ಕೊರೊನಾದಿಂದಾಗಿ ಈಗಾಗಲೇ ಎಲ್ಲಾ ಕ್ಷೇತ್ರಗಳು ಸಾಕಷ್ಟು ನಷ್ಟವಾಗಿದೆ. ಅದರ ಬಿಸಿ ಈಗ ಮಲೆ ಮಹಾದೇಶ್ವರ ಸ್ವಾಮಿ ಬೆಟ್ಟದ ಆದಾಯಕ್ಕೂ
ತಟ್ಟಿದೆ.
ಕೋವಿಡ್ ಇರುವ ಕಾರಣ ಸ್ವಾಮಿ ಯ ದರ್ಶನಕ್ಕೆ ನಿರ್ಬಂಧ ಹೇರಲಾಗಿತ್ತು. ಇದರಿಂದ ಬರೊಬರಿ ಆದಾಯದ ಕುಸಿತವಾಗಿದೆ.
ಸರ್ಕಾರ ಲಾಕ್ ಡೌನ್ ನಿರ್ಬಂಧ ಮಾಡಿದಾಗ ಬೆಟ್ಟದ ಪ್ರವೇಶಕ್ಕೆ ಅವಕಾಶವಿರಲಿಲ್ಲ.ಈಗ ನಿರ್ಬಂಧವನ್ನು ಸಡಿಲಗೊಳಿಸಲಾಗಿದೆ.ದರ್ಶನಕ್ಕೆ ಮಾತ್ರ ಅವಕಾಶ ನೀಡಿದೆ. ಆದರೆ ಭಕ್ತರ ಸಂಖ್ಯೆಯೂ ಕುಸಿತವಾಗಿ ದೆ., ಜೊತೆಗೆ ಆದಾಯ ಮೇಲೆ ಹೊಡೆತ ಬಿದ್ದಿತ್ತು.
ಶ್ರೀ ಕ್ಷೇತ್ರ ಮಲೆ ಮಹಾದೇಶ್ವರ ಸ್ವಾಮಿ ಬೆಟ್ಟದ ವಾಣಿಜ್ಯ ಸಂಕೀರ್ಣ ಹುಂಡಿ ಎಣಿಕೆ ಕಾರ್ಯವು ಶುಕ್ರವಾರ ನಡೆದಿದೆ. 1,47,14,348ರೂ. ನಗದು, 17ಗ್ರಾಂ,ಚಿನ್ನ ಹಾಗೂ 985 ಗ್ರಾಂ ಸಂಗ್ರಹ ವಾಗಿದೆ.