Main News

ಕುಮಾರಸ್ವಾಮಿ ವೆಸ್ಟೆಂಡ್ ಗಿರಾಕಿ:ವಿಧಾನಸೌದಲ್ಲಿ ಕುಳಿತು ಕೆಲಸನೇ ಮಾಡಲಿಲ್ಲ – ಸಿದ್ದು

ನಾನು ಸತ್ಯವಾಗಿಯೂ ಹೇಳುತ್ತೇನೆ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕುಮಾರಸ್ವಾಮಿನೇ ಕಾರಣ. ಇವನು ವೆಸ್ಟೆಂಡ್ ಗಿರಾಕಿ. ಅಲ್ಲಿಂದಲೇ ಆಡಳಿತ ಮಾಡಿದ.
ವಿಧಾನ ಸೌಧದಲ್ಲಿ ಕುಳಿತ ಆಡಳಿತ ಮಾಡಲೇ ಇಲ್ಲ. ಇತ್ತ ಶಾಸಕರ ಕೈಗೂ ಸಿಗಲಿಲ್ಲ. ಕೊನೆಗೆ ಸರ್ಕಾರ ಬಿದ್ದು ಹೋಯಿತು.

  • ಹೀಗೆಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮನದಾಳದ ಮಾತುಗಳನ್ನು ಹೇಳಿದರು.

ಮೈಸೂರಿನಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಿದ್ದರಾಮಯ್ಯ, ಸುಖಾಸುಮ್ಮನೇ ನನ್ನ ಸರ್ಕಾರದ ಪತನಕ್ಕೆ ಸಿದ್ಧರಾಮಯ್ಯ ಕಾರಣ ಎಂದು ಕುಮಾರಸ್ವಾಮಿ ಅಪಪ್ರಚಾರ ಮಾಡುತ್ತಾನೆ. ನಾನು ಹೇಗೆ ಕಾರಣ ವಿವರಣೆ ನೀಡಲಿ ಎಂದರು.

ಸಮ್ಮಿಶ್ರ ಸರ್ಕಾರದ ಪತನಕ್ಕೆ ಕುಮಾರಸ್ವಾಮಿನೇ ನೇರ ಹೊಣೆ. ಇವನು ವೆಸ್ಟ್ ಎಂಡ್ ಗಿರಾಕಿ. ಅಲ್ಲಿಂದಲೇ ಕುಳಿತು ಆಡಳಿತ ಮಾಡಿದ. ಶಾಸಕರ ಸಮಸ್ಯೆಗಳನ್ನು ಕೇಳಲಿಲ್ಲ. ಕೈಗೂ ಸಿಗಲಿಲ್ಲ. ಅದಕ್ಕೆ ಅಧಿಕಾರ ಕಳೆದುಕೊಂಡ ಎಂದು ಹೇಳಿದರು.

ಇವರು ಸದಾ ಅಧಿಕಾರದಲ್ಲಿ ಇರಬೇಕು. ನಮ್ಮ ಜೊತೆ ಆಟ ಮುಗಿತು. ಈಗ ಬಿಜೆಪಿ ಜೊತೆಗೆ ಆಟ ಶುರು ಮಾಡಿದ್ದಾರೆ. ಇವರಿಗೆ ಅಧಿಕಾರ ಇಲ್ಲ ಅಂದ್ರೆ ಆಗೋಲ್ಲಾ ಎಂದು ಕುಮಾರಸ್ವಾಮಿಗೆ ತಿರುಗೇಟು ನೀಡಿದರು.

ಹೊಟ್ಟೆ ಕಿಚ್ಚು – ಸೋಲಿಸಿದರು

ನಾನು ಮುಖ್ಯಮಂತ್ರಿ ಬಡವರ ಪರವಾಗಿ ಸಮರ್ಥ ಆಡಳಿತವನ್ನು ನೀಡಿದೆ. ನನ್ನ ಐದು ವರ್ಷ ಅವಧಿಯಲ್ಲಿ ಆಡಳಿತ ಲೋಪವೇ ಇರಲಿಲ್ಲ. ಬಡವರಿಗೆ ಉಚಿತ ಅಕ್ಕಿ ಕೊಟ್ಟೆ ಅದು ತಪ್ಪಾ? ನನ್ನನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಎಲ್ಲರೂ ಒಂದಾಗಿ ಸೋಲಿಸಿದರು. ನಾನು ಏನು ತಪ್ಪು ಮಾಡಿದ್ದೆ. ಜನರು ನಮ್ಮನ್ನು ಯಾಕೆ ಸೋಲಿಸಿದರು ಎಂಬ ಪ್ರಶ್ನೆಗೆ ಇಂದಿಗೂ ಉತ್ತರ ಸಿಕ್ಕಿಲ್ಲ ಎಂದರು.

ನನ್ನ ಇಲ್ಲಿನ ಜನ ಸೋಲಿಸಿದರು. ನಾನು ಬಾದಾಮಿಯಲ್ಲೂ ಸೋತಿದ್ದರೆ ನನ್ನ ರಾಜಕೀಯ ಭವಿಷ್ಯ ಮುಗಿದು ಹೋಗುತ್ತಿತ್ತು. ನಾನು ಗೆದ್ದರೆ ಮತ್ತೊಂದು ಬಾರಿ ಮುಖ್ಯ ಮಂತ್ರಿ ಆಗುತ್ತೇನೆ ಎನ್ನುವ ಕಾರಣಕ್ಕಾಗಿ ಸೋಲಿಸಿದರು.
ಅದು ಹೊಟ್ಟೆ ಕಿಚ್ಚಿನ ಪರಮಾವಧಿ. ನನ್ನ ಪಕ್ಷದವರೂ ಕೆಲವರು ಸೇರಿ ತಂತ್ರ ಮಾಡಿದರು ಎಂದು ಸಿದ್ದರಾಮಯ್ಯ ತಮ್ಮ ಸೋಲಿನ ವಿಶ್ಲೇಷಣೆ ಮಾಡಿದರು.


ನಿಲ್ಲುತ್ತೇನೋ ಇಲ್ಲವೋ ಗೊತ್ತಿಲ್ಲ :

ನಾನು ಮುಂದಿನ ಚುನಾವಣೆಗೆ ನಿಲ್ಲುತ್ತೇನೋ ಇಲ್ಲವೋ ಗೊತ್ತಿಲ್ಲ. ಇನ್ನು ಆರು ತಿಂಗಳ ನಂತರ ನಿರ್ಧಾರ ಮಾಡುತ್ತೇನೆ. ಆದರೆ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎಂಬುದೂ ಕೂಡ ನಿರ್ಧಾರ ಆಗಿಲ್ಲ. ಆದರೆ ಒಂದು ಆಸೆ ಇತ್ತು. ಕಳೆದ ಬಾರಿ ನಾನು ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದಿದ್ದರೆ ನಿವೃತ್ತಿ ಘೋಷಣೆ ಮಾಡುವ ನಿಲುವು ತಳೆಯುತ್ತಿದ್ದೆ. ಏಕೆಂದರೆ ಆ ಕ್ಷೇತ್ರದ ಜನ ಸದಾ ನನಗೆ ಜನ್ಮ ನೀಡಿದ್ದಾರೆ. ಹೀಗಾಗಿ ನಂಗೆ ಇಲ್ಲಿ ಗೆಲ್ಲುವ ಆಸೆ ಇತ್ತು ಎಂದರು.

Team Newsnap
Leave a Comment
Share
Published by
Team Newsnap

Recent Posts

ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ

2015ರಲ್ಲಿ ಶಿಲ್ಪಾ ಎಂಬುವವರ ಜೊತೆ ಮದುವೆಯಾಗಿದ್ದ ನಟ ಚಂದು ತ್ರಿನಯನಿ ಸೀರಿಯಲ್​ನಲ್ಲಿ ಅಭಿನಯಿಸಿದ್ದ ತೆಲುಗು ನಟ ಚಂದು ನಟಿ ಪವಿತ್ರ… Read More

May 18, 2024

SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ

ಬೆಂಗಳೂರು : ಶಿಕ್ಷಣ ಸಚಿವ ಮಧು ಬಂಗಾರಪ್ಪ , ಮುಂದಿನ ವರ್ಷದಿಂದ SSLC ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಲಾಗುವುದಿಲ್ಲ ಎಂದು… Read More

May 17, 2024

ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಬೆಂಗಳೂರು : ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅರಸೀಕೆರೆ ಮೂಲದ ಕರಡಿಹಳ್ಳಿ… Read More

May 17, 2024

ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಬಜೆಟ್‌ನಲ್ಲಿ ಘೋಷಣೆ… Read More

May 16, 2024

ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ

ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಈ ಪ್ರಕರಣದಲ್ಲಿ… Read More

May 16, 2024

ಹಾಸನ : ಮೀನು ಹಿಡಿಯಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ಜಲ ಸಮಾಧಿ

ಹಾಸನ : ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ಕು ಮಕ್ಕಳು ಜಲ ಸಮಾಧಿ ಆದ ಘಟನೆ ಆಲೂರು ತಾಲೂಕಿನ, ತಿಮ್ಮನಹಳ್ಳಿ… Read More

May 16, 2024