ಮನುಷ್ಯರಿಗಿಂತ ಪ್ರಾಣಿನೇ ವಾಸಿ ! ಅನುಶ್ರೀ ಮುದ್ದಾಡಿದ್ದು ಯಾರನ್ನು?

Team Newsnap
1 Min Read

ಮುದ್ದಾಡುವ ವೇಳೆ ಸಿಕ್ಕಿಬಿದ್ದ ನಿರೂಪಕಿ ಅನುಶ್ರೀ..! ಯಾರ ಜೊತೆ ಗೊತ್ತಾ?

ತಲೆ ಬರಹ ನೋಡಿ ಟೆನ್ಷನ್ ಆಗಬೇಡಿ. ಕಾತುರ, ಕುತೂಹಲ ಇಟ್ಟುಕೊಳ್ಳಿ. ನಿಧಾನವಾಗಿ ಓದಿ……

ಎಲ್ಲರಿಗೂ ಗೊತ್ತಿರುವ ಸಂಗತಿ. ಕನ್ನಡದ ಖ್ಯಾತ ರಿಯಾಲಿಟಿ ಶೋ ಸರಿಗಮಪದ ನಿರೂಪಕಿಯಾಗಿ, ನಟಿ ಅನುಶ್ರೀ ಸಾಕಷ್ಟು ದಿನಗಳಿಂದ ಮಿಂಚುತ್ತಲೇ ಬರುತ್ತಿದ್ದರು. ಈಗ ವಿವಾದ ಕೊಂಡಿಯಲ್ಲಿ ಸಿಲುಕಿ ಹಾಕಿಕೊಂಡು ಕೊಂಚ ಡೌನ್ ಆಗಿದ್ದಾರೆ.

ಆದರೂ ಅನುಶ್ರೀ ಮಾತಿನ ಶೈಲಿ,ಮುದ್ದು ಮೊಗದ ನಗುವಿನ ಮುಖ, ಕರ್ನಾಟಕದ ತುಂಬೆಲ್ಲಾ ಮನೆ
ಮಾತಾಗಿದ್ದಾರೆ. ಹಳ್ಳಿ ಜನರ ಮನೆಮಗಳು ಎಂಬುದಾಗಿ ಖ್ಯಾತಿಯೂ ಇದೆ.

ಇತ್ತೀಚೆಗೆ ಡ್ರಗ್ಸ್ ವಿಷಯದಲ್ಲಿ ನಿರೂಪಕಿ ಅನುಶ್ರೀ ಹೆಸರು ಕೇಳಿ ಬಂತು. ಸಾಕಷ್ಟು ಅಭಿಮಾನಿಗಳು ಈಕೆಯ ವಿಚಾರದಲ್ಲಿ ನೆಗೆಟಿವ್ ಆಗಿ ಯೋಚನೆ ಮಾಡಲು ಆರಂಭಿಸಿದರು. ಬಳಿಕ ಅನುಶ್ರೀ ವಿಚಾರಣೆ ಮಾಡುತ್ತಿದ್ದ ಅಧಿಕಾರಿ ಕೂಡ ಎತ್ತಂಗಡಿ ಆದರು. ತದನಂತರ ಕುಮಾರಸ್ವಾಮಿಯವರು ಅನುಶ್ರೀ ವಿಚಾರದಲ್ಲಿ ಮಾತನಾಡಿದರು. ಪ್ರಶಾಂತ್ , ಈಕೆಗೆ ಶುಗರ್ ಡ್ಯಾಡಿ ಸಪೋರ್ಟ್ ಇದೆ ಎಂಬ ಮಾತು ಹೇಳಿದ್ದು ಜನರ ಮನಸ್ಸಿನಲ್ಲಿ ಇದೆ.

ಕೊನೆಗೆ ವಿಚಾರಣಾ ಅಲ್ಲಿಗೆ ನಿಂತು ಹೋಗಿ, ಅಭಿಮಾನಿಗಳು ಯಾವ ವಿಷಯ ನಂಬಬೇಕು ಯಾವ ವಿಷಯ ನಂಬಬಾರದು ಎನ್ನುವ ಅನುಮಾನದಲ್ಲಿ ಬಿದ್ದುಬಿಟ್ಟರು.

ಮುದ್ದಾಡಿದ್ದು ಹೊಸ ಸುದ್ದಿ!

ಈ ನಡುವೆ ಇದೀಗ ನಿರೂಪಕಿ ಅನುಶ್ರೀ ಯವರು ಮುದ್ದಾಡುತ್ತಿರುವ ವೇಳೆ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ. ಅವರೇ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಕೂಡ ಹಂಚಿಕೊಂಡಿದ್ದಾರೆ.

ಅನುಶ್ರೀ , ನೀವು ಊಹಿಸಿಕೊಂಡಂತೆ ಬೇರೆ ಯಾರಿಂದಿಗೂ ಅಲ್ಲ. ತಮ್ಮ ಮುದ್ದಿನ ನಾಯಿ ಜೊತೆ ಮುದ್ದು ಮಾಡುತ್ತಿರುವ ವಿಡಿಯೋ ಒಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಮತ್ತು ಮನುಷ್ಯರಿಗಿಂತ ಪ್ರಾಣಿಗಳೇ ಮೇಲು ಎನ್ನುವ ಮಾತನ್ನು ಹೇಳಿ, ಅನುಶ್ರೀ ನೋವಿನಲ್ಲಿದ್ದಾರೆ ಎಂಬುದಾಗಿ ತೋರಿಸಿಕೊಂಡಿದ್ದಾರೆ.

Share This Article
Leave a comment