ಐಪಿಎಲ್ 20-20ಯ 34ನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ, ಸನ್ ರೈಸರ್ಸ್ ಆಫ್ ಹೈದರಾಬಾದ್ ತಂಡದ ವಿರುದ್ಧ ಜಯಭೇರಿ ಮೊಳಗಿಸಿತು.
ದುಬೈನ ಶೇಕ್ ಜಯೇದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಸ್ಆರ್ಹೆಚ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ಕೆಕೆಆರ್ ತಂಡದ ಬ್ಯಾಟ್ಸ್ಮನ್ಗಳಾದ ಎಸ್. ಗಿಲ್ ಹಾಗೂ ಆರ್. ತ್ರಿಪಾಠಿ ಆಟ ಪ್ರಾರಂಭಿಸಿದರು. ಗಿಲ್ ಅವರು 37 ಬಾಲ್ಗಳಿಗೆ 36 ರನ್ ಗಳಿಸಿದರೆ, ತ್ರಿಪಾಠಿ 16 ಬಾಲ್ಗಳಿಗೆ 23 ರನ್ ಗಳಿಸುವ ಮೂಲಕ ಆಟವನ್ನು ಸಾಧಾರಣವಾಗಿಯೇ ಆರಂಭಿಸಿದರು. ಆದರೆ ತದನಂತರ ಬಂದ ಮಾರ್ಗನ್ ಮತ್ತು ಕಾರ್ತಿಕ್, ರಾಣಾ ಅವರು ತಂಡವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಮಾರ್ಗನ್ 23 ಬಾಲ್ಗಳಿಗೆ 34 ರನ್ ಗಳಿಸಿದರೆ, ರಾಣಾ 20 ಬಾಲ್ಗಳಿಗೆ 29 ರನ್ ಹಾಗೂ ಕಾರ್ತಿಕ್ 14 ಬಾಲ್ಗಳಿಗೆ 29 ರನ್ ಗಳಿಕೆ ಮಾಡಿದರು. ಕೆಕೆಆರ್ 20 ಓವರ್ಗಳಲ್ಲಿ ತಂಡ 5 ವಿಕೆಟ್ ನಷ್ಟಕ್ಕೆ 163 ರನ್ ಗಳಿಕೆ ಮಾಡಿತು.
ಎಸ್ಆರ್ಹೆಚ್, ಕೆಕೆಆರ್ ತಂಡದ ಸವಾಲನ್ನು ಗೆಲ್ಲುವಲ್ಲಿ ವಿಫಲವಾಯಿತು. ಎಸ್ಆರ್ಹೆಚ್ ತಂಡದಿಂದ ಜೆ. ಬೇರ್ಸ್ಟೋವ್ ಹಾಗೂ ಕೆ. ವಿಲಿಯಮ್ಸನ್ ಅವರು ಆರಂಭಿಕ ಬ್ಯಾಟ್ಸ್ಮನ್ಗಳಾಗಿ ಮೈದಾನಕ್ಕಿಳಿದರು. ಬೇರ್ಸ್ಟೋವ್ 28 ಬಾಲ್ಗಳಿಗೆ 36 ರನ್ ಹಾಗೂ ವಿಲಿಯಮ್ಸನ್ 19 ಬಾಲ್ಗಳಿಗೆ 29 ರನ್ ಗಳಿಕೆ ಮಾಡಿದರು. ಆದರೆ ತಂಡ ಗೆಲ್ಲಲು ತಂಡದ ನಾಯಕ ಡಿ. ವಾರ್ನರ್ 33 ಬಾಲ್ಗಳಿಗೆ 47 ರನ್ ಗಳಿಸಿ ತಂಡವನ್ನು ಗೆಲ್ಲಿಸಲು ವಿಫಲಿಸಲು ಪ್ರಯತ್ನಿಸಿದರು. ಎಸ್ಆರ್ಹೆಚ್ ತಂಡ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿ ಸೂಪರ್ ಓವರ್ಗೆ ದಾರಿ ಮಾಡಿ ಕೊಟ್ಟಿತು.
ಸೂಪರ್ ಓವರ್ನಲ್ಲಿ 3 ರನ್ ಅಧಿಕವಾಗಿ ಗಳಿಸುವ ಮೂಲಕ ಕೆಕೆಆರ್ ತಂಡ ಪಂದ್ಯವನ್ನು ಗೆದ್ದಿತು.
ಜನರ ಸಮಸ್ಯೆಗಳಿಗಿಂತ ಟಿವಿ ಚಾನಲ್ ಗಳಿಗೆ ಗಂಡ ಹೆಂಡ್ತಿ ಜಗಳಗಳ ಬಗ್ಗೆಯೇ ಹೆಚ್ಚು ಆಸಕ್ತಿ: ಸಿಎಂ ವ್ಯಂಗ್ಯ ಫೇಕ್ ನ್ಯೂಸ್… Read More
ಹಾಸನ: 10 ವರ್ಷದ ಬಾಲಕನೊಬ್ಬ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ಹಾಸನದ ಅಲೂರು ತಾಲೂಕಿನ ಚಿನ್ನಪುರದಲ್ಲಿ ನಡೆದಿದೆ. ಮೃತ ಬಾಲಕ ಸಚಿನ್… Read More
ಮೈಸೂರು: ಶುಕ್ರವಾರ ( 20-09-2024 ) ರಾತ್ರಿ ದಸರಾ ಗಜಪಡೆಯ ಆನೆ ಧನಂಜಯ ಮತ್ತೊಂದು ಆನೆ ಕಂಜನ್ ಮೇಲೆ ಏಕಾಏಕಿ… Read More
ಮೈಸೂರು: ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದ್ದು, ದೇಶದ ಜಿ ಡಿಪಿ… Read More
ಬೆಂಗಳೂರು : BMTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ,ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ… Read More
ಮಂಗಳೂರು : ಕಾಮಗಾರಿಯ ಬಿಲ್ ಪಾವತಿಗಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲೋಕಾಯುಕ್ತ… Read More
This website uses cookies.
Leave a Comment