February 19, 2026

Newsnap Kannada

The World at your finger tips!

kanthraju

ಜೆಡಿಎಸ್‌ ತೊರೆದು ಕಾಂಗ್ರೆಸ್ ಸೇರಲಿರುವ ಎಂಎಲ್‌ಸಿ ಕಾಂತರಾಜು

Spread the love

ಜೆಡಿಎಸ್‌ನ್ನು ತೊರೆದು ಕಾಂಗ್ರೆಸ್‌ಗೆ ಸೇರುವ ಬಗ್ಗೆ ಎಂಎಲ್‌ಸಿ ಬಿಎಂಎಲ್ ಕಾಂತರಾಜು ಖಚಿತಪಡಿಸಿದ್ದಾರೆ

ಈ ಸುದ್ದಿ ಹೊಸ ವರ್ಷದ ಆರಂಭದಲ್ಲಿ ಜೆಡಿಎಸ್ ಪಕ್ಷಕ್ಕೆ ಶಾಕ್ ನೀಡಿದಂತಾಗಿದೆ.

ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ಶನಿವಾರ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ.

ಈ ವೇಳೆ ಮಾತನಾಡಿದ ಕಾಂತರಾಜು ಜೆಡಿಎಸ್‌ನಲ್ಲಿ ಬಾಗಿಲು ಮುಚ್ಚಿದೆ. ವರಿಷ್ಠರು ಮಾತನಾಡುವ ಯಾವುದೇ ಸೂಚನೆ ಇಲ್ಲ. ಈಗಾಗಲೇ ಬಾಗಿಲು ಮುಚ್ಚಿದ್ದಾರೆ ಎಂದು ಹೇಳಿದ ಅವರು, ಜೆಡಿಎಸ್ ತೊರೆಯುವುದಾಗಿ ಬಹುತೇಕ ಖಚಿತ ಪಡಿಸಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ಪಕ್ಷವನ್ನು ಸೇರುವ ಕುರಿತು ಮಾಹಿತಿ ನೀಡಿದ ಕಾಂತರಾಜು ಅವರು, ಇನ್ನೂ ಎರಡು, ಮೂರು ದಿನಗಳಲ್ಲಿ ನನ್ನ ನಿರ್ಧಾರ ಖಚಿತ ಪಡಿಸುತ್ತೇನೆ ಎಂದಿದ್ದಾರೆ.

ಪ್ರಾಮಾಣಿಕವಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೆಗೌಡರ ಆಶೀರ್ವಾದದಿಂದ ತುಮಕೂರಿನಲ್ಲಿ ಗೆದ್ದಿದ್ದೇನೆ. ಆದರೆ ನಾನು ಕೂಡ ಅಷ್ಟೇ ಪ್ರಾಮಾಣಿಕವಾಗಿ ಪಕ್ಷಕ್ಕೆ ದುಡಿದಿದ್ದೇನೆ. ಈಗ ನನ್ನ ಪ್ರಾಮಾಣಿಕ ಕೆಲಸದ ಮೇಲೆ ಅವರಿಗೆ ನಂಬಿಕೆ ಇಲ್ಲ. ಜೆಡಿಎಸ್ ಬಾಗಿಲು ಮುಚ್ಚಿರುವುದರಿಂದ ಬೇರೆ ಬಾಗಿಲು ತಟ್ಟಬೇಕಾಗಿದೆ ಸ್ಪಷ್ಟಪಡಿಸಿದ್ದಾರೆ.

error: Content is protected !!