ಮೈಸೂರಿನ ಬಿಜೆಪಿ ನಾಯಕ ವಿಜಯಶಂಕರ್ ಮೇಘಾಲಯ ರಾಜ್ಯಪಾಲರಾಗಿ ನೇಮಕ

Team Newsnap
1 Min Read

ನವದೆಹಲಿ : ಮೈಸೂರಿನ ಬಿಜೆಪಿ ನಾಯಕ ಸಿಎಚ್ ವಿಜಯಬಶಂಕರ್ ಅವರಿಗೆ ರಾಜ್ಯಪಾಲರ ಹುದ್ದೆಯ ಭಾಗ್ಯ ದೊರೆತಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಒಟ್ಟು 9 ರಾಜ್ಯಗಳಿಗೆ ನೂತನ ರಾಜ್ಯಪಾಲರು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಲೆಫ್ಟಿನೆಂಟ್ ಗವರ್ನರ್​ ಅವರನ್ನು ನೇಮಿಸಿ ಶನಿವಾರ ಆದೇಶ ಹೊರಡಿಸಿದ್ದಾರೆ.

ಈ ಪಟ್ಟಿಯಲ್ಲಿ ನೂತನ ರಾಜ್ಯಪಾಲರಾಗಿ ಕರ್ನಾಟಕದ ಮಾಜಿ ಸಚಿವ ಮತ್ತು ಬಿಜೆಪಿ ಹಿರಿಯ ನಾಯಕ ಸಿ.ಹೆಚ್.ವಿಜಯಶಂಕರ್ ಕೂಡ ಸೇರಿದ್ದಾರೆ.

ವಿಜಯ ಶಂಕರ್ ಅವರನ್ನು ಮೇಘಾಲಯದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.ಭರವಸೆಯ ಬೆಳಕು ‘ನೇತ್ರ’ಕ್ಕೆ ಪುನರ್ಜನ್ಮ- ದೇಹಕ್ಕಲ್ಲ

ನೂತನ ರಾಜ್ಯಪಾಲರ ವಿವರ ಹೀಗಿದೆ:

  • ಮೇಘಾಲಯ – ಸಿ.ಹೆಚ್‌.ವಿಜಯಶಂಕರ್‌
  • ತೆಲಂಗಾಣ – ಜಿಷ್ಣು ದೇವ್ ವರ್ಮಾ
  • ರಾಜಸ್ಥಾನ – ಹರಿಭಾವು ಬಾಗಡೆ
  • ಸಿಕ್ಕಿಂ – ಓಂ ಪ್ರಕಾಶ್ ಮಥುರಾ
  • ಜಾರ್ಖಂಡ್‌ – ಸಂತೋಷ್‌ ಕುಮಾರ್‌ ಗಂಗ್ವಾರ್‌
  • ಛತ್ತೀಸ್‌ಗಢ – ರಮೆನ್ ದೇಕಾ
  • ಮಹಾರಾಷ್ಟ್ರ – ಸಿ.ಪಿ.ರಾಧಾಕೃಷ್ಣನ್
  • ಪಂಜಾಬ್‌ – ಗುಲಾಬ್ ಚಂದ್ ಕಟಾರಿಯಾ
  • ಅಸ್ಸೋಂ ಮತ್ತು ಮಣಿಪುರ – ಲಕ್ಷ್ಮಣ್ ಪ್ರಸಾದ್ ಆಚಾರ್ಯ
  • ಪುದುಚೇರಿ – ಕೆ.ಕೈಲಾಸನಾಥನ್

Share This Article
Leave a comment