January 29, 2026

Newsnap Kannada

The World at your finger tips!

bus

ಕೇರಳದ ಬಳಿ ಬಸ್ ಅಪಘಾತ: ದಿಬ್ಬಣದ ಬಸ್ ಉರುಳಿ ಐವರ ಸಾವು – 35 ಕ್ಕೂ ಹೆಚ್ಚು ಜನರಿಗೆ ಗಾಯ

Spread the love

ಪುತ್ತೂರಿನಿಂದ ಸುಳ್ಯ ಆಲೆಟ್ಟಿ ಮೂಲಕ ಪಾಣತ್ತೂರು ಕಡೆಗೆ ಹೋಗುತ್ತಿದ್ದ ಮದುವೆ ದಿಬ್ಬಣದ ಬಸ್ಸೊಂದು, ಕೇರಳದ ಪಾನತ್ತೂರು ಬಳಿ ಪಲ್ಟಿಯಾಗಿ ಸ್ಥಳದಲ್ಲಿಯೇ ಐವರು ಸಾವನ್ನಪ್ಪಿ, 35 ಮಂದಿ‌ ಗಾಯಗೊಂಡಿದ್ದಾರೆ.‌

ಕೊಡಗಿನ ಕರಿಕೆಯಲ್ಲಿ ನಡೆಯವ ಮದುವೆ ಕಾರ್ಯಕ್ರಮಕ್ಕೆ ಕಲ್ಲಪ್ಪಳ್ಳಿ ಪಾನತ್ತೂರು ಮೂಲಕ ಈ ಬಸ್ ತೆರಳುತ್ತಿತ್ತು.
ಈ ಬಸ್ ಕೇರಳದ ಪಾನತ್ತೂರು ಬಳಿಯ ಗಡಿಗುಡ್ಡೆ ಪೆರಿಯಾರಂ ಎಂಬಲ್ಲಿ ಮನೆಯೊಂದರ ಮೇಲೆ ಪಲ್ಟಿಯಾಗಿ ಬಿದೆ. ಇದರಿಂದ ಮಗು ಸೇರಿದಂತೆ ಐವರು ಮೃತಪಟ್ಟಿದ್ದಾರೆ. ಮೃತರ ವಿವರ ತಿಳಿಯಬೇಕಿದೆ.

ಮದುವೆ ದಿಬ್ಬಣದ ಬಸ್ ನಲ್ಲಿ 60 ಜನರು ಪ್ರಯಾಣಿಸುತ್ತಿದ್ದರು‌ ಎಂದು ಹೇಳಲಾಗಿದೆ. ಇವರಲ್ಲಿ 35 ಕ್ಕೂ ಹೆಚ್ಚು ಜನರು ಗಂಭೀರ ಗಾಯಗೊಂಡಿದ್ದಾರೆ.

error: Content is protected !!