯಿಂದ ರೊಚ್ಚಿಗೆದ್ದ ಸಾರ್ವಜನಿಕರು ಸಂಚಾರಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ.

ಅಲ್ಲದೇ ಉದ್ರಿಕ್ತ ಗುಂಪು ಪೊಲೀಸ್​ ವಾಹನವನ್ನು ಜಖಂಗೊಳಿಸಿದೆ.‌ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಿತ್ತು .

Share This Article
Leave a comment