ಐಪಿಎಲ್ 20-20ಯ 44ನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ವಿರುದ್ಧ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 12 ರನ್ಗಳ ಅಮೋಘ ವಿಜಯ ಸಾಧಿಸಿತು.
ದುಬೈನ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ KXIPತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ಕೆಕೆಆರ್ ತಂಡದಿಂದ ಆರಂಭಿಕ ಆಟಗಾರರಾಗಿ ಎಸ್. ಗಿಲ್ ಹಾಗೂ ಎನ್. ರಾಣಾ ಫೀಲ್ಡಿಗಿಳಿದರು. ಗಿಲ್ 45 ಎಸೆತಗಳಿಗೆ 57 ರನ್ ಗಳಿಸಿದರೆ ರಾಣಾ ಶೂನ್ಯಕ್ಕೆ ಪೆವಿಲಿಯನ್ ಸೇರಿದರು. ನಂತರ ಬಂದ ಇ. ಮಾರ್ಗನ್ 25 ಎಸೆತಗಳಿಗೆ 40 ರನ್ ಗಳಿಸಿದರೂ ತಂಡ ಸೋಲಿನ ಹಾದಿ ತುಳಿಯಬೇಕಾಯಿತು. ಪಂಜಾಬ್ ತಂಡದ ಬೌಲರ್ಗಳಾದ ಶಮಿ (3ವಿಕೆಟ್), ಜೋರ್ಡನ್ (2 ವಿಕೆಟ್) ಹಾಗೂ ಬಿಷ್ಣೋಯಿ (2 ವಿಕೆಟ್) ಅವರ ಬೌಲಿಂಗ್ ಕೆಕೆಆರ್ ಬ್ಯಾಟ್ಸ್ಮನ್ಗಳನ್ನು ಕಟ್ಟಿ ಹಾಕಿತು. ಕೆಕೆಆರ್ ತಂಡ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತು.
ಕೆಕೆಆರ್ ತಂಡ ನೀಡಿದ ಗುರಿಗೆ ಪ್ರತಿಯಾಗಿ ಮೈದಾನಕ್ಕೆ ಪಂಜಾಬ್ ತಂಡದ ಕೆ.ಎಲ್. ರಾಹುಲ್ ಮತ್ತು ಎಂ. ಸಿಂಗ್ ಮೈದಾನಕ್ಕೆ ಬಂದರು. ರಾಹುಲ್ 25 ಎಸೆತಗಳಿಗೆ 28 ರನ್ ಗಳಿಸಿ ವರುಣ್ ಚಕ್ರವರ್ತಿಯವರ ಬೌಲಿಂಗ್ಗೆ ಔಟಾದರು. ನಂತರದಲ್ಲಿ ಜೊತೆಯಾಟ ಆಡಿದ ಸಿಂಗ್ ಹಾಗೂ ಗೇಲ್ ಅವರ ಆಟ ತಮನಡವನ್ನು ಗೆಲ್ಲಿಸಿತು. ಗೇಲ್ 29 ಎಸೆತಗಳಿಗೆ 51 ರನ್ ಹಾಗೂ ಸಿಂಗ್ 56 ಬಾಲ್ಗಳಿಗೆ 66ರನ್ ಗಳಿಸಿ ತಂಡ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದರು. ಪಂಜಾಬ್ ತಂಡ 18.5 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿ ಪಂದ್ಯದಲ್ಲಿ ಜಯಭೇರಿ ಬಾರಿಸಿತು.
ಮುಂಬೈ: ನಿನ್ನೆ ಬೀಸಿದ ಬಿರುಗಾಳಿಗೆ ನಗರದಲ್ಲಿ ತಲೆಎತ್ತಿದ್ದ ಅಕ್ರಮ ಜಾಹಿರಾತು ಫಲಕ ಕುಸಿದು, 8 ಮಂದಿ ಸಾವನ್ನಪ್ಪಿದ್ದು, 60 ಜನರು… Read More
ಐದು ದಿನಗಳ ಜೈಲು ವಾಸಕ್ಕೆ ಅಂತ್ಯ 5 ಲಕ್ಷ ರು ಬಾಂಡ್ , ಎಸ್ ಐಟಿ ತನಿಖೆಗೆ ಸಹಕರಿಸಬೇಕು ಎಂಬ… Read More
ಬೆಂಗಳೂರು : ಪ್ರಜ್ವಲ್ ರೇವಣ್ಣ ವಿಚಾರದ ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಲೇ ಇದೆ. ಈ ಕೇಸ್ನಲ್ಲಿ ಸಂತ್ರಸ್ತೆ… Read More
ಹೈದ್ರಾಬಾದ್ : ನಿಜ ಹೇಳಬೇಕು ಅಂದ್ರೆ ಅಪಘಾವಾದ ಸ್ಥಳಕ್ಕೆ ಆಂಬ್ಯುಲೆನ್ಸ್ ಸುಮಾರು 20 ನಿಮಿಷಗಳ ಕಾಲ ತಡವಾಗಿ ಬಂದಿದ್ದಕ್ಕೆ ಆಕೆ… Read More
ನವದೆಹಲಿ : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ( CBSE ) 12ನೇ ತರಗತಿ ಫಲಿತಾಂಶ ಇಂದು ಪ್ರಕಟವಾಗಿದ್ದು… Read More
ಬೆಂಗಳೂರು : ಮುಂದಿನ 5 ದಿನ ರಾಜ್ಯದಾದ್ಯಂತ ಭಾರಿ ಮಳೆ ಆಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ… Read More
This website uses cookies.
Leave a Comment