ಸಾಂಬಾರು ಚೆನ್ನಾಗಿಲ್ಲ ಎಂಬ ವಿಷಯಕ್ಕೆ ಗಲಾಟೆ ಆರಂಭಿಸಿ ರೊಚ್ಚಿಗೆದ್ದ ಮಗನೊಬ್ಬ ಹೆತ್ತ ಅಮ್ಮ ಹಾಗೂ ತಂಗಿಯನ್ನೇ ನಾಡಬಂದೂಕಿನಿಂದ ಗುಂಡು ಹಾರಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ದೊಡ್ಮನೆ ಗ್ರಾಮದ ಕುಡಗೋಡಿನಲ್ಲಿ ಜರುಗಿದೆ.
ಪಾರ್ವತಿ ನಾರಾಯಣ ಹಸ್ಲರ್ (42), ರಮ್ಯಾ ನಾರಾಯಣ ಹಸ್ಲರ್(19) ಹತ್ಯೆಯಾದ ದುರ್ದೈವಿಗಳು. ಮಂಜುನಾಥ ಹಸ್ಲರ್ (24) ಕೊಲೆ ಮಾಡಿದ ಆರೋಪಿ.
ಮನೆಯಲ್ಲಿ ಮಾಡಿದ್ದ ಸಾಂಬಾರು ಚೆನ್ನಾಗಿಲ್ಲ ಎಂದು ಆರೋಪಿ ಕ್ಯಾತೆ ತೆಗೆದು ಮನೆಯಲ್ಲಿದ್ದ ನಾಡ ಬಂದೂಕು ತೆಗೆದುಕೊಂಡು ಇಬ್ಬರ ಮೇಲೂ ಗುಂಡು ಹಾರಿಸಿದ್ದಾನೆ.
ಮಂಜುನಾಥ ಮದ್ಯ ವ್ಯಸನಿಯಾಗಿದ್ದ. ಆರೋಪಿ ಮಂಜುನಾಥ್ ವಿರುದ್ಧ ತಂದೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ
ಚಾಮರಾಜನಗರದಲ್ಲಿ ಖಾಸಗಿ ಬಸ್ ಪಲ್ಟಿ: ಓರ್ವ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ