ಆಕೆ 3 ತಿಂಗಳ ಹಿಂದಷ್ಟೇ ಫೇಸ್ ಬುಕ್ ನಲ್ಲಿ ಪರಿಚಯವಾದವಳು. ಬೇರೆ ಹುಡುಗಿಯ ಫೋಟೊ ತೋರಿಸಿ 50 ವರ್ಷದ ಮಹಿಳೆ, ನಾಗಮಂಗಲದ ಯುವಕನಿಗೆ ಯಾಮಾರಿಸಿದ ಸ್ಟೋರಿ ಇದು. ಹೆಸರು ಕಮಲ,ಈಕೆ ತುಮಕೂರಿನ ಗುಬ್ಬಿ ತಾಲೂಕು ಮಲ್ಲಸಂದ್ರ ಗ್ರಾಮದ ಆಶಾ ಎಂದು ಪರಿಚಯ ಮಾಡಿಕೊಂಡಿದ್ದಾಳೆ.
ಈ ಯುವಕ ಹಾಗೂ ಯುವತಿ ನಡುವೆ ಸುದೀರ್ಘ ದಿನ ಮಾತುಕತೆ ನಡೆದ ನಂತರ ಆ ಸ್ನೇಹ , ಸಲುಗೆ ಪ್ರೀತಿಗೆ ತಿರುಗಿದೆ. ತನ್ನ ಮನೆಯ ಕಷ್ಟ ಹೇಳಿಕೊಂಡ ಆ ಯುವತಿ ಯುವಕನಿಂದ 3.50 ಲಕ್ಷ ರು ಹಾಗೂ 30 ಸಾವಿರ ರು ದಿನಸಿ ತರಿಸಿಕೊಂಡಿದ್ದಾಳೆ. ಇದೇ ವೇಳೆ ನಾವಿಬ್ಬರೂ ಮದುವೆ ಆಗೋಣ ಎಂದು ಯುವಕ ಪ್ರಸ್ತಾಪ ಇಟ್ಟಾಗ ನಾನು ಆಶಾಳ ದೊಡ್ಡಮ್ಮ. ಆಕೆಗೆ ಅಪ್ಪ – ಅಮ್ಮ ಇಲ್ಲ. ನಾನೇ ಮದುವೆ ಮಾಡಿಸಬೇಕು ಎಂದು ಆ ಮಹಿಳೆಯೇ ಯುವಕನ ಮನೆಗೆ ಬಂದು ಮದುವೆ ಒಪ್ಪಂದ ಮಾಡಿಕೊಂಡು ಚಪ್ಪರ ಶಾಸ್ತ್ರದ ದಿನವೇ ನಿಶ್ಚಿತಾರ್ಥ ಮಾಡಿಕೊಳ್ಳೋಣ ಎಂದು ಆಕೆ ಹೇಳಿದ್ದಾಳೆ.
ಇತ್ತ ಯುವಕನ ಮನೆಯವರು ಮದುವೆ ಆಹ್ವಾನ ಪತ್ರಿಕೆ ಹಂಚಿದ್ದಾರೆ . ಮೇ 20 ರಂದು ಆದಿಚುಂಚನಗಿರಿಯಲ್ಲಿ ಮದುವೆ ಸಿದ್ದತೆ ಮಾಡಲಾಗಿತ್ತು. ಆದರೆ ಮದುವೆ ಚಪ್ಪರಕ್ಕೆ ವಧು ಹಾಗೂ ಆಕೆಯ ದೊಡ್ಡಮ್ಮ ಎಂದು ಹೇಳಿಕೊಂಡ ಆಶಾ (50) ಬರಲಿಲ್ಲ. ಕೊನೆಗೆ ಯುವಕನ ಗ್ರಾಮಕ್ಕೆ ಆಗಮಿಸಿದ ದೊಡ್ಡಮ್ಮ ಆಶಾ ಮಾವಂದಿರು ಆಕೆಯನ್ನು ಬಚ್ಚಿ ಇಟ್ಟಿದ್ದಾರೆಂದು ಹೇಳಿದಳು.
ಇದನ್ನು ಓದಿ : ಪೋಲಿಸರಿಂದ ತಪ್ಪಿಸಿಕೊಳ್ಳಲು ಹೋಗಿ ರಸ್ತೆ ಅಪಘಾತ ಇಬ್ಬರು ಯುವಕರ ಸಾವು
ಈಕೆಯ ಹೇಳಿಕೆ ಬಗ್ಗೆ ಅನುಮಾನಗೊಂಡ ಯುವಕನ ಮನೆಯವರು ಪೋಲಿಸರಿಗೆ ಮಾಹಿತಿ ನೀಡಿದರು.ಪೋಲಿಸರ ವಿಚಾರಣೆಯ ವೇಳೆ ತಾನು ಯುವತಿಯಂತೆ ಬಣ್ಣ ಬಣ್ಣದ ಮಾತನಾಡಿ ಸೆಳೆದುಕೊಂಡೆ. ನಾನು ಹೇಳಿರುವುದೆಲ್ಲವೂ ಸುಳ್ಳು. ಪಡೆದುಕೊಂಡಿರುವ ಎಲ್ಲಾ ಹಣವನ್ನು ವಾಪಸ್ ಕೊಡುವೆ ಎಂದು ಮುಚ್ಚಳಿಕೆ ಬರೆದುಕೊಟ್ಟು ಬಚಾವ್ ಆಗಿದ್ದಾಳೆ.
2015ರಲ್ಲಿ ಶಿಲ್ಪಾ ಎಂಬುವವರ ಜೊತೆ ಮದುವೆಯಾಗಿದ್ದ ನಟ ಚಂದು ತ್ರಿನಯನಿ ಸೀರಿಯಲ್ನಲ್ಲಿ ಅಭಿನಯಿಸಿದ್ದ ತೆಲುಗು ನಟ ಚಂದು ನಟಿ ಪವಿತ್ರ… Read More
ಬೆಂಗಳೂರು : ಶಿಕ್ಷಣ ಸಚಿವ ಮಧು ಬಂಗಾರಪ್ಪ , ಮುಂದಿನ ವರ್ಷದಿಂದ SSLC ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಲಾಗುವುದಿಲ್ಲ ಎಂದು… Read More
ಬೆಂಗಳೂರು : ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅರಸೀಕೆರೆ ಮೂಲದ ಕರಡಿಹಳ್ಳಿ… Read More
ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಬಜೆಟ್ನಲ್ಲಿ ಘೋಷಣೆ… Read More
ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಈ ಪ್ರಕರಣದಲ್ಲಿ… Read More
ಹಾಸನ : ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ಕು ಮಕ್ಕಳು ಜಲ ಸಮಾಧಿ ಆದ ಘಟನೆ ಆಲೂರು ತಾಲೂಕಿನ, ತಿಮ್ಮನಹಳ್ಳಿ… Read More
This website uses cookies.
Leave a Comment