Trending

ಐಪಿಎಲ್ 20-20; ಎಸ್‌ಆರ್‌ಹೆಚ್‌ನ್ನು ಮಣಿಸಿ ಫೈನಲ್ಸ್ ಪ್ರವೇಶಿಸಿದ ಡಿಸಿ

ಐಪಿಎಲ್ 20-20ಯ 59ನೇ ಪಂದ್ಯದಲ್ಲಿ ಡೆಲ್ಲಿ‌ ಕ್ಯಾಪಿಟಲ್ಸ್ ತಂಡ, ಸನ್ ರೈಸರ್ಸ್ ಆಫ್ ಹೈದರಾಬಾದ್ ತಂಡದ ವಿರುದ್ಧ 17 ರನ್‌ಗಳ ಅದ್ಭುತ ವಿಜಯ ಸಾಧಿಸಿತು.

ದುಬೈನ ಶೇಕ್ ಜಯೇದ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡಿಸಿ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.

ಡಿಸಿ ತಂಡದಿಂದ ಆರಂಭಿಕ ಆಟಗಾರರಾಗಿ ಎಂ. ಸ್ಟೋಯಿನೀಸ್ ಹಾಗೂ ಶಿಖರ್ ಧವನ್ ಮೈದಾನಕ್ಕಿಳಿದು ಅದ್ಭುತ ಪ್ರದರ್ಶನವನ್ನು ತೋರಿದರು. ಸ್ಟೋಯಿನೀಸ್ 27 ಬಾಲ್‌ಗಳಿಗೆ 38 ರನ್ ಹಾಗೂ ಧವನ್ 50 ಬಾಲ್‌ಗಳಿಗೆ 78 ರನ್ ಗಳಿಸಿದರು. ನಂತರ ಬಂದ ಹೆಟ್ಮಿಯರ್ ಅವರ ಬ್ಯಾಟಿಂಗ್ ತಂಡದ ಮೊತ್ತ ಪೇರುವಲ್ಲಿ ಸಹಾಯಕವಾಯಿತು. ಹೆಟ್ಮಿಯರ್ 22 ಬಾಲ್‌ಗಳಿಗೆ 42 ರನ್ ಗಳಿಸಿದರು. ಡಿಸಿ ತಂಡ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 189 ರನ್‌ಗಳನ್ನು ಗಳಿಕೆ ಮಾಡಿತು.

ಎಸ್‌ಆರ್‌ಹೆಚ್ ತಂಡದಿಂದ ಸ್ಕ್ರೀಸ್‌ಗೆ ಬಂದ ಪಿ. ಗರ್ಗ್ ಹಾಗೂ ಡಿ. ವಾರ್ನರ್ ಸಾಧಾರಣ ಆಟ ಪ್ರಾರಂಭ ಮಾಡಿದರು. ಗರ್ಗ್ 12 ಬಾಲ್‌ಗಳಿಗೆ 17 ರನ್ ಗಳಿಸಿದರೆ, ವಾರ್ನರ್ 3 ಬಾಲ್‌ಗಳಿಗೆ 2 ರನ್ ಗಳಿಸಿ ಪೆವಿಲಿಯನ್ ಸೇರಿದರು. ತದನಂತರ ಬಂದ ಮನೀಶ್ ಪಾಂಡೆ ಹಾಗೂ ಕೆ. ವಿಲಿಯಮ್ಸನ್ ಉತ್ತಮ‌ ಪ್ರದರ್ಶನ ನೀಡಿದರೂ ಸೋಲಿನ ಸುಳಿಯಿಂದ‌ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಪಾಂಡೆ 14 ಬಾಲ್‌ಗಳಿಗೆ 21 ರನ್ ಗಳಿಸಿದರೆ, ವಿಲಿಯಮ್ಸನ್ 45 ಎಸೆತಗಳಿಗೆ 67 ರನ್ ಗಳಿಸಿದರು‌. ತರುವಾಯ ಬಂದ ಎ. ಸಮದ್ 16 ಬಾಲ್‌ಗಳಿಗೆ 33 ರನ್‌ಗಳ ಮಿಂಚಿನಾಟ‌ ಆಡಿದರೂ ತಂಡ‌‌ಕ್ಕೆ ಸಹಾಯಕವಾಗಲಿಲ್ಲ. ಎಸ್‌ಆರ್‌ಹೆಚ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿ ಪಂದ್ಯದಲ್ಲಿ ಗೆಲುವಿನ ಗರಿ ಧರಿಸಿತು.

Team Newsnap
Leave a Comment
Share
Published by
Team Newsnap

Recent Posts

ಕುಸ್ತಿಪಟು ಭಜರಂಗ್ ಪುನಿಯಾ ನಾಡಾದಿಂದ ಅಮಾನತು

ನವದೆಹಲಿ: ಕುಸ್ತಿಪಟು ಭಜರಂಗ್ ಪುನಿಯಾ ( Bajrang Punia) ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (NADA )… Read More

May 5, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 5 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,750 ರೂಪಾಯಿ ದಾಖಲಾಗಿದೆ. 24… Read More

May 5, 2024

ಲೋಕಾಯುಕ್ತರ ಹೆಸರಿನಲ್ಲಿ ಬೆಸ್ಕಾಂ ಎಂಡಿಗೆ ಬೆದರಿಕೆ – ದೂರು ದಾಖಲು

ಬೆಂಗಳೂರು : ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಹಾಗೂ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರ ಹೆಸರಿನಲ್ಲಿ ಬೆದರಿಕೆ ಕರೆಗಳು ಬಂದ… Read More

May 5, 2024

ಸಂಚಾರ ನಿಯಮಗಳ ಉಲ್ಲಂಘನೆ: ರಾಜ್ಯದಲ್ಲಿ 1,700 ಕೋಟಿ ರೂ. ದಂಡ ಬಾಕಿ

ಬೆಂಗಳೂರು: ಸಂಚಾರ ನಿಯಮಗಳ ಉಲ್ಲಂಘನೆಗೆ ಸಂಬಂಧಪಟ್ಟಂತೆ ರಾಜ್ಯದಲ್ಲಿ ಬರೋಬ್ಬರಿ 1,700 ಕೋಟಿ ರೂ. ದಂಡ ಬಾಕಿ ಉಳಿದಿದೆ. ದಂಡವನ್ನು ವಸೂಲಿ… Read More

May 4, 2024

ಜಾಮೀನು ಅರ್ಜಿ ವಜಾ : ಮಾಜಿ ಸಚಿವ HD ರೇವಣ್ಣ ಬಂಧನ

ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರ ನಿವಾಸದಲ್ಲಿದ್ದ ಹೆಚ್​.ಡಿ ರೇವಣ್ಣ ರೇವಣ್ಣರನ್ನು ಅರೆಸ್ಟ್ ಮಾಡಲು ಪದ್ಮನಾಭನಗರಕ್ಕೆ ತೆರಳಿದ್ದ SIT ತಂಡ ಮಹಿಳೆ… Read More

May 4, 2024

ಪ್ರಜ್ವಲ್ ಕೇಸನ್ನು ನಾವು ಯಾರು ಬೆಂಬಲಿಸಿಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ : ಬಿ.ವೈ ವಿಜಯೇಂದ್ರ

ಹುಬ್ಬಳ್ಳಿ : ಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ , : ನಾವು ಯಾರು ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಬೆಂಬಲಿಸಿಲ್ಲ… Read More

May 4, 2024