March 16, 2025

Newsnap Kannada

The World at your finger tips!

muda

MUDA ಹಗರಣ: ಅಂತಿಮ ತನಿಖಾ ವರದಿ ಐಜಿಪಿಗೆ ಸಲ್ಲಿಕೆ

Spread the love

ಮೈಸೂರು, ಫೆಬ್ರವರಿ 12: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ನಡೆಸಿದ ತನಿಖೆಯ ಅಂತಿಮ ವರದಿ ಸಿದ್ಧಗೊಂಡಿದ್ದು, ಇದನ್ನು ಮೈಸೂರು ಲೋಕಾಯುಕ್ತ ಎಸ್.ಪಿ ಟಿ. ಉದೇಶರು ಐಜಿಪಿ ಸುಬ್ರಮಣ್ಯೇಶ್ವರ ರಾವ್ ಅವರಿಗೆ ಸಲ್ಲಿಸಿದ್ದಾರೆ.

ಈ ತನಿಖಾ ವರದಿ ಮುಡಾ ಹಗರಣದ ಕುರಿತು ಇದುವರೆಗೂ ನಡೆದ ಸಮಗ್ರ ತನಿಖೆಯ ಫಲಿತಾಂಶವಾಗಿದೆ. ಲೋಕಾಯುಕ್ತ ಇಲಾಖೆ ಸಾಕಷ್ಟು ಅವಧಿಯ ತನಿಖೆ ನಡೆಸಿ, ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿ, ಸಮಗ್ರ ವರದಿಯನ್ನು ಸಿದ್ಧಪಡಿಸಿದೆ.

ಇದನ್ನು ಓದಿ –ಕೇಂದ್ರ ಸರ್ಕಾರದ 622 ಪುಟಗಳ ಹೊಸ ತೆರಿಗೆ ಮಸೂದೆ – ಪ್ರಮುಖ ಬದಲಾವಣೆಗಳ ಪರಿಚಯ

ತನಿಖಾ ವರದಿ ಸಲ್ಲಿಕೆಯಾಗಿರುವುದರಿಂದ ಮುಂದಿನ ಹಂತದಲ್ಲಿ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.

Copyright © All rights reserved Newsnap | Newsever by AF themes.
error: Content is protected !!