ಮದುವೆಗೆ ಸಿದ್ದತೆ ಆಗಿತ್ತು. ಆದರೆ ವರ ಕೈ ಕೊಟ್ಟ. ಮದುವೆ ಹಿಂದಿನ ದಿನವೇ ವರ ಮತ್ತು ಪ್ರೇಯಸಿ ಜೊತೆ ಎಸ್ಕೇಪ್ ಆಗಿ ದೇವಸ್ಥಾನದಲ್ಲಿ ವಿವಾಹವಾದ ಪ್ರಕರಣ ಜರುಗಿದೆ
ಮದುವೆ ಅಂದರೆ ಕೆಲವರಿಗೆ ಮಕ್ಕಳಾಟವಾಗಿದೆ. ಮದುವೆ ನಿಶ್ಚಯ ಮಾಡಿದ ನಂತರ ತಾಳಿ ಕಟ್ಟದೆ ವರ ಪರಾರಿ ಪ್ರಕರಣಗಳು ಸಾಕಷ್ಟು ವರದಿಯಾಗುತ್ತವೆ. ಈಗ ತಾಜಾ ಪ್ರಕರಣ ಇಲ್ಲಿದೆ.
ಮೈಸೂರಿನ ಸುಣ್ಣದ ಕೇರಿಯ ಉಮೇಶ್ ಎಂಬಾತನಿಗೆ ಮದುವೆ ನಿಶ್ಚಯವಾಗಿತ್ತು. ವಧುವಿನ ಮನೆಯವರು ಮದುವೆಗೆ ಭರದ ಸಿದ್ಧತೆ ಮಾಡಿದ್ದರು. ವರನ ಪೋಷಕರು ಕೂಡ ಮದುವೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು.
ವರ , ಬೇರೊಬ್ಬ ಯುವತಿಯನ್ನು ಲೌವ್ ಮಾಡುತ್ತಿದ್ದ. ಈ ಸಂಗತಿ ಮುಚ್ಚಿಟ್ಟು ಮತ್ತೊಬ್ಬಳ ಜೊತೆ ಈಗ ಮದುವೆ ನಿಶ್ಚಯಾಡಿಕೊಂಡಿದ್ದ.
ಇತ್ತ ಎರಡು ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿತ್ತು. ನೆಂಟರು ಮದುವೆಗೆ ಬರುವ ತಯಾರಿಯಲ್ಲಿದ್ದರು.ಆದರೆ ವರ ಸೋಮುವಾರವೇ ವಧುವಿಗೆ ಕೈ ಕೊಟ್ಟು ಪ್ರೇಯಸಿ ಜೊತೆ ಪರಾರಿಯಾಗಿದ್ದಾನೆ.ಮದುವೆ ರದ್ದಾದ ಕಾರಣ ವಧುವಿನ ಮನೆಯವರು ಕಂಗಾಲಾಗಿದ್ದಾರೆ.
ಪ್ರೇಯಸಿ ಜೊತೆ ಮದುವೆ ಆಗುವ ಪ್ಲಾನ್ ಇದ್ದರೆ ಮತ್ತೊಂದು ಹುಡುಗಿಯ ಜೊತೆ ನಿಶ್ಚಿತಾರ್ಥ ಏಕೆ ಮಾಡಿಕೊಳ್ಳಬೇಕಿತ್ತು ಎಂಬ ಪ್ರಶ್ನೆಗೆ ಸಧ್ಯಕ್ಕೆ ಉತ್ತರ ಇಲ್ಲ.
ಮದುವೆ ದಿನದ ತನಕ ಯಾವುದನ್ನೂ ಹೇಳದೆ ಏಕೆ ಮೌನವಾಗಿದ್ದ ಎಂದು ವಧುವಿನ ಮನೆಯವರು ವರನ ಮನೆಯವರಿಗೆ ಕೇಳುವ ಪ್ರಶ್ನೆಗೂ ಉತ್ತರವಿಲ್ಲ.
ಮಗ ಹೀಗೆ ಮಾಡುತ್ತಾನೆ ಅಂತ ಆತನ ತಂದೆ-ತಾಯಿ ನಿರೀಕ್ಷಿಸಿರಲಿಲ್ಲ. ಮಗ ಪರಾರಿ ಆಗಿ ವರನ ಪೋಷಕರನ್ನು ಪೇಚಿಗೆ ಸಿಲುಕಿಸಿದ್ದಾನೆ.ಮೈಸೂರಿನ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜನರ ಸಮಸ್ಯೆಗಳಿಗಿಂತ ಟಿವಿ ಚಾನಲ್ ಗಳಿಗೆ ಗಂಡ ಹೆಂಡ್ತಿ ಜಗಳಗಳ ಬಗ್ಗೆಯೇ ಹೆಚ್ಚು ಆಸಕ್ತಿ: ಸಿಎಂ ವ್ಯಂಗ್ಯ ಫೇಕ್ ನ್ಯೂಸ್… Read More
ಹಾಸನ: 10 ವರ್ಷದ ಬಾಲಕನೊಬ್ಬ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ಹಾಸನದ ಅಲೂರು ತಾಲೂಕಿನ ಚಿನ್ನಪುರದಲ್ಲಿ ನಡೆದಿದೆ. ಮೃತ ಬಾಲಕ ಸಚಿನ್… Read More
ಮೈಸೂರು: ಶುಕ್ರವಾರ ( 20-09-2024 ) ರಾತ್ರಿ ದಸರಾ ಗಜಪಡೆಯ ಆನೆ ಧನಂಜಯ ಮತ್ತೊಂದು ಆನೆ ಕಂಜನ್ ಮೇಲೆ ಏಕಾಏಕಿ… Read More
ಮೈಸೂರು: ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದ್ದು, ದೇಶದ ಜಿ ಡಿಪಿ… Read More
ಬೆಂಗಳೂರು : BMTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ,ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ… Read More
ಮಂಗಳೂರು : ಕಾಮಗಾರಿಯ ಬಿಲ್ ಪಾವತಿಗಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲೋಕಾಯುಕ್ತ… Read More
This website uses cookies.
Leave a Comment