February 18, 2026

Newsnap Kannada

The World at your finger tips!

WhatsApp Image 2024 10 04 at 11.00.40 AM

ಮುಡಾ ಹಗರಣ- ಬೆಂಗಳೂರು ಮೈಸೂರು ಸೇರಿ 9 ಕಡೆಗಳಲ್ಲಿ ED ದಾಳಿ

Spread the love

ಬೆಂಗಳೂರು: ಮುಡಾ ಸೈಟ್ ಹಗರಣದ ತನಿಖೆ ಗಂಭೀರ ಹಂತ ತಲುಪಿದ್ದು, ED ಅಧಿಕಾರಿಗಳು ರಾಜ್ಯದ 9 ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ.

ಮೈಸೂರು, ಬೆಂಗಳೂರು, ಮಂಡ್ಯ ಸೇರಿದಂತೆ 9 ಕಡೆಗಳಲ್ಲಿ ಎಕಕಾಲಕ್ಕೆ ದಾಳಿ ಮಾಡಲಾಗಿದ್ದು, ಅಕ್ರಮವಾಗಿ ಸೈಟ್ ಪಡೆದವರ ವಿರುದ್ಧ ಎಚ್ಚರಿಕೆಯ ಕಾರ್ಯವಾಹಿಯನ್ನು ಇ.ಡಿ ನಡೆಸಿದೆ.

ಬೆಂಗಳೂರಿನ ಬಿಲ್ಡರ್ ಮಂಜುನಾಥ್ ಅವರ ನಿವಾಸದ ಮೇಲೆ ದಾಳಿ ಮಾಡಲಾಗಿದ್ದು, ಅವರು ಸೈಟ್‌ಗಳ ಅಕ್ರಮ ವ್ಯವಹಾರದಲ್ಲಿ ಭಾಗಿಯಾಗಿರುವ ಆರೋಪವಾಗಿದೆ. ಜೆಪಿ ನಗರ, ಸ್ಯಾಂಕಿ ಟ್ಯಾಂಕ್ ಬಳಿಯ ಕೆಲ ಮನೆಗಳ ಮೇಲೆ ಮತ್ತು ಮೈಸೂರು-ಮಂಡ್ಯ ಪ್ರದೇಶಗಳಲ್ಲೂ ಈ ದಾಳಿ ಮುಂದುವರೆದಿದೆ.

ಇಲ್ಲಿಯವರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ವಿಚಾರಣೆ ಪೂರ್ಣಗೊಂಡಿದ್ದು, ಎಸ್‌ಪಿ ಉದೇಶ್ 30 ದಿನಗಳೊಳಗೆ ಹೆಚ್ಚಿನ ವಿಚಾರಣೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ A2 ಆರೋಪಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರನ್ನು ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಇತ್ತೀಚೆಗೆ ವಿಚಾರಣೆ ಮಾಡಿದ್ದರು. ಮುಂದಿನ ವಾರ ಸಿಎಂ ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ.ಇದನ್ನು ಓದಿ –ಹೆಂಗರುಳೇ ಕಲ್ಲಾದರೆ ನುಡಿವುದೇನು(ಬ್ಯಾಂಕರ್ಸ್ ಡೈರಿ)

ಬಿಲ್ಡರ್ ಮಂಜುನಾಥ್ ವಿರುದ್ಧ ದೂರು:

ED ದಾಳಿ ನಡೆಯುತ್ತಿದ್ದಂತೆಯೇ ಮೈಸೂರಿನ ಸ್ನೇಹಮಯಿ ಕೃಷ್ಣ ಅವರು ಲೋಕಾಯುಕ್ತ ಕಚೇರಿಗೆ ತೆರಳಿ ಬಿಲ್ಡರ್ ಮಂಜುನಾಥ್ ವಿರುದ್ಧ ದೂರು ಸಲ್ಲಿಸಿದರು. ದೂರು ಪ್ರಕಾರ, ಮುಡಾ ಆಯುಕ್ತರಾಗಿದ್ದ ನಟೇಶ್ ದಿನೇಶ್ ಅವರು ಮಂಜುನಾಥ್ ಅವರಿಗೆ ಅಕ್ರಮವಾಗಿ ಸೈಟ್ ಹಂಚಿಕೆ ಮಾಡಿದ್ದು, ಮುಡಾ ಮಾಜಿ ಅಧ್ಯಕ್ಷ ಮರಿಗೌಡನ ಸಂಬಂಧಿಯವರಿಗೂ ಸೈಟ್ ನೀಡಲಾಗಿದೆ. 50:50 ಅನುಪಾತದಲ್ಲಿ 40 ಕ್ಕೂ ಹೆಚ್ಚು ಸೈಟ್‌ಗಳನ್ನು ಅಕ್ರಮವಾಗಿ ಪಡೆದಿರುವ ಮಂಜುನಾಥ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೃಷ್ಣ ಆಗ್ರಹಿಸಿದ್ದಾರೆ.

error: Content is protected !!