April 2, 2025

Newsnap Kannada

The World at your finger tips!

venkatesh

ಸರ್ಕಾರಿ ನೌಕರಿ ಕೊಡಿಸುವುದಾಗಿ ನಕಲಿ ಸಹಿ ಮಾಡಿ ಲಕ್ಷಾಂತರ ವಂಚನೆ

Spread the love
  • ಆರೋಪಿಹೆಚ್ ಸಿ ವೆಂಕಟೇಶ್ ಬಂಧನ

ಮಂಡ್ಯ:ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಸರ್ಕಾರಿ ಅಧಿಕಾರಿಗಳ ಸಹಿಗಳನ್ನು ನಕಲು ಮಾಡಿ, ನಕಲಿ ಸರ್ಕಾರಿ ನೇಮಕಾತಿ ಆದೇಶಗಳನ್ನು ಸೃಷ್ಟಿಸಿ ಸುಮಾರು 35 ರಿಂದ 40 ಜನರನ್ನು ವಂಚಿಸಿ ಲಕ್ಷಾಂತರ ರು ಲಪಟಾಯಿಸಿದ್ದ ಆರೋಪಿಯನ್ನು ಮಂಡ್ಯ ಪೊಲೀಸರು ಬಂಧಿಸಿದ್ದಾರೆ.

ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ ಆರೋಪಿಯು ಇಬ್ಬರಿಂದ 31 ಲಕ್ಷ ರೂ. ವಂಚಿಸಿದ್ದಾನೆ. ಈ ಕುರಿತು ನಗರದ ಪೂರ್ವ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈತನಿಂದ ಮಂಡ್ಯ ಗಾಂಧಿನಗರದ ನೇತ್ರಾವತಿ ಮತ್ತು ಕಲ್ಲಹಳ್ಳಿಯ ಮಲ್ಲೇಶ್ ವಂಚನೆಗೆ ಒಳಗಾಗಿದ್ದಾರೆ ಎಂದು ವಿವರಿಸಿದರು.

ವಿಧಾನಸೌಧದಲ್ಲಿ ಕೆಲಸ ಕೊಡಿಸುವ ಆಮಿಷ :

ಆರೋಪಿ ಹೆಚ್.ಸಿ. ವೆಂಕಟೇಶ್ ತಾನು ಬೆಂಗಳೂರಿನ ವಿಧಾನಸೌಧದಲ್ಲಿ ಕೆಲಸ ಮಾಡುತ್ತಿರುವುದಾಗಿ ನಂಬಿಸಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಹುದ್ದೆಗೆ ಮತ್ತು ವಾಣಿಜ್ಯ ಇಲಾಖೆಯ ಹಿರಿಯ ಅಧಿಕಾರಿ ಹುದ್ದೆಗೆ ನೇಮಕ ಮಾಡಿಸುತ್ತೇನೆ ಎಂಬಂತೆ ಜನರನ್ನು ಮೋಸ ಮಾಡಿದ್ದಾನೆ.

ಡಿಡಿಪಿಐ ಹುದ್ದೆಗೆ ವಂಚನೆ:

ನೇತ್ರಾವತಿ ಎಂಬುವರ ಇಬ್ಬರು ಮಕ್ಕಳಿಗೆ ಉದ್ಯೋಗ ಕೊಡಿಸುವುದಾಗಿ ಹೆಚ್.ಸಿ. ವೆಂಕಟೇಶ್ ನಂಬಿಸಿ, ಒಬ್ಬ ಮಗನಿಗೆ ಉಪ ನಿರ್ದೇಶಕರ ಹುದ್ದೆ ನೀಡುವುದಾಗಿ ಹೇಳಿ 12.24 ಲಕ್ಷ ರೂ. ವಂಚಿಸಿದ್ದಾನೆ. ಇದಕ್ಕಾಗಿ ನಕಲಿ ನೇಮಕಾತಿ ಪತ್ರ ಸೃಷ್ಟಿಸಿ, ಸರ್ಕಾರಿ ಅಧಿಕಾರಿಗಳ ಸಹಿಯನ್ನು ನಕಲು ಮಾಡಿದ್ದಾನೆ.

ಹಿರಿಯ ಲೆಕ್ಕಾಧಿಕಾರಿ ಹುದ್ದೆಗೆ ವಂಚನೆ:

ಇನ್ನೊಂದು ಪ್ರಕರಣದಲ್ಲಿ, ಕಲ್ಲಹಳ್ಳಿಯ ಮಲ್ಲೇಶ್ ಪತ್ನಿಗೆ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಹಿರಿಯ ಲೆಕ್ಕಾಧಿಕಾರಿಯಾಗಿ ನೇಮಕ ಮಾಡಿಸುವುದಾಗಿ ಭರವಸೆ ನೀಡಿ 19 ಲಕ್ಷ ರೂ. ವಂಚಿಸಿದ್ದಾನೆ. ವಂಚನೆಯ ಭಾಗವಾಗಿ, ಸರ್ಕಾರದ ಅಧೀನ ಕಾರ್ಯದರ್ಶಿ, ಜಿಲ್ಲಾಧಿಕಾರಿ, ಕಂದಾಯ ಇಲಾಖೆ ಮತ್ತು ಸಿಎಂ ಸಿದ್ದರಾಮಯ್ಯ ಸಹಿ ಇರುವ ನಕಲಿ ಟಿಪ್ಪಣಿಗಳನ್ನು ಸೃಷ್ಟಿಸಿ, ವಾಟ್ಸಾಪ್ ಮೂಲಕ ಕಳುಹಿಸಿದ್ದಾನೆ.

ಆದರೆ, ಒಂದು ತಿಂಗಳಾದರೂ ಕೆಲಸ ಪಡೆಯಲು ಸಾಧ್ಯವಾಗದಾಗ, ಮಲ್ಲೇಶ್ ಮಂಡ್ಯ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ವಿಚಾರಣೆ ನಡೆಸಿದಾಗ, ವೆಂಕಟೇಶ್ ನೀಡಿದ ಎಲ್ಲಾ ದಾಖಲೆಗಳು ಸುಳ್ಳು ಎಂಬುದು ಬಹಿರಂಗಗೊಂಡಿತು.ಇದನ್ನು ಓದಿ –ಪ್ರಯಾಗ್‌ರಾಜ್‌ ಕುಂಭಮೇಳಕ್ಕೆ ತೆರಳಿದ್ದ ಕುಟುಂಬ – 6 ಮಂದಿ ಅಪಘಾತದಲ್ಲಿ ದುರ್ಮರಣ

ಈ ಸಂಬಂಧ, ಪೊಲೀಸರು ಈಗಾಗಲೇ ಆರೋಪಿಯನ್ನು ಬಂಧಿಸಿದ್ದು, ಈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!