ಉತ್ತರಾಖಂಡದ ಹಲ್ದ್ವಾನಿಯಲ್ಲಿ ಹುಟ್ಟಿ ಬೆಳೆದ ಅಮಿತ್ ಅವರ ತಂದೆ ಬಿಪಿನ್ ಚಂದ್ರ ಪಾಂಡೆ ಮಹಾತ್ಮ ಗಾಂಧಿ ಇಂಟರ್ ಕಾಲೇಜಿನಲ್ಲಿ ನಿವೃತ್ತ ಶಿಕ್ಷಕರಾಗಿದ್ದಾರೆ ಮತ್ತು ಅವರ ತಾಯಿ ಸುಶೀಲಾ ಪಾಂಡೆ ಗೃಹಿಣಿಯಾಗಿದ್ದಾರೆ. ಕೇಂದ್ರೀಯ ವಿದ್ಯಾಲಯ ಹಲ್ದ್ವಾನಿಯಲ್ಲಿ ತನ್ನ ಶಾಲಾ ಶಿಕ್ಷಣವನ್ನು ಮತ್ತು ಕೇಂದ್ರೀಯ ವಿದ್ಯಾಲಯ ರಾಯ್ ಬರೇಲಿಯಿಂದ 12 ನೇ ತರಗತಿಯನ್ನು ಪೂರ್ಣಗೊಳಿಸಿದರು. ನಂತರ, ಅವರು ಐಐಟಿ ಬಿಹೆಚ್ ಯು (IIT BHU – ಬನಾರಸ್ ಹಿಂದೂ ವಿಶ್ವವಿದ್ಯಾಲಯ) ದಲ್ಲಿ ಬಿ.ಟೆಕ್ ಮಾಡಲು ತೆರಳಿದರು.ಇದನ್ನು ಓದಿ – ಸಿಎಂ ಬೊಮ್ಮಾಯಿ ಮಾಧ್ಯಮ ಸಂಯೋಜಕ ಗುರುಲಿಂಗ ಸ್ವಾಮಿ ಹೋಳಿಮಠ ಇನ್ನಿಲ್ಲ
ನಂತರ ಸ್ನಾತಕೋತ್ತರ ಪದವಿಗಾಗಿ ಅಮೆರಿಕಕ್ಕೆ ತೆರಳಿ ಅರಿಜೋನಾ ವಿಶ್ವವಿದ್ಯಾಲಯದಿಂದ ಪದವಿ ಪಡೆದರು. ನಂತರ ಮೇರಿಲ್ಯಾಂಡ್ ವಿಶ್ವವಿದ್ಯಾಲಯದಿಂದ ಪಿಎಚ್ಡಿ ಕೂಡ ಪಡೆದರು. ಅಮಿತ್ ಪಾಂಡೆ ವಿಜ್ಞಾನಿಯಾಗಿ ವೃತ್ತಿ ಜೀವನ ಆರಂಭಿಸಿದರು. ಹಲವಾರು ವರ್ಷಗಳಿಂದ ಅಮೆರಿಕದಲ್ಲಿ ಸಂಶೋಧನಾ ವಿಜ್ಞಾನಿಯಾಗಿ ಕೆಲಸ ಮಾಡಿದ್ದಾರೆ.
‘ನ್ಯೂ ಮೂನ್ ಪ್ರೋಗ್ರಾಂ ಆರ್ಟೆಮಿಸ್ ‘ಕ್ಕೆ ಹಿರಿಯ ವಿಜ್ಞಾನಿಯಾಗಿ ನೇಮಕಗೊಂಡಿರುವ ಅಮಿತ್ ಮಾತನಾಡಿ, ನಾಸಾದ ಈ ಕಾರ್ಯಕ್ರಮವು ಚಂದ್ರನ ಮೇಲೆ ದೀರ್ಘಕಾಲ ಗಗನಯಾತ್ರಿಗಳು (Astronauts) ನೆಲೆಸುವ ಉದ್ದೇಶ ಹೊಂದಿದ್ದು , ರಾಕೆಟ್ ಅನ್ನು ಆಗಸ್ಟ್ 29ರಂದು ಉಡಾವಣೆ ಮಾಡಲು ನಿರ್ಧರಿಸಿದೆ.
60ರ ದಶಕದಲ್ಲಿ, ಅಮೇರಿಕಾ ಅಪೊಲೊ ಕಾರ್ಯಕ್ರಮವನ್ನು ಪ್ರಾರಂಭಿಸಿತು, ಅದರ ಮೂಲಕ ಗಗನಯಾತ್ರಿ ನೀಲ್ ಆರ್ಮ್ಸ್ಟ್ರಾಂಗ್ ಚಂದ್ರನ ಮೇಲೆ ಹೆಜ್ಜೆ ಹಾಕಿದರು. ಅದೇ ರೀತಿ, ನಾಸಾ ಈಗ ದೀರ್ಘಾವಧಿಯ ಚಂದ್ರನ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದೆ, ಆದ್ದರಿಂದ ಗಗನಯಾತ್ರಿಗಳು ಚಂದ್ರನ ಮೇಲೆ ವಾಸಿಸಬಹುದು ಮತ್ತು ಸಂಶೋಧನೆ ಮಾಡಬಹುದು” ಎಂದು ಅಮಿತ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.ಇದನ್ನು ಓದಿ –ಶಾಪಿಂಗ್ಗೆ ಕರ್ಕೊಂಡು ಹೋಗಿಲ್ಲ ಎಂದು 11ರ ಪ್ರಾಯದ ಬಾಲಕಿ ಆತ್ಮಹತ್ಯೆ
10 ಉಪಗ್ರಹಗಳನ್ನು ಹಿಡಿದಿಟ್ಟುಕೊಂಡು ಸಂಶೋಧನೆ ನಾಸಾದ ಇದೇ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಕೊಡುಗೆ ನೀಡುತ್ತಿರುವ ಲಾಕ್ಹೀಡ್ ಮಾರ್ಟಿನ್ ಅವರೊಂದಿಗೆ ಅಮಿತ್ ಪಾಂಡೆ ಕೆಲಸ ಮಾಡುತ್ತಾರೆ. ಇತರ ಗುತ್ತಿಗೆದಾರರಲ್ಲಿ ಏರೋಜೆಟ್ ರಾಕೆಟ್ಡೈನ್, ಬೋಯಿಂಗ್, ಜೇಕಬ್ಸ್ ಮತ್ತು ನಾರ್ತ್ರಾಪ್ ಗ್ರುಮನ್ ಕೂಡ ಈ ತಂಡದಲ್ಲಿ ಸೇರಿದ್ದಾರೆ.
“ಚಂದ್ರ, ನಾನು ಬರುತ್ತಿದ್ದೇನೆ”ಎಂದು ಟ್ವೀಟ್ ಮಾಡಿದ ಅಮಿತ್ಚಂದ್ರ ನಾನು ಬರುತ್ತಿದ್ದೇನೆ ( ಮೂನ್ ಹಿಯರ್ ಐ ಕಮ್) ಎಂದು ಟ್ವೀಟ್ ಮಾಡಿರುವ ಅಮಿತ್ ಪಾಂಡೆ ತಮ್ಮ ಖಾತೆಯಲ್ಲಿ ಖುಷಿ ವ್ಯಕ್ತಪಡಿಸಿದ್ದಾರೆ. ಲಾಕ್ಹೀಡ್ ಮಾರ್ಟಿನ್ ಸ್ಪೇಸ್ ಎಂಬ ಖಾತೆಯಲ್ಲಿ ಪೋಸ್ಟ್ ಮಾಡಲಾದ ವಿಡಿಯೋವನ್ನು ಮರುಹಂಚಿಕೊಂಡ ಅಮಿತ್ ಈ ರೀತಿಯಾಗಿ ಬರೆದುಕೊಂಡಿದ್ದಾರೆ.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ