February 22, 2026

Newsnap Kannada

The World at your finger tips!

YADIYURAPPA1

ಮಂಡ್ಯ ಹಾಲು ಒಕ್ಕೂಟದ ಹಗರಣ ಸಿಐಡಿಯಿಂದ ತನಿಖೆ – ಸಿಎಂ

Spread the love

ಮಂಡ್ಯ ಹಾಲು‌ ಒಕ್ಕೂಟದಲ್ಲಿ ಹಾಲಿಗೆ ನೀರು ಬೆರಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ, ಸಿ ಐ ಡಿ ತನಿಖೆಗೆ ನಡೆಸುವಂತೆ ಆದೇಶಿಸಿರುವುದಾಗಿ ಸಿಎಂ ಯಡಿಯೂರಪ್ಪ ತಿಳಿಸಿದರು.‌

ಸುದ್ದಿಗಾರರೊಂದಿಗೆ ಮಾತನಾಡಿದ ಸಿ‌ಎಂ ಮಂಡ್ಯ ಹಾಲು‌ ಒಕ್ಕೂಟದಲ್ಲಿ ಹಾಲಿಗೆ ನೀರು ಕಲಬೆರೆಕೆ ಮಾಡಿ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವುದು ಮೇಲುನೋಟಕ್ಕೆ ತಿಳಿದು ಬಂದಿದೆ. ಈಗಾಗಲೇ ತಪ್ಪಿತಸ್ಥ ಐದು ಅಧಿಕಾರಿಗಳನ್ನು ಅಮಾನತ್ತಿನಲ್ಲಿಡಲಾಗಿದೆ ಎಂದು‌ ಹೇಳಿದರು.

ಈಗಾಗಲೇ ಹಾಲು‌ ಒಕ್ಕೂಟದಲ್ಲಿ ಪ್ರಾಥಮಿಕ ತನಿಖೆಗೆ ಮಾಡಲಾಗುತ್ತಿದೆ. ಹೊಸ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಿಸಲಾಗಿದೆ. ತಪ್ಪು ಎಸಗಿರುವ ಯಾವುದೇ ವ್ಯಕ್ತಿ ಆಗಿದ್ದರೂ ಪತ್ತೆ ಹಚ್ಚಿ ಅವರ ವಿರುದ್ದ ಕ್ರಮ‌ ಕೈಗೊಳ್ಳಲಾಗುವುದು. ಹಾಲು ಒಕ್ಕೂಟದ ಸಹಕಾರ ಸಂಘಗಳ ಮೇಲೆ ವಿಚಾರಣೆ ನಡೆಸಲು ಆದೇಶ ಹೊರಡಿಸಲಾಗಿದೆ‌ ಎಂದು ತಿಳಿಸಿದರು.

error: Content is protected !!