ಕಪ್ಪು ಮಣ್ಣ ಒಡಲಹೂವು
ಹಸಿರ ರಾಶಿ ತುಂಬ ಎಲರು
ಹಕ್ಕಿದನಿಯ ಮಧುರ ಕೊರಳು |
ಒಲವಝರಿ ಕಾಂತಿ ಖನಿ
ಎದೆಯನೋವ ಉಸಿರ ಬಿಕ್ಕು
ನದಿನೀರ ಬೆವರ ಪಲುಕು |
ಗಿರಿಸಿರಿಯ ಮೈಯ ಕಸುವು
ಗಂಧಗಾಳಿ ನೆಲದ ಸೊಗಡು
ಗುಡಿಶಿಲ್ಪ ಬೆರಗು ಬೆಡಗು |
ಹಳದಿಕೆಂಪು ಬಣ್ಣದೋಕುಳಿ
ಭಾವ ದುಡಿಯ ನುಡಿಸಿ ನಕ್ಕು
ಕಣ್ಣತುಂಬ ಭಾಷೆಚಿಲುಮೆ |
ಸಾವಿರದ ನಿರಿ ಪತ್ತಲ
ಉಟ್ಟು ತೊಟ್ಟು ಉಣಿಸಿ ತಣಿಸಿ
ಜಗದಗಲ ಕಂಪಬೀರಿ |
ಚುಕ್ಕಿ ಚಂದ್ರ ಎರಕಹೊಯ್ದ
ಸುಮಮಾಲೆಯ ಸಿರಿ ಸುಂದರಿ
ನೆಮ್ಮದಿಯೀವ ಮಡಿಲ ರಾಣಿ|
ಬದುಕು ಕೊಟ್ಟ ತಾಯೆ ನಿನಗೆ ಮಕ್ಕಳೆಲ್ಲರ ನಮೋ ನಮೋ
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು