February 26, 2026

Newsnap Kannada

The World at your finger tips!

yash pu2

ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ – ಪುನೀತ್ ಕೊನೆ ಮಾತು

Spread the love

ಬುಧವಾರವಷ್ಟೇ ತಮ್ಮ ಸಹೋದರ ಶಿವ ರಾಜ್ ಕುಮಾರ್ ಸಿನಿಮಾಗೆ ವಿಶ್ ಮಾಡಿ, ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಹೇಳಿದ್ದೆ ಪವರ್ ಸ್ಟಾರ್ ಪುನೀತ್ ಕೊನೆಯ ಮಾತಾಗಿತ್ತು.

yash pu

ಬುಧವಾರ ಸಹೋದರ ಶಿವರಾಜ್ ಕುಮಾರ್ ಅವರ ಭಜರಂಗಿ- 2 ಸಿನಿಮಾದ ಪ್ರಿರಿಲೀಸ್ ಕಾರ್ಯಕ್ರಮವಿತ್ತು.

ಈ ವೇಳೆ ಶಿವಣ್ಣ, ಯಶ್ ಹಾಗೂ ಅಪ್ಪು ವೇದಿಕೆಯ ಮೇಲೆ ಸಖತ್ ಸ್ಟೆಪ್ ಹಾಕುವ ಮೂಲಕ ನೆರೆದಿದ್ದವರನ್ನು ರಂಜಿಸಿದ್ದರು. ಆದರೆ ಅದೇ ಪುನೀತ್ ಅವರದ್ದು ಕೊನೆಯ ನೃತ್ಯ ಹಾಗೂ ಮಾತಾಗುತ್ತೆ ಅಂತ ಯಾರೂ ಊಹಿಸಿಲ್ಲ.

yash pu1

ಅಂದು ವೇದಿಕೆಯ ಮೇಲೆ ಮಾತನಾಡಿದ್ದ ‘ಯುವರತ್ನ’, ಎರಡನೇಯ ಲಾಕ್ ಡೌನ್ ಬಳಿಕ ಸಿನಿಮಾಗಳು ರಿಲೀಸ್ ಆಗುತ್ತಿವೆ. ಆ ಸಿನಿಮಾಗಳು ಒಳ್ಳೆಯ ಓಪನಿಂಗ್ ತೆಗೆದುಕೊಂಡು ಒಳ್ಳೆಯ ರೀತಿಯಲ್ಲಿ ಕಲೆಕ್ಷನ್ ತೆಗೆದುಕೊಳ್ಳುತ್ತಿವೆ. ಅದೇ ರೀತಿ ಇಂದು ಭಜರಂಗಿ-2 ಸಿನಿಮಾದ ಪ್ರಿ-ರಿಲೀಸ್ ಆಗುತ್ತಿದ್ದು, 29ರಂದು(ಇಂದು) ತೆರೆ ಕಾಣುತ್ತಿದೆ ಎಂದಿದ್ದರು.

error: Content is protected !!