Categories: Main News

ಲೋಕಾಯುಕ್ತ ದಾಳಿ ಮತ್ತು ಮುದ್ದೆ ಸೊಪ್ಪಿನ ಸಾರು….

ನನ್ನ ಬಾಲ್ಯದಲ್ಲಿ ವಾರ ಪೂರ್ತಿ ಒಂದೇ ಹರಿದ ಬಟ್ಟೆ ಧರಿಸುತ್ತಿದ್ದೆ.

ವಾರದಲ್ಲಿ ಒಂದೇ ದಿನ ಅಂದರೆ ಭಾನುವಾರ ಮಾತ್ರ ಸ್ನಾನ.

ಪ್ರತಿದಿನ ಮುಂಜಾನೆ ಕಾಡಿಗೆ ಹೋಗಿ ಒಣಗಿದ ಸೌದೆ ತರಬೇಕಾಗಿತ್ತು.

ಪ್ರತಿದಿನದ ಊಟ ರಾತ್ರಿಯ ತಂಗಳು ಮತ್ತು ಬೆಳಗಿನ ಗಂಜಿ ಮಾತ್ರ.

ಶಾಲೆಯ ಮಧ್ಯಾಹ್ನದ ಉಪ್ಪಿಟ್ಟೇ ನನಗೆ ಪಂಚಾಮೃತ.

ರಾತ್ರಿ ಸೀಮೆಎಣ್ಣೆಯ ಬುಡ್ಡಿ ದೀಪಗಳೇ ನಮಗೆ ಬೆಳಕಿನ ಮೂಲಗಳು.

ಸರ್ಕಾರದ ಪಾಳುಬಿದ್ದ ಕಟ್ಟಡಗಳೇ ನಮ್ಮ ಶಾಲಾ ತರಗತಿಗಳು.

ಅತ್ಯುತ್ತಮ ಶಿಕ್ಷಕರ ಜೊತೆ ಕ್ರೂರ ಶಿಕ್ಷಕರೂ ನಮ್ಮ ಮೇಷ್ಟುಗಳು.

ಆದರೂ SSLC ಪರೀಕ್ಷೆಯಲ್ಲಿ FIRST CLASS ನಲ್ಲಿ ಪಾಸಾದೆ.

ಅನಂತರ PUC ಮತ್ತು BA ಕೂಡ ಸರ್ಕಾರಿ ಕಾಲೇಜಿನಲ್ಲೇ
ಓದಿ ಒಳ್ಳೆಯ ಅಂಕಗಳೊಂದಿಗೆ ಪಾಸಾದೆ.

ಆಗಲೂ ಹೊಟ್ಟೆ ತುಂಬಾ ಊಟ ಮಾಡುತ್ತಿದ್ದುದು ಕೇವಲ
ಮದುವೆ ಸಮಾರಂಭಗಳಲ್ಲಿ ಮಾತ್ರ.

ಸೇಬು ಹಣ್ಣು ನಾನು ಕೆಲಸಕ್ಕೆ ಸೇರುವವರೆಗೂ ತಿಂದೇ ಇರಲಿಲ್ಲ.

ಹಾಗೂ ಹೀಗೂ ಕಷ್ಟಪಟ್ಟು ಓದಿ KAS ( KPSC ) ಬರೆದು ಅದರಲ್ಲಿ SELECT ಆದೆ.

ಯಾರದೋ ಕ್ಯೆಕಾಲು ಹಿಡಿದು ತಹಶೀಲ್ದಾರ್ ಆಗಿ ನೇಮಕವಾದೆ.

ಬಾಲ್ಯ, ಯೌವನದ ಹಸಿವು ಅವಮಾನಗಳು ಒಮ್ಮೆಲೇ ಎಗರಿ ಬಿದ್ದವು,

ಸಂಬಳದ ಜೊತೆಗೇ ಕುಳಿತಲ್ಲೇ ಲಕ್ಷಾಂತರ ಹಣ ಲಂಚದ ರೂಪದಲ್ಲಿ ಹರಿದು ಬರತೊಡಗಿತು.

ಹಣ ಎಲ್ಲಿ ಇಡುವುದು ಎಂಬುದೇ ಸಮಸ್ಯೆಯಾಯಿತು.

ಬಡತನದಲ್ಲಿ ನನ್ನನ್ನು ಮೂದಲಿಸಿದ್ದ ತುಚ್ಚವಾಗಿ ಕಂಡಿದ್ದ ನಾಯಿ ನರಿಗಳು ಕೂಡ ಮಹಾರಾಜನಂತೆ ನೋಡತೊಡಗಿದರು.

ಪ್ರತಿದಿನವೂ ಭರ್ಜರಿ ಸಂತೋಷ ಕೂಟಗಳೇ
ಶ್ರೀಮಂತ ಹೋಟೇಲ್ ಗಳಲ್ಲಿ.

ಬೇರೆ ಬೇರೆ ಕಡೆ ಆಸ್ತಿಗಳು ನನ್ನ ಹೆಸರಿಗೆ ಸೇರತೊಡಗಿದವು,

ಸ್ವರ್ಗಕ್ಕೆ ಮೂರೇ ಗೇಣು. ನನಗೆ ಗೊತ್ತಿಲ್ಲದೆ ನನ್ನ ಅಹಂಕಾರವೂ ಮೇರೆ ಮೀರಿತ್ತು.

ಬಾಲ್ಯದ ಕೀಳರಿಮೆ ಅದಕ್ಕೆ ಕಾರಣವಾಗಿರಬಹುದು.

ಆದರೆ……….,

ಒಂದು ಬೆಳಗಿನ ಜಾವ ಇದ್ದಕ್ಕಿದ್ದಂತೆ ಲೋಕಾಯುಕ್ತ ಪೊಲೀಸರಿಂದ ನನ್ನ ಮನೆ ಮೇಲೆ ದಾಳಿ,

ಎಚ್ಚೆತ್ತುಕೊಳ್ಳುವ ಮುನ್ನ ಎಲ್ಲಾ ಬಟಾ ಬಯಲು,

ಬೆಳಕು ಹರಿಯುವ ಮುನ್ನ ಅಪಾರ ಹಣ ಆಸ್ತಿ ವಶ. ಟಿವಿಯಲ್ಲಿ ಮಾನ ಹರಾಜು,
ಬಂಧನ, ಸಂಜೆಯೊಳಗೆ ಜೈಲಿಗೆ ರವಾನೆ.

ಈಗ ತಾನೇ ಕ್ಯೂನಲ್ಲಿ ನಿಂತು, ತಟ್ಟೆ ಹಿಡಿದು ಊಟ ಹಾಕಿಸಿಕೊಂಡು ಮುದ್ದೆ ಮುರಿಯುತ್ತಿದ್ದೇನೆ.

ಈಗ, ಒಮ್ಮೆಗೇ, ಆ ಬಡತನದ ದಿನಗಳು ನೆನಪಾಗುತ್ತಿವೆ.
ಕಣ್ಣ ನೀರು ತಟ್ಟೆಗೆ ಬೀಳುತ್ತಿದೆ.

ಆ ದಿನಗಳು, ಆ ಬೆಳದಿಂಗಳ ರಾತ್ರಿಗಳಲ್ಲಿ ಮನೆಯ ಮುಂದೆ ತಿನ್ನುತ್ತಿದ್ದ ಮುದ್ದೆ ಸೊಪ್ಪಿನ ಸಾರು
ಯಾಕೋ ನೆನಪಾಗುತ್ತಿದೆ.

ಈ ನೋವಿನಲ್ಲೂ ಆ ಮಧುರ ನೆನಪುಗಳು ಮುದ ನೀಡುತ್ತಿದೆ.

ಹಾಗೇ ಅತ್ತು ಅತ್ತು ಮನಸ್ಸು ಹಗುರಾಯಿತು.
ಬದುಕಿನ ನಿಜ ಅರ್ಥ ಅರಿವಾಯಿತು.

ಎಲ್ಲವನ್ನೂ ಕಳೆದುಕೊಂಡರೂ ನನ್ನನ್ನು ನಾ ಪಡೆದೆ ಎಂಬ ಸಮಾಧಾನದ ಭಾವ ಮೂಡಿತು.

ಆಡಂಬರದ ಅಹಂಕಾರದ ಜೀವನಕ್ಕಿಂತ ಸಹಜ ಸರಳ ಪ್ರಾಮಾಣಿಕ ಬದುಕೇ ನೆಮ್ಮದಿಯ ತಾಣ ಎಂಬ ಜ್ಞಾನೋದಯವಾಯಿತು.

  • ವಿವೇಕಾನಂದ. ಹೆಚ್.ಕೆ.
Team Newsnap
Leave a Comment
Share
Published by
Team Newsnap

Recent Posts

ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಬೆಳೆಯನ್ನು ಬೃಹತ್ ಉದ್ಯಮವಾಗಿ ಬೆಳೆಯಾಗುತ್ತಿದೆ

ಮೈಸೂರು: ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದ್ದು, ದೇಶದ ಜಿ ಡಿಪಿ… Read More

September 20, 2024

BMTC ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ : ಪ್ರಾಣಾಪಾಯದಿಂದ ಪಾರು

ಬೆಂಗಳೂರು : BMTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ,ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ… Read More

September 20, 2024

ಲೋಕಾ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ಮಂಗಳೂರು : ಕಾಮಗಾರಿಯ ಬಿಲ್ ಪಾವತಿಗಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲೋಕಾಯುಕ್ತ… Read More

September 20, 2024

ಕರುಳಿನ ಆರೋಗ್ಯ ಚೇತರಿಕೆಗೆ ಕರಿ ಎಳ್ಳು ರಾಮಬಾಣ !

ಎಳ್ಳು ನೋಡಲು ಪುಟ್ಟದಾಗಿದ್ದು ಕಟುವಾದ ಯಾವ ವಾಸನೆಯೂ ಇಲ್ಲದ, ತನ್ನೊಡನೆ ಬೆರೆತ ಇತರ ವಸ್ತುಗಳ ಪರಿಮಳವನ್ನು ತನ್ನೊಡನೆ ಹೀರಿಕೊಳ್ಳುವ ವಿಶೇಷಗುಣ… Read More

September 20, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಸೆಪ್ಟೆಂಬರ್ 18 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 68,240 ರೂಪಾಯಿ ದಾಖಲಾಗಿದೆ. 24… Read More

September 20, 2024

ಅತ್ಯಾಚಾರ ಆರೋಪ : ಶಾಸಕ ಮುನಿರತ್ನ ಬಂಧನ

ಬೆಂಗಳೂರು: ಇಂದು ಆರ್.ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಕಗ್ಗಲಿಪುರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಇಂದಿನಿಂದ… Read More

September 20, 2024