T 20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರಸಂಜೆ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಪಂದ್ಯ ಟೀಮ್ ಇಂಡಿಯಾ ಪಾಲಿಗೆ ಅತೀ ಮಹತ್ವದ್ದಾಗಿದೆ.
ಇಂದಿನ ಪಂದ್ಯದ ಸೋಲು-ಗೆಲುವು ಟೂರ್ನಿಯಲ್ಲಿ ಭಾರತದ ಭವಿಷ್ಯವನ್ನ ನಿರ್ಧರಿಸಲಿದೆ.
ಐಸಿಸಿ 2021ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ಹ್ಯಾಟ್ರಿಕ್ ಗೆಲುವು ದಾಖಲಿಸಿದೆ.
ಇನ್ನೊಂದು ಪಂದ್ಯ ಗೆದ್ದರೆ ಸೆಮೀಸ್ಗೆ ಎಂಟ್ರಿ ಕೊಡಲಿದೆ. ಭಾರತವೂ ಈ ಹಾದಿಗೆ ಬರಬೇಕೆಂದರೆ ಕಿವೀಸ್ ವಿರುದ್ಧ ಗೆಲ್ಲಲೇಬೇಕು.
ಒಂದು ವೇಳೆ ಸೋತರೆ ತೀವ್ರ ಹೋರಾಟ ನಡೆಸಬೇಕಾಗುತ್ತೆ. ಉಳಿದ 3 ಪಂದ್ಯಗಳಲ್ಲಿ ಗೆದ್ದರೂ ರನ್ರೇಟ್ ಗೇಮ್ ಪ್ಲೇ ಮಾಡಲಿದೆ. ಜೊತೆಗೆ ಕಿವೀಸ್ ತಂಡ ಉಳಿದ 3 ಪಂದ್ಯಗಳ ಪೈಕಿ ಎರಡರಲ್ಲಿ ಸೋಲು ಕಾಣಬೇಕಾಗುತ್ತೆ. ಹೀಗಾಗಿಯೇ ಇಂದು ಭಾರತಕ್ಕೆ ಗೆಲುವು ಅನಿವಾರ್ಯವಾಗಿದೆ.
ಅಫ್ಘಾನಿಸ್ತಾನ ಕೂಡ ಸೆಮಿಸ್ ರೇಸ್ಗೆ ಎಂಟ್ರಿ ಕೊಟ್ಟಿದೆ. ಈಗಾಗಲೇ 2ರಲ್ಲಿ ಒಂದು ಪಂದ್ಯ ಗೆದ್ದಿರುವ ಆಘ್ಘನ್, ಭಾರತ ಮತ್ತು ಕಿವೀಸ್ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ.
18 ವಷ೯ದಿಂದ ಗೆದ್ದಿಲ್ಲ ಭಾರತ : ICC ಟೂರ್ನಮೆಂಟ್ಗಳಲ್ಲಿ ಕಳೆದ 18 ವರ್ಷಗಳಿಂದ ಕಿವೀಸ್ ವಿರುದ್ಧ ಭಾರತ ಗೆದ್ದಿಲ್ಲ.
2019ರ ವಿಶ್ವಕಪ್, ಜೂನ್ನಲ್ಲಿ ನಡೆದ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲೂ ಭಾರತದ ಚಾಂಪಿಯನ್ ಪಟ್ಟದ ಕನಸಿಗೆ ಪೆಟ್ಟು ಕೊಟ್ಟಿದ್ದು ಇದೇ ನ್ಯೂಜಿಲೆಂಡ್.
ಹೀಗಾಗಿ ಈ ಪಂದ್ಯ ಗೆದ್ದು ಸೆಮೀಸ್ ಆಸೆ ಜೀವಂತ ಮಾಡಿಕೊಳ್ಳೋದು ಜೊತೆ ಸೇಡು ತೀರಿಸಿಕೊಳ್ಳೋವ ತವಕವೂ ಕೊಹ್ಲಿ ಕ್ಯಾಂಪ್ನಲ್ಲಿದೆ.
ಬೆಂಗಳೂರು : ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಮತ್ತು ಎ2 ಆರೋಪಿಯಾಗಿರುವ… Read More
ಮೈಸೂರು: ಸೆ. 24 ರಂದು ಸಂಜೆ 6 ಗಂಟೆಗೆ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ದಸರಾ ಮಹೋತ್ಸವ -2024 ರ ಯುವ… Read More
ಮೈಸೂರು : ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ 2024 ರ ಹಿನ್ನೆಲೆಯಲ್ಲಿ ದಸರಾ ಚಲನಚಿತ್ರೋತ್ಸವ ಪೋಸ್ಟರ್ ಗಳನ್ನು ಜಿಲ್ಲಾ… Read More
ಸ್ವಾವಲಂಬಿ ಸ್ತ್ರೀ ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ಅರ್ಹ ಮಹಿಳೆಯರು ಉಚಿತವಾಗಿ ಆಟೋ ರಿಕ್ಷಾ ಚಾಲನಾ ತರಬೇತಿಯನ್ನು ಪಡೆಯಲು ಮತ್ತು ಆದಾಯ… Read More
ಬೆಂಗಳೂರು : ಅಕ್ಟೋಬರ್ 3 ರಿಂದ 20 ತನಕ ಶಿಕ್ಷಣ ಇಲಾಖೆ ಶಾಲಾ ಮಕ್ಕಳಿಗೆ ದಸರಾ ರಜೆ ಘೋಷಿಸಿದ್ದು ,ರಾಜ್ಯದ… Read More
ನವದೆಹಲಿ ,ಸೆಪ್ಟೆಂಬರ್ 23 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 69,600 ರೂಪಾಯಿ ದಾಖಲಾಗಿದೆ. 24… Read More
This website uses cookies.
Leave a Comment