ನಾ ಈಜು ಕೊಳದಲ್ಲಿ
ತೇಲುತಿದ್ದೆ
ಏನದು ಅಮ್ಮ!
ಈಜು ಕೊಳವಲ್ಲ
ಅದು ನನ್ನ ಗರ್ಭದ
ಜೀವಕೊಳ ಕಂದ !
ಹೊಕ್ಕಳಿಂದ ಬಳ್ಳಿಯೊಂದು
ಹೊರ ಬಂದಂತಿತ್ತು
ಏನದು ಅಮ್ಮ !
ಅದು ಬಳ್ಳಿಯಲ್ಲ
ತುತ್ತಿಡುವ ನನ್ನ
ಇನ್ನೊಂದು ಕೈ ಕಂದ !
ಹೊರಜಗತ್ತಿಗೆ ಬರುವಾಗ
ಆಕ್ರಂದನವ ಆಲಿಸಿದೆ
ಏನದು ಅಮ್ಮ!
ಆಕ್ರಂದನವಲ್ಲ ಅದು
ಬಚ್ಚಿಡದ ನನ್ನ ಸಡಗರದ
ಸಂಕೇತ ಕಂದ !
ನಿನ್ನ ಹೊಟ್ಟೆಯ
ಮೇಲೆ ಗೆರೆಗಳ ಕಂಡೆ
ಏನದು ಅಮ್ಮ!
ಗೆರೆಗಳಲ್ಲ ಅವು
ನೀ ಬರೆದ ಮೊದಲ
ಚಿತ್ತಾರ ಕಂದ !
ನಾ ಅತ್ತರೆ ಅಳುವೇ
ನಾ ನಕ್ಕರೆ ನಗುವೆ ಸೋಜಿಗ
ಏನದು ಅಮ್ಮ!
ಅಳಲು-ನಗಲು ನಿನ್ನ
ರೂಪದಾಕೃತಿಗೆ ನಾ ಉಸಿರಿನ
ಬಣ್ಣ ಬಳಿದವಳು ಕಂದ !
===============
ಡಾ. ರಾಜಶೇಖರ ನಾಗೂರ
ಹೆಚ್.ಡಿ ರೇವಣ್ಣಗೆ ಮಧ್ಯಾಹ್ನದಿಂದ ಹೊಟ್ಟೆ ಉರಿ, ಎದೆನೋವು ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಿಸಿದ್ದ ಎಸ್ಐಟಿ ಅಧಿಕಾರಿಗಳು ಎದೆ ಉರಿ… Read More
ಬೆಂಗಳೂರು : ಸೋಮವಾರ ಬಾಗಲಕೋಟೆ ಮತ್ತು ಬೀದರ್ ಜಿಲ್ಲೆಗಳಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಸರ್ಕಾರಿ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಸಹಾಯಕ… Read More
ನವದೆಹಲಿ : ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನದಲ್ಲಿ ಶೇ. 9.45% ರಷ್ಟು ಮತದಾನವಾಗಿದೆ ಎಂದು ಎಂದು ಚುನಾವಣಾ… Read More
ಶಿವಮೊಗ್ಗ : ರಾಷ್ಟ್ರ ಮಟ್ಟದಲ್ಲಿ ಹಾಸನದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈ ಪ್ರಕರಣ ಸದ್ದು ಮಾಡುತ್ತಿದ್ದು, ಪ್ರಜ್ವಲ್… Read More
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಮೊದಲ ಬಾರಿಗೆ ಪ್ರಜ್ವಲ್ ರೇವಣ್ಣ (Prajwal Revanna) ವಿಡಿಯೋ ಪ್ರಕರಣಕ್ಕೆ… Read More
ಮಂಡ್ಯ :ನೆನ್ನೆ ಮಳೆಯಿಂದಾಗಿ ಮರವೊಂದು ಕಾರಿನ ಮೇಲೆ ಬಿದ್ದ ಪರಿಣಾಮ ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಡ್ಯ ನಗರದ ಜನರಲ್… Read More
This website uses cookies.
Leave a Comment