January 29, 2026

Newsnap Kannada

The World at your finger tips!

yash

ನನ್ನ ಅಂತ್ಯಕ್ರಿಯೆಗೆ ಸಿದ್ದು, ನಟ ಯಶ್ ಬರಲಿ‌- ಆತ್ಮಹತ್ಯೆ ಮಾಡಿಕೊಂಡ ಯುವಕ ಕೊನೆ ಆಸೆ!

Spread the love

ಮಾನಸಿಕವಾಗಿ ನೊಂದ ಯವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ತಾಲೂಕಿನ ಕೋಡಿದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಕೃಷ್ಣ (25) ಎಂಬ ಯುವಕನೇ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡವನು.

ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಕೃಷ್ಣ, ಕೆಲಸ ಮುಗಿಸಿಕೊಂಡು ಮನೆಗೆ ಮೊನ್ನೆ ಬಂದಿದ್ದ. ನಿನ್ನೆ ರಜೆ ಹಾಕಿ ಮನೆಯಲ್ಲೇ ಇದ್ದ. ಮನೆಯವರು ಯಾರೂ ಇಲ್ಲದಿದ್ದಾಗ ನೇಣಿಗೆ ಶರಣಾಗಿದ್ದಾನೆ.

ಅಂತ್ಯ ಕ್ರಿಯೆ ಗೆ ಸಿದ್ದು, ಯಶ್ ಬರಲಿ:

sidda

ಸಾಯುವ ಮುನ್ನ ಡೆತ್‌ನೋಟ್‌ ಬರೆದಿಟ್ಟಿರುವ ಕೃಷ್ಣ, ನನ್ನ ಅಂತ್ಯ ಕ್ರಿಯೆ ಗೆ ಮಾಜಿ‌ ಸಿಎಂ ಸಿದ್ದರಾಮಯ್ಯ, ನಟ ಯಶ್ ಬರಬೇಕು. ಏಕೆಂದರೆ ನಾನು ಅವರಿಬ್ಬರ ಕಟ್ಟಾ ಅಭಿಮಾನಿ. ಇದು ನನ್ನ ಕೊನೆಯ ಆಸೆ. ಮಾಧ್ಯಮದವರು ನನ್ನ ಆಸೆ ಸಹಕಾರ ನೀಡುವಂತೆ ಕೃಷ್ಣ ಕೋರಿದ್ದಾನೆ.

ನನ್ನನ್ನು ಎಲ್ಲರೂ ದಯವಿಟ್ಟು ಕ್ಷಮಿಸಿ. ನಿಮಗೆಲ್ಲಾ ತುಂಬಾ ನೋವು ಕೊಟ್ಟಿದ್ದೀನಿ. ಅಮ್ಮ ನಿಗೆ ಒಬ್ಬ ಮಗನಾಗಿ, ಅಣ್ಣನಿಗೆ ತಮ್ಮನಾಗಿ, ಗೆಳೆಯರಿಗೆ ಒಂದೊಳ್ಳೆ ಸ್ನೇಹಿತನಾಗಿ, ನನ್ನ ಹುಡುಗಿಗೆ ಜೊತೆಗಾರನಾಗಲು ಬಾಳ ಸಂಗಾತಿಯಾಗಲು ವಿಫಲನಾಗಿದ್ದೇನೆ ಎಂದು ಹೇಳಿಕೊಂಡಿದ್ದಾನೆ.

ಕಳೆದ 15 ವರ್ಷಗಳ ಹಿಂದೆ ಕೃಷ್ಣ ತಂದೆ ಚಂದ್ರು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು. ಕೆರಗೋಡು ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ.

error: Content is protected !!