ಪ್ರಪಂಚದಾದ್ಯಂತ ಕೊರೋನಾ ಮುಕ್ತವಾಗಲು ಇನ್ನೂ 10 ವರ್ಷ ಸಮಯ ಬೇಕು ಎಂದು ಕೋಡಿ ಮಠದ ಶ್ರೀ ಗಳು ಹಾಸನದಲ್ಲಿ ಭವಿಷ್ಯ ನುಡಿದ್ದಾರೆ.
ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಶ್ರೀ ಗಳು ಕೊರೋನಾ ಸಧ್ಯಕ್ಕೆ ಕೊನೆ ಎಂಬುದಿಲ್ಲ. ಸಂಪೂರ್ಣ ಕೊರೋನಾ ಮುಕ್ತವಾಗಲು ಇನ್ನೂ 10 ವರ್ಷಬೇಕು ಎಂದರು.
ನಮ್ಮ ಭೂಮಿಯಲ್ಲಿ ಸತ್ವವೇ ಇಲ್ಲ. ಇದರಿಂದ ಬೆಳೆದ ಬೆಳೆಗಳೆಲ್ಲಾ ರಾಸಾಯನಿಕಯುಕ್ತವಾಗಿವೆ. ವಿಷ ಆಹಾರ ಸೇವನೆ ಮಾಡಿದರೆ ರೋಗ ಬರದೇ ಇರುತ್ತದೆಯೇ? ರಾಗಿ ಗಟ್ಟಿ ಆಹಾರ ಹಾಗೂ ವಿಷಮುಕ್ತ ವಾಗಿತ್ತು. ಈಗ ರಾಗಿಗೂ ಕೂಡ ರಾಸಾಯನಿಕ ಗೊಬ್ಬರ ಬಳಕೆ ಮಾಡಿ ಅದೂ ಕೂಡ ವಿಷವಾಗಿದೆ ಎಂದು ಹೇಳಿದರು.
ದೇಶ ಮತ್ತು ರಾಜ್ಯದಲ್ಲಿ ರಾಜಕೀಯ ಧ್ರುವೀಕರಣ ಆಗುತ್ತದೆ. ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾಗಲಿದೆ. ಗಂಡಾಂತರ ಗಳನ್ನು ತಪ್ಪಿಸುದು ಕಷ್ಟ ಎಂದರು


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ