Editorial

ಎಲ್ಲವನ್ನೂ ಕಳೆದುಕೊಂಡು, ನನ್ನನ್ನು ಮತ್ತೆ ಪಡೆಯುವಾಸೆ…..

ಜೀವ ನೀಡುವ ತಂದೆ,
ಜನ್ಮ ನೀಡುವ ತಾಯಿ,
ತುತ್ತು ನೀಡುವ ಅಕ್ಕ,
ಬಟ್ಟೆ ತೊಡಿಸುವ ಅಣ್ಣ,
ಕೈ ಹಿಡಿದು ನಡೆಯವ ತಮ್ಮ,
ಅಪ್ಪಿ ಮಲಗುವ ತಂಗಿ,
ನನ್ನೊಳಗಿನ ಗಂಡ/ಹೆಂಡತಿ,
ನನ್ನ ಭವಿಷ್ಯವೇ ಆದ ಮಗ,
ಸರ್ವಸ್ವವೇ ಆದ ಮಗಳು,
ನನ್ನಾಟದ ಜೀವ ಅಜ್ಜ,
ನನ್ನ ಮುನಿಸಿನ ಜೀವ ಅಜ್ಜಿ……….

ವಾವ್,
ನಮ್ಮನ್ನು ಬೆಸೆದ ರಕ್ತ ಸಂಬಂಧಗಳೇ ನಿಮಗೂ ನಿಯತ್ತಾಗಿರಲು ಸಾಧ್ಯವಾಗುತ್ತಿಲ್ಲ.
ನಿಮ್ಮ ಋಣ ತೀರಿಸಲೂ ಸಾಧ್ಯವಾಗುತ್ತಿಲ್ಲ.

ಎಷ್ಟೊಂದು ಪ್ರೀತಿ,
ಎಷ್ಟೊಂದು ಪ್ರೇಮ,
ಎಷ್ಟೊಂದು ಅಕ್ಕರೆ,
ಎಷ್ಟೊಂದು ವಾತ್ಸಲ್ಯ,
ಎಷ್ಟೊಂದು ತ್ಯಾಗ,
ನೀವು ನನಗಾಗಿ ಮಾಡಿರುವಿರಿ,

ಆದರೆ,
ನಾನು ಮಾಡುತ್ತಿರುವುದೇನು ?

ಬಾಲ್ಯ ನನಗರಿವಿಲ್ಲದೆ ಕಳೆದೆ,
ಪ್ರೌಡದಲ್ಲಿ ನಿಮ್ಮನ್ನು ನಿರ್ಲಕ್ಷಿಸುತ್ತಾ ಕಳೆದೆ,
ಯೌವ್ವನದಲ್ಲಿ ನಿಮ್ಮನ್ನು ದ್ವೇಷಿಸುತ್ತಾ ಬೆಳೆದೆ,
ಉದ್ಯೋಗ/ ವ್ಯವಹಾರದಲ್ಲಿ ನಿಮ್ಮಿಂದ ದೂರವಾಗಿ ನಡೆದೆ,
ಮುಪ್ಪಿನಲಿ ಕೆಲವರು ನನ್ನಿಂದಲೇ ದೂರವಾದಿರಿ,
ಕೆಲವರನ್ನು ನಾನೇ ದೂರ ಮಾಡಿದೆ,

ಛೆ,
ಎಂತಹ ಅನ್ಯಾಯ,
ಎಂತಹ ವಿಪರ್ಯಾಸ,
ಎಂತಹ ಪಶ್ಚಾತ್ತಾಪ,
ಎಂತಹ ದೌರ್ಭಾಗ್ಯ,
ಎಂತಹ ಪರಿಸ್ಥಿತಿ,

ತಂದೆ ತಾಯಿಯನ್ನು ದೇವರಂತೆ ಪೂಜಿಸಬೇಕೆಂದಿದ್ದೆ,
ಮದುವೆ ಮಕ್ಕಳ ನಂತರ ಅವರು ಹೆಚ್ಚು ಕಾಡಲೇ ಇಲ್ಲ,
ಅಜ್ಜ ಅಜ್ಜಿಗೆ ಆಶ್ರಯ ನೀಡಬೇಕೆಂದಿದ್ದೆ,
ಅವರು ನೆನಪಾಗಲೇ ಇಲ್ಲ,
ಹೆಂಡತಿ/ಗಂಡನಿಗೆ, ನನ್ನ ಎಲ್ಲವನ್ನೂ ನೀಡಬೇಕೆಂದಿದ್ದೆ,
ಆದರೆ, ಏನೋ ಕಸಿವಿಸಿಯಾಗಿ ಒಂದಾಗಿದ್ದರೂ ಅಪರಿಚಿತರಂತಾದೆ,
ನನ್ನ ಭವಿಷ್ಯದ ಕನಸಾದ ಮಗ ಮದುವೆಯ ನಂತರ ನನ್ನಿಂದ ದೂರಾದ,
ಮಗಳು ಪರರ ಪಾಲಾದಳು…

‌ಕಳೆದು ಹೋಗಿದ್ದೇನೆ ನಾನು……
ದೂರದೂರಿನಲ್ಲಿ ಅಪ್ಪ ಅಮ್ಮ,
ನಗರದಲ್ಲಿ ಹೆಂಡತಿ ಮಕ್ಕಳು,
ಪ್ರವಾಸೋದ್ಯಮ ಉದ್ಯೋಗದಲ್ಲಿ ನಾನು,

ಕಳೆದು ಹೋಗಿದ್ದೇನೆ ನಾನು…….. ‌
ಗಾಂಧಿಗಿರಿ, ಬಸವ ಧರ್ಮ,
ಅಂಬೇಡ್ಕರ್ ವಾದ, ಮನುಸ್ಮೃತಿ, ಹಿಂದೂ ಧರ್ಮ, ಭಾರತೀಯತೆಯ ಗೊಂದಲದಲ್ಲಿ,

ಕಳೆದು ಹೋಗಿದ್ದೇನೆ ನಾನು………
ಪ್ರೀತಿಯಾವುದೋ,
ದ್ವೇಷವಾವುದೋ,
ವಂಚನೆಯಾವುದೋ,
ಶಾಂತಿಯಾವುದೋ,
ಅಸಹನೆಯಾವುದೋ,
ಅರ್ಥವಾಗದೆ,

ಕಳೆದು ಹೋಗಿದ್ದೇನೆ ನಾನು………
ಅಣ್ಣನ ಹುಡುಕಾಟದಲ್ಲಿ,
ತಂಗಿಯ ನೆನಪಿನಲ್ಲಿ,
ಸ್ನೇಹಿತನ ವಂಚನೆಯಲ್ಲಿ,
ಸಂಬಂದಿಗಳ ಸ್ವಾರ್ಥದಲ್ಲಿ,
ನೆರೆಹೊರೆಯವರ ಕುಹುಕದಲ್ಲಿ,

ಕಳೆದು ಹೋಗಿದ್ದೇನೆ ನಾನು…….
ವೇಗದ ಬದುಕಿನಲ್ಲಿ,
ಕೆಲಸದ ಒತ್ತಡದಲ್ಲಿ,
ನಿದ್ದೆಯ ಮಂಪರಿನಲ್ಲಿ,
ಊಟದ ಕಲಬೆರಕೆಯಲ್ಲಿ,
ಅನಾರೋಗ್ಯದ ಭಯದಲ್ಲಿ,

ಕಳೆದು ಹೋಗಿದ್ದೇನೆ ನಾನು…….
ಬದುಕಿನ ಅಲೆದಾಟದಲ್ಲಿ,
ನೆಮ್ಮದಿಯ ಹಂಬಲದಲ್ಲಿ,
ಅಕ್ಷರಗಳ ನೆರಳಿನಲ್ಲಿ,
ಜೀವನದ ಅವಶ್ಯಕತೆಯಲ್ಲಿ,

ಕಳೆದೇ ಹೋಗಿದ್ದೇನೆ…..

ಹುಡುಕಿಕೊಡುವವರಾರು ?
ಎಲ್ಲರೂ ನನ್ನಂತೆ ಕಳೆದು ಹೋದವರೇ !!

ಎಲ್ಲವನ್ನೂ ಪಡೆದೆ,
ನನ್ನನ್ನು ನಾನು ಕಳೆದುಕೊಂಡೆ,
ಈಗ ,
ಎಲ್ಲವನ್ನೂ ಕಳೆದುಕೊಂಡು,
ನನ್ನನ್ನು ಮತ್ತೆ ಪಡೆಯುವಾಸೆ……

ಎಂತಹ ವಿಪರ್ಯಾಸ,
ಎಂತಹ ಮರ್ಮ,
ಎಂತಹ ನಿಗೂಢ,
ಎಂತಹ ತಿರುವುಗಳು.
ಎಂತಹ ಕನವರಿಕೆಗಳು,……..

ಭಾರತೀಯ ಮನಸ್ಸುಗಳ,
ಭಾರತದ ಸಾಮಾಜಿಕ ವ್ಯವಸ್ಥೆಯ,
ಕೆಲವು ಕೌಟುಂಬಿಕ ಮತ್ತು ಆಂತರ್ಯದ ಸಮಸ್ಯೆಗಳ ವ್ಯಂಗ್ಯ ಮತ್ತು ದುರಂತ
ನನ್ನ ಅನುಭವದ ಕಣ್ಣಲ್ಲಿ ಮೂಡಿದ ಚಿತ್ರಣ. ನಿಮ್ಮೆಲ್ಲರಿಗಾಗಿ………

  • ವಿವೇಕಾನಂದ. ಹೆಚ್.ಕೆ.
Team Newsnap
Leave a Comment
Share
Published by
Team Newsnap

Recent Posts

ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಬಜೆಟ್‌ನಲ್ಲಿ ಘೋಷಣೆ… Read More

May 16, 2024

ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ

ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಈ ಪ್ರಕರಣದಲ್ಲಿ… Read More

May 16, 2024

ಹಾಸನ : ಮೀನು ಹಿಡಿಯಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ಜಲ ಸಮಾಧಿ

ಹಾಸನ : ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ಕು ಮಕ್ಕಳು ಜಲ ಸಮಾಧಿ ಆದ ಘಟನೆ ಆಲೂರು ತಾಲೂಕಿನ, ತಿಮ್ಮನಹಳ್ಳಿ… Read More

May 16, 2024

ಪ್ರಜ್ವಲ್ ಪೆಂಡ್ರೈವ್ ಪ್ರಕರಣ : 10 ಪೆನ್ ಡ್ರೈವ್ ಪ್ರೀತಂ ಗೌಡ ಆಪ್ತರ ಮನೆಯಲ್ಲಿ ಪತ್ತೆ

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಆಪ್ತರ… Read More

May 16, 2024

ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಕ್ಕೆ ಸಂಚು; ಮೈಸೂರಿನಲ್ಲಿ ಶಂಕಿತ ಉಗ್ರನನ್ನು ಬಂಧಿಸಿದ ಎನ್‌ಐಎ

ಬೆಂಗಳೂರು : ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಿಸಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ)… Read More

May 15, 2024

ಹುಬ್ಬಳ್ಳಿಯಲ್ಲಿ ಮತ್ತೊಬ್ಬ ಯುವತಿಯ ಭೀಕರ ಹತ್ಯೆ

ಹುಬ್ಬಳ್ಳಿ : ಇಂದು ಪಾಗಲ್ ಪ್ರೇಮಿಯೊಬ್ಬ ಪ್ರೀತಿ ನಿರಾಕರಿಸಿದ್ದಕ್ಕೆ ಮನೆಗೆ ನುಗ್ಗಿ ಯುವತಿಗೆ ಚಾಕುವಿನಿಂದ ಮನಬಂದಂತೆ ಇರಿದು ಹತ್ಯೆಗೈದಿರುವ ಘಟನೆ… Read More

May 15, 2024