January 28, 2026

Newsnap Kannada

The World at your finger tips!

leopard , attack ,

ಮಂಡ್ಯದಲ್ಲಿ ಜಮೀನಿಗೆ ಹೋದ ರೈತನ ಮೇಲೆ ಚಿರತೆ ದಾಳಿ

Spread the love

-ರೈತ ಪ್ರಾಣಾಪಾಯದಿಂದ ಪಾರು

ಮಂಡ್ಯ: ಜಮೀನಿಗೆ ನೀರು ಹಾಯಿಸಲು ಹೋದಾಗ ರೈತನ ಮೇಲೆ ಏಕಾಏಕಿ ಚಿರತೆ ದಾಳಿ ಮಾಡಿದ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ನಡೆದಿದೆ.

ಕೆಸ್ತೂರು ಗ್ರಾಮದ ರೈತ ರಾಮು ತಮ್ಮ ಜಮೀನಿಗೆ ತೆರಳಿದ್ದ ವೇಳೆ ಚಿರತೆ ಆಕಸ್ಮಿಕವಾಗಿ ದಾಳಿ ಮಾಡಿದ್ದು, ಇದರಿಂದ ಅವರು ಗಂಭೀರ ಗಾಯಗೊಂಡಿದ್ದಾರೆ. ಚಿರತೆ ಅವರ ಬೆನ್ನು ಮತ್ತು ಕುತ್ತಿಗೆ ಭಾಗಕ್ಕೆ ತೀವ್ರ ಗಾಯ ಮಾಡಿದೆ.


ಇದನ್ನು ಓದಿ -ಸಚಿವ ಸಂಪುಟ ಸಭೆಯ ಮುಖ್ಯ ನಿರ್ಣಯಗಳು: ಅಧಿಕ ಬಡ್ಡಿಗೆ 10 ವರ್ಷ ಶಿಕ್ಷೆ

ಗಾಯಗೊಂಡ ರೈತನನ್ನು ತಕ್ಷಣವೇ ಮದ್ದೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ರೈತ ರಾಮು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

error: Content is protected !!