April 26, 2025

Newsnap Kannada

The World at your finger tips!

, suicide, harrasment , crime

ಕಾರವಾರ : ಆಸ್ತಿ ವಿವಾದ ಒಂದೇ ಕುಟುಂಬದ ನಾಲ್ವರ ಹತ್ಯೆ

Spread the love

ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಕತ್ತಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡವಳ್ಳಿ ಗ್ರಾಮದ ಬಳಿ ಜರುಗಿದೆ.

ಶಂಭು ಭಟ್ (65) ಆತನ ಪತ್ನಿ ಮಾದೇವಿ ಭಟ್, ಮಗ ರಾಜೀವ್ ಭಟ್ (34) ಹಾಗೂ ಮಗನ ಪತ್ನಿ ಕುಸುಮಾ ಭಟ್ (30) ಕೊಲೆಯಾದವರು.ಧಾರವಾಡದಲ್ಲಿ ದುರಂತ : ಲಾರಿಗೆ ಕಾರು ಡಿಕ್ಕಿ ಸ್ಥಳದಲ್ಲೇ ಐವರ ಸಾವು

ಕುಸುಮಾ ಭಟ್ ದಂಪತಿಯ ಚಿಕ್ಕ ಹೆಣ್ಣು ಮಗು ಅಂಗನವಾಡಿಗೆ ಹೋಗಿದ್ದರಿಂದ ಬದುಕುಳಿದಿದೆ.

ಶ್ರೀಧರ್ ಭಟ್, ವಿನಯ್ ಭಟ್, ವಿದ್ಯಾ ಭಟ್ ಆಕೆಯ ತಂದೆ ಹಾಗೂ ಸಹೋದರರಿಂದ ಹತ್ಯೆ ನಡೆದಿದೆ ಎಂದು ತಿಳಿದುಬಂದಿದೆ.

ಶಂಭು ಭಟ್‌ ಅವರ ಮೊದಲ ಮಗ ಕಿಡ್ನಿ ವೈಫಲ್ಯದಿಂದ ಸಾವಾಗಿದ್ದರಿಂದ ಸೊಸೆ ವಿದ್ಯಾ ಭಟ್ ತವರು ಮನೆ ಸೇರಿದ್ದಳು. ಜೀವನಾಂಶ ಹಾಗೂ ಆಸ್ತಿ ನೀಡುವ ವಿಚಾರದಲ್ಲಿ ಶಂಭು ಭಟ್‌ರೊಂದಿಗೆ ವಿದ್ಯಾ ಭಟ್‌ ಕುಟುಂಬಸ್ಥರು ಗಲಾಟೆ ಮಾಡಿಕೊಂಡಿದ್ದರು.

ಜೀವನಾಂಶ ಕೊಡಲು ನಿರಾಕರಿಸಿದ್ದರಿಂದ ರೊಚ್ಚಿಗೆದ್ದ ಹಿರಿಯ ಸೊಸೆ ಕುಟುಂಬದವರಿಂದ ಹತ್ಯೆ ಮಾಡಿಸಿ ಪರಾರಿಯಾಗಿದ್ದಾಳೆ. ಭಟ್ಕಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Copyright © All rights reserved Newsnap | Newsever by AF themes.
error: Content is protected !!