ಮೈಶುಗರ್ ಕಾರ್ಖಾನೆಯಲ್ಲಿ 250ಕ್ಕೂ ಹೆಚ್ಚು ಗುತ್ತಿಗೆ ನೌಕರರು ಸೇರಿದಂತೆ ಬಿಹಾರ ಹಾಗೂ ಇತರ ರಾಜ್ಯಗಳ ಕಾರ್ಮಿಕರು ಕಡಿಮೆ ಸಂಬಳದಲ್ಲಿ ದುಡಿಯುತ್ತಿದ್ದಾರೆ. ಆದರೆ ಕಳೆದ ಎರಡು ತಿಂಗಳಿಂದ ಇವರಿಗೆ ವೇತನ ಪಾವತಿಸಲಾಗಿಲ್ಲ. ಈ ಕುರಿತು ಮಾಡಿದ ಹಲವಾರು ಮನವಿಗೂ ಪ್ರತಿಕ್ರಿಯೆ ಸಿಗದ ಕಾರಣ, ಕಾರ್ಮಿಕರು ಪ್ರತಿದಿನದ ಜೀವನೋಪಾಯಕ್ಕೂ ಪರದಾಡುವ ಸ್ಥಿತಿಗೆ ಬಂದು ರಸ್ತೆ ತಲುಪಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ, ಕಾರ್ಖಾನೆಯ ಗುತ್ತಿಗೆ ಕಂಪನಿ ಆರ್.ಬಿ.ಟೆಕ್ ಏಜೆನ್ಸಿ ಕಾರ್ಖಾನೆಯಿಂದ ಹಣ ಬಿಡುಗಡೆಯಾಗಿಲ್ಲ ಎಂದು ಕಾರಣ ತಿಳಿಸಿದೆ. ಮೈಶುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ್ ಅವರು ಸಂಬಳ ಪಾವತಿ ಸಂಬಂಧ ಸೂಚನೆ ನೀಡಿದರೂ, ಕೆಲ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಾವತಿ ಇನ್ನೂ ವಿಳಂಬವಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.ಇದನ್ನು ಓದಿ –ಪುಷ್ಪ 2 ಪ್ರೀಮಿಯರ್ ಶೋನಲ್ಲಿ ಕಾಲ್ತುಳಿತ: ಮಹಿಳೆ ಸಾವು, ಮಗನ ಸ್ಥಿತಿ ಗಂಭೀರ
ಅಲ್ಲದೆ, ಮೈಶುಗರ್ ವ್ಯಾಪ್ತಿಯ ಕಬ್ಬು ಸಂಪೂರ್ಣ ಖಾಲಿಯಾಗುವ ಮೊದಲೇ ಕಬ್ಬು ಅರೆಯುವ ಕಾರ್ಯ ಸ್ಥಗಿತಗೊಂಡಿದ್ದು, ರೈತರ ಆಕ್ರೋಶಕ್ಕೂ ಕಾರಣವಾಗಿದೆ. ನೌಕರರ ಆರ್ಥಿಕ ಸಂಕಷ್ಟ ಮತ್ತು ಕಬ್ಬು ಅರೆಯುವ ಕಾರ್ಯ ಸ್ಥಗಿತ ಎರಡೂ ಮಿಲೆಯ ನಿರ್ವಹಣಾ ದೌರ್ಬಲ್ಯವನ್ನು ತೋರಿಸುತ್ತಿದ್ದು, ಸೂಕ್ತ ಪರಿಹಾರಕ್ಕಾಗಿ ಸರ್ಕಾರದಿಂದ ನಿರೀಕ್ಷೆ ಹೆಚ್ಚುತ್ತಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು