ನಮ್ಮ ರಾಷ್ಟ್ರ ಹಲವಾರು ಸಂಪ್ರದಾಯಗಳ ತವರೂರು ಇಲ್ಲಿ ಅನೇಕ ವಿಧಧ ಭಾಷೆ, ಜನಾಂಗ, ಧರ್ಮವಿದ್ದರೂ ನಾವೆಲ್ಲಾ ಒಂದೇ ಎಂಬ ಭಾವನೆ ಇದೆ.
ರಾಜ್ಯ ಹಾಗೂ ರಾಷ್ಟ್ರೀಯ ಧ್ವಜಕ್ಕೆ ಎದ್ದು ನಿಂತು ಗೌರವ ಸಲ್ಲಿಸುವ ನಾವುಗಳು ರಾಷ್ಟ್ರೀಯ ಹಾಗೂ ನಾಡ ಹಬ್ಬದ ದಿನಗಳಂದು ಬಹಳ ಸಂಭ್ರಮದಿಂದ ಆಚರಣೆ ಮಾಡುತ್ತೇವೆ.
ಆದರೆ ಕನ್ನಡ ರಾಜ್ಯೋತ್ಸವ ಎಂಬುದು ನಾಮಮಾತ್ರಕ್ಕೆ ಸೀಮಿತವಾದುದಲ್ಲ. ಇದು ಪ್ರತಿಯೊಬ್ಬ ಕನ್ನಡಿಗನ ಕನ್ನಡದ ಕಣ್ಣಿನಲ್ಲಿ ಸದಾ ಕಂಗೊಳಿಸುತ್ತಿರಬೇಕು.
ಧ್ವಜವನ್ನು ಹಾರಿಸಿ ಸಿಹಿ ಹಂಚಿದರು. ಮಾಡದೆ ಹಾಗೇಯೆ ಬಿಡುವರು. ಈ ರೀತಿಯ ಧ್ವಜ ಬಿಸಿಲು, ಗಾಳಿ, ಮಳೆಗೆ ನೆನೆದು ಒದ್ದೆಯಾಗಿ ಹಾಳಾಗುತ್ತಿದೆ.
ನಾ ಕಂಡಂತೆ ಆಟೋ ನಿಲ್ದಾಣಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಹೆಚ್ಚಾಗಿ ಈ ದೃಶ್ಯಗಳು ಕಂಡುಬರುತ್ತದೆ. ಧ್ವಜಾರೋಹಣ ಮಾಡುವಾಗ ಯಾವ ರೀತಿ ಗೌರವ ಸಲ್ಲಿಸುತ್ತೇವೊ ಅದೇ ರೀತಿ ಅದನ್ನು ಅವರೋಹಣ ಮಾಡುವ ಸಮಯದಲ್ಲಿ ಗೌರವ ಸಲ್ಲಿಸಬೇಕು.
ಕೇವಲ ಕಾಟಚಾರಕ್ಕೆ ಧ್ವಜವನ್ನು ಹಾರಿಸಿ ಸುಮ್ಮನೆ ಕೂತರೆ ಸಾಲದು. ರಾಷ್ಟ್ರೀಯ ಹಾಗೂ ನಾಡ ಹಬ್ಬದ ದಿನದಂದೆ ಅದನ್ನು ಶಿಸ್ತು ಗೌರವದಿಂದ ತೆರವುಗೊಳಿಸಬೇಕು.
ಬೆಂಗಳೂರಿನ ಅನೇಕ ಕಡೆಗಳಲ್ಲಿ ಈ ರೀತಿಯ ದೃಶ್ಯಗಳು ಕಂಡು ಬರುತ್ತದೆ. ಧ್ವಜ ಬಿಸಿಲು ಗಾಳಿಗೆ ಒಣಗಿ ಸಂಪೂರ್ಣ ಹಾಳಾಗಿದೆ. ಜನನಿಬೀಡ ಪ್ರದೇಶಗಳಲ್ಲಿ ಹೆಚ್ಚಾಗಿ ವಾಹನ ಸಂಚಾರವಿರುತ್ತದೆ. ಇಂತಹ ವಾಹನಗಳಿಂದ ಹೊರಚಿಮ್ಮುವ ಹೊಗೆಯಿಂದ ಭಾವುಟ (ಧ್ವಜ) ಸಂಪೂರ್ಣ ಹಾಳಾಗಿದೆ.
ಧ್ವಜಾರೋಹಣ ಮಾಡಿರುವವರಿಗೆ ಅದನ್ನು ಅವರೋಹಣ ಮಾಡಬೇಕೆಂಬ ಸ್ವಲ್ಪವೂ ಅರಿವೆ ಇಲ್ಲ. ಪ್ರವಾಸಿಗರೂ ಇಂತಹ ದೃಶ್ಯಗಳನ್ನು ನೋಡಿ ಅವರ ದೇಶಗಳಲ್ಲಿ ನಮ್ಮ ಧ್ವಜದ ಬಗ್ಗೆ ಮಾತನಾಡುವರು, ಪ್ರಜ್ಞಾವಂತರಾದ ನಾವು ಈ ರೀತಿ ಬೇರೆಯವರು ನಮ್ಮ ರಾಷ್ಟ್ರ ಹಾಗೂ ರಾಜ್ಯದ ಬಗ್ಗೆ ಲಘುವಾಗಿ ಮಾತನಾಡಲು ಅವಕಾಶ ನೀಡಬಾರದು. ಬಹುತೇಕ ಸ್ಥಳಗಳಲ್ಲಿ ರಾಷ್ಟ್ರಧ್ವಜಕ್ಕಿಂತ ನಾಡ ಧ್ವಜಗಳು ಬಿಸಿಲು ಗಾಳಿಗೆ ಹಾರಡುತ್ತಿರುವುದು ಕಂಡುಬರುತ್ತದೆ.
ಸಡಗರ ಸಂಭ್ರಮದಿಂದ ರಾಷ್ಟ್ರ ,ನಾಡ ಹಬ್ಬಗಳನ್ನು ಆಚರಿಸುವುದು ಹೆಮ್ಮೆಯ ವಿಚಾರವೇ ಹೌದು ಆದರೆ ಈ ರೀತಿ ಧ್ವಜಗಳನ್ನ ಅವರೋಹಣ ಮಾಡದೆ ಬಿಡುವುದು ಎಷ್ಟು ಮಾತ್ರ ಸರಿ ಎಂಬುದನ್ನ ನೀವೆ ಯೋಚಿಸಿ.
ನಮ್ಮ ನಾಡಧ್ವಜಕ್ಕೆ ತನ್ನದೇ ಆದ ಗೌರವವಿದೆ ಅದನ್ನ ಕಾಪಾಡುವುದು ರಕ್ಷಿಸುವುದು ಹಾಗೂ ಗೌರವಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ.
ಶಾಲಾ ಕಾಲೇಜುಗಳಲ್ಲಿ ಹಾಗೂ ಸರಕಾರಿ ಇಲಾಖೆಗಳಲ್ಲಿ ಇದರ ಬಗ್ಗೆ ಅರಿವು ಇರುವುದರಿಂದ ಅಲ್ಲಿ ಸಮಯಕ್ಕೆ ಸರಿಯಾಗಿ ಧ್ವಜಾ ಅವರೋಹಣ ಮಾಡುವರು ಆದರೆ ಆಟೋ ನಿಲ್ದಾಣ ,ಬಸ್ ನಿಲ್ದಾಣಗಳಲ್ಲಿ ಇದರ ಬಗ್ಗೆ ಅರಿವು ಇಲ್ಲದಿರುವುದರಿಂದ ಸಾಕಷ್ಟು ಧ್ವಜಗಳು ಬಿಸಿಲು,ಗಾಳಿಯಲ್ಲಿ ಹಾರಾಡುತ್ತಿವೆ. ಇಂತಹವರಿಗೆ ಶಾಲಾ ಕಾಲೇಜು ಹಾಗೂ ಸಂಘ ಸಂಸ್ಥೆಗಳು ಧ್ವಜದ ಅರಿವನ್ನು ಮೂಡಿಸಬೇಕು. ಯಾವ ಸಮಯದಲ್ಲಿ ಧ್ವಜಾರೋಹಣ ಮಾಡಬೇಕು,ಯಾವ ಸಮಯದಲ್ಲಿ ಧ್ವಜಾ ಅವರೋಹಣವನ್ನು ಮಾಡಬೇಕೆಂಬ ಅರಿವು,ಜಾಗೃತೆಯನ್ನು ಮೂಡಿಸಬೇಕು..
ನೆಲ, ಜಲ, ಭಾಷೆ, ನುಡಿ, ಪ್ರೀತಿ ಇವುಗಳಿಗೆ ಹೆಸರುವಾಸಿ ನಮ್ಮ ನಾಡು. ಸಂಸ್ಕಾರವನ್ನು ಕನ್ನಡ ನಾಡಿನಲ್ಲಿ ನೋಡಿ ಹಲವಾರು ಜನರು ತಿಳಿದು ಕೊಳ್ಳುತ್ತಿದ್ದಾರೆ. ಪ್ರವಾಸಿಗರು ಕನ್ನಡಿಗರ ಪ್ರೀತಿ ವಿಶ್ವಾಸ ಹಾಗೂ ಹೃದಯವಂತಿಕೆಗೆ ಮಾರುಹೋಗಿರುವುದು ನಮ್ಮ ಹೆಮ್ಮೆ . ಇದನ್ನು ಹಾಗೇಯೆ ತಲೆ ತಲಾಂತರಗಳ ವರೆಗೂ ಉಳಿಸಿಕೊಳ್ಳುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ.
ಜನರ ಸಮಸ್ಯೆಗಳಿಗಿಂತ ಟಿವಿ ಚಾನಲ್ ಗಳಿಗೆ ಗಂಡ ಹೆಂಡ್ತಿ ಜಗಳಗಳ ಬಗ್ಗೆಯೇ ಹೆಚ್ಚು ಆಸಕ್ತಿ: ಸಿಎಂ ವ್ಯಂಗ್ಯ ಫೇಕ್ ನ್ಯೂಸ್… Read More
ಹಾಸನ: 10 ವರ್ಷದ ಬಾಲಕನೊಬ್ಬ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ಹಾಸನದ ಅಲೂರು ತಾಲೂಕಿನ ಚಿನ್ನಪುರದಲ್ಲಿ ನಡೆದಿದೆ. ಮೃತ ಬಾಲಕ ಸಚಿನ್… Read More
ಮೈಸೂರು: ಶುಕ್ರವಾರ ( 20-09-2024 ) ರಾತ್ರಿ ದಸರಾ ಗಜಪಡೆಯ ಆನೆ ಧನಂಜಯ ಮತ್ತೊಂದು ಆನೆ ಕಂಜನ್ ಮೇಲೆ ಏಕಾಏಕಿ… Read More
ಮೈಸೂರು: ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದ್ದು, ದೇಶದ ಜಿ ಡಿಪಿ… Read More
ಬೆಂಗಳೂರು : BMTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ,ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ… Read More
ಮಂಗಳೂರು : ಕಾಮಗಾರಿಯ ಬಿಲ್ ಪಾವತಿಗಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲೋಕಾಯುಕ್ತ… Read More
This website uses cookies.
Leave a Comment