Trending

ಗಜಕೇಸರಿ ಯೋಗದಲ್ಲಿ ಜ್ಯೂ. ಚಿರು ಜನನ

ನಿನ್ನೆ ಬೆಳಿಗ್ಗೆ 11:07ಕ್ಕೆ ಮೇಘನಾ ಹಾಗೂ ದಿ.ಚಿರು ಪುತ್ರ ಜನ್ಮತಾಳಿದೆ. ಈ ಮಗುವು ಗಜ ಕೇಸರಿ ಯೋಗದಲ್ಲಿ ಜನ್ಮ ತಾಳಿದ್ದು ಹಲವು ವಿಶೇಷ ಯೋಗಗಳನ್ನು ಹೊಂದಿದೆ ಎಂದು ಜ್ಯೋತಿಷಿಗಳು ಹೇಳಿದ್ದಾರೆ.

ಮಗು ಜನಿಸಿದ ಸಮಯವನ್ನು ಅಪೂರ್ವ ಘಳಿಗೆ ಎಂದಿರುವ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ‘ಮಗುವಿನ ಜಾತಕದಲ್ಲಿ ಗಜಕೇಸರಿ ಯೋಗ, ಬುಧಾದಿತ್ಯ ಯೋಗ, ಶಶಯೋಗ, ಹಂಸಯೋಗಗಳಂತಹ ವಿಶೇಷ ಯೋಗಗಳನ್ನು ಮಗು ಹೊಂದಿದೆ. ಆದರೆ ಜನನದ ಸಮಯದಲ್ಲಿ ಮಂಗಳನು ವಕ್ರ ದೃಷ್ಠಿ ಬೀರಿದ್ದಾನೆ. ಹಾಗಾಗಿ ಮಗುವಿನ ಜಾತಕದಲ್ಲಿರುವ ಮಂಗಳ ದೋಷವನ್ನು ನಿವಾರಿಸಿಕೊಳ್ಳಬೇಕು’ ಎಂದಿದ್ದಾರೆ.

ಇತ್ತ ಮಗುವಿನ ಜನನದ ಸುದ್ದಿ ಕೇಳುತ್ತಲೇ ನಟ ಅರ್ಜುನ್ ಸರ್ಜಾ ಓಡೋಡಿ ಬಂದಿದ್ದಾರೆ. ‘ಮೂವತ್ತಾರು ವರ್ಷಗಳ ಹಿಂದೆ ಹೀಗೆ ಚಿರು ಹುಟ್ಟಿದಾಗ ಅವನನ್ನು ನೋಡಲು ಓಡೋಡಿ ಬಂದಿದ್ದೆ. ಚಿರು ಇದ್ದಿದ್ದರೆ ಈ ಕ್ಷಣವನ್ನು ತುಂಬಾ ಸಂತಸದಿಂದ ಅನುಭವಿಸುತ್ತಿದ್ದ. ಅವನ ಅಗಲಿಕೆಯಿಂದ ನಾಲ್ಕು ತಿಂಗಳವರೆಗೂ ನಮ್ಮ ಮನೆಯಲ್ಲಿ‌ ಸಂತಸವಿರಲಿಲ್ಲ. ಈಗ ಅವನ ಪುತ್ರನ ಆಗಮನದಿಂದ ನಮ್ಮ ಕುಟುಂಬಸ್ಥರಲ್ಲಿ ನಗು ಕಂಡೆ’ ಎಂದು ಖುಷಿಯನ್ನು ಹಂಚಿಕೊಂಡರು.

Team Newsnap
Leave a Comment
Share
Published by
Team Newsnap

Recent Posts

ತಾಯಿಯ ಶವದೊಂದಿಗೆ 4 ದಿನ ಕಳೆದ ಪುತ್ರಿಯೂ ವಿಧಿವಶ

ಕುಂದಾಪುರ : ಮೇ 16 ರ ರಾತ್ರಿ ಗೋಪಾಡಿ ಗ್ರಾಮದ ಮೂಡುಗೋಪಾಡಿಯ ನಿವಾಸಿ ಜಯಂತಿ ಶೆಟ್ಟಿ (61) ಅವರ ಮೃತದೇಹ… Read More

May 19, 2024

ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ

2015ರಲ್ಲಿ ಶಿಲ್ಪಾ ಎಂಬುವವರ ಜೊತೆ ಮದುವೆಯಾಗಿದ್ದ ನಟ ಚಂದು ತ್ರಿನಯನಿ ಸೀರಿಯಲ್​ನಲ್ಲಿ ಅಭಿನಯಿಸಿದ್ದ ತೆಲುಗು ನಟ ಚಂದು ನಟಿ ಪವಿತ್ರ… Read More

May 18, 2024

SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ

ಬೆಂಗಳೂರು : ಶಿಕ್ಷಣ ಸಚಿವ ಮಧು ಬಂಗಾರಪ್ಪ , ಮುಂದಿನ ವರ್ಷದಿಂದ SSLC ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಲಾಗುವುದಿಲ್ಲ ಎಂದು… Read More

May 17, 2024

ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಬೆಂಗಳೂರು : ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅರಸೀಕೆರೆ ಮೂಲದ ಕರಡಿಹಳ್ಳಿ… Read More

May 17, 2024

ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಬಜೆಟ್‌ನಲ್ಲಿ ಘೋಷಣೆ… Read More

May 16, 2024

ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ

ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಈ ಪ್ರಕರಣದಲ್ಲಿ… Read More

May 16, 2024