ಮಂಡ್ಯ – ಪ್ರೇಮಿ ಬಾಲಕನ‌ ಕೊಲೆ : ಪೊಲೀಸ್ ಅಧಿಕಾರಿಗಳ ಇಬ್ಬರು ಮಕ್ಕಳು ಸೇರಿ 17 ಮಂದಿ ಬಂಧನ.

Team Newsnap
1 Min Read

ಏಪ್ರಿಲ್ 14ರ ಮಧ್ಯ ರಾತ್ರಿ ಮಂಡ್ಯದ ವಿ.ವಿ.ನಗರದಲ್ಲಿ ನಡೆದಿದ್ದ ದರ್ಶನ್ (17), ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಸಭೆ ಸದಸ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಲಿಂಗು , ಇಬ್ಬರು ಪೋಲಿಸ್ ಅಧಿಕಾರಿಗಳ ಮಕ್ಕಳು ಸೇರಿದಂತೆ 17 ಮಂದಿಯನ್ನು ಪೋಲಿಸರು ಬಂಧಿಸಿದ್ದಾರೆ.

ನಗರಸಭಾ ಸದಸ್ಯ ಶಿವಲಿಂಗು ಅವರ ಮಗಳನ್ನು ಪ್ರೀತಿಸುತ್ತಿದ್ದ ಕೊಲೆಯಾದ ಬಾಲಕ , ಏಪ್ರಿಲ್ 14ರ ಮಧ್ಯ ರಾತ್ರಿ ಬಾಲಕಿ ನೋಡಲು ಹೋಗಿದ್ದಾಗ ಬಾಲಕನಿಗೆ ಮನಸೋಇಚ್ಚೆಯಾಗಿ
ನಗರಸಭೆ ಸದಸ್ಯ ಶಿವಲಿಂಗು ಹಾಗೂ ಸಂಬಂಧಿಕರಿಂದ ನಡೆದಿದ್ದ ಹಲ್ಲೆ ಮಾಡಿದ್ದರು.

ಈ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಸಾಗಿರುವಾಗ ಮೃತಪಟ್ಟಿದ್ದ.

ಅಪ್ಪ ಹಾಗೂ ಸಂಬಂಧಿಕರ ವಿರುದ್ಧ ಹೇಳಿಕೆ ಕೊಟ್ಟ ಬಾಲಕಿ :

ಬಾಲಕನನ್ನು ಯಾರ್ಯಾರು ಹೊಡೆದರು ಎಂ ಬಗ್ಗೆ ಸ್ವತಃ ಮಗಳೇ ಲಿಖಿತ ಹೇಳಿಕೆ ನೀಡಿದ್ದಾಳೆ.

ತನ್ನನ್ನು ನೋಡಲು ಬಂದಿದ್ದ ಬಾಲಕನಿಗೆ ಹಾಗೂ ತನಗೆ ಮನೆಯಲಿದ್ದವರೆಲ್ಲಾ ಸೇರಿ ಹೊಡೆದರೆಂದು ಪೊಲೀಸರು ಮುಂದೆ ಹೇಳಿಕೊಂಡಿದ್ದಾಳೆ.

ಈ ಹೇಲಿಕೆ ನೀಡಿರುವ ಹಿನ್ನೆಲೆಯಲ್ಲಿ
ಬಾಲಕಿ ಮನೆ ಬಳಿ ಇನ್ನೂ ಬಿಗುವಿನ ವಾತಾವರಣವಿದೆ. ಗಲಾಟೆ ನಡೆಯುವ ಸಾಧ್ಯತೆ ಇದೆ . ಹೀಗಾಗಿ ಪೊಲೀಸ್ ಭದ್ರತೆ ಹಾಕಲಾಗಿದೆ.

ಘಟನೆ ನಡೆದು 6 ದಿನವಾದ್ರೂ ಶಾಂತವಾಗದ ಮಂಡ್ಯದ ವಿ.ವಿ.ನಗರ ಬಡಾವಣೆಯಲ್ಲಿ ಇನ್ನೂ ಕೆಲವು ದಿನ ಭದ್ರತೆ ಮುಂದುವರೆಸಲು ಪೊಲೀಸ್ ಇಲಾಖೆ ತೀರ್ಮಾನ ಮಾಡಿದೆ

Share This Article
Leave a comment