ಆತ್ಮಹತ್ಯೆ ಮಾಡಿಕೊಂಡವರು ಜಯಂತಿ (60) ಮತ್ತು ಅವರ ಪುತ್ರ ಭರತ್ (35) ಎಂದು ಗುರುತಿಸಲಾಗಿದೆ. ಭರತ್ ಕಳೆದ ಎಂಟು ತಿಂಗಳ ಹಿಂದೆ ಅರಸೀಕೆರೆ ತಾಲ್ಲೂಕಿನ ಬಾಗೂರನಹಳ್ಳಿ ಗ್ರಾಮದ ಯುವತಿಯೊಂದಿಗೆ ವಿವಾಹವಾಗಿದ್ದರು. ಆದರೆ, ಅತ್ತೆ-ಸೊಸೆ ನಡುವೆ ತೊಡಕಿನ ಸಂಬಂಧ ಇದ್ದು, ಪದೇಪದೇ ಜಗಳವಾಗುತ್ತಿತ್ತು.
ಈ ಕಾರಣದಿಂದ ಭರತ್ ಪತ್ನಿ ಗಂಡನ ಜೊತೆ ಇರಲು ನಿರಾಕರಿಸಿ ತವರು ಮನೆಗೆ ಹೋಗಿದ್ದರು. ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಹಲವು ಬಾರಿ ಮಧ್ಯಸ್ಥಿಕೆ ನಡೆಸಿ ರಾಜಿ ಪಡಿಸಲು ಪ್ರಯತ್ನಿಸಿದರೂ, ಸಮಾಧಾನಕಾರಿ ಪರಿಹಾರ ಸಿಗದೆ, ಪತ್ನಿ ಗಂಡನ ಮನೆಗೆ ಮರಳಲು ನಿರಾಕರಿಸಿದ್ದರು.ಇದನ್ನು ಓದಿ -ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
ಇದರಿಂದ ಮನನೊಂದ ಭರತ್ ಹಾಗೂ ತಾಯಿ ಜಯಂತಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯ ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಹಿರಿಸಾವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ