ನ್ಯೂಸ್ ಸ್ನ್ಯಾಪ್
ನವದೆಹಲಿ
ಭಾರತದ ಗಡಿಯಲ್ಲಿ ನಿರಂತರವಾಗಿ ಕಾಲ್ಕೆರೆದುಕೊಂಡು ಜಗಳ ಮಾಡುತ್ತಿರುವ ಚೀನಾ ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಸೈಬರ್ ದಾಳಿ ಮಾಡುತ್ತಿರುವುದು ಬಯಲಾಗಿದೆ.
ಭಾರತದ ರಾಜಕೀಯ ಗಣ್ಯರು ಸೇರು ಇತರೆ ರಂಗದ ೧೦,೦೦೦ ಗಣ್ಯರನ್ನು ಗುರಿಯಾಗಿಸಿಕೊಂಡು ಅವರ ವೈಯಕ್ತಿಕ ಮಾಹಿತಿಯನ್ನು ಚೀನಾದ ಸೈಬರ್ ಕಳ್ಳರು ಕದಿಯುತ್ತಿದ್ದಾರೆ.
ಇತರೆ ದೇಶಗಳ ಗಣ್ಯರ ಮಾಹಿತಿಗಳನ್ನು ಕದಿಯುವದನ್ನೇ ಕಾಯಕ ಮಾಡಿಕೊಂಡಿದ್ದ ಶೆನ್ ಝೆನ್ ಮೂಲದ ‘ಝೆನ್ ಹುವಾ ಡೇಟಾ ಇನ್ಫಾರ್ಮೇಶನ್ ಟೆಕ್ನಾಲಜಿ ಕಂಪನಿ ಲಿಮಿಟೆಡ್’ ಎಂಬ ಕಂಪನಿಯು ಭಾರತದ ಪ್ರಧಾನಿ ಮೋದಿ, ಸೋನಿಯಾ ಗಾಂಧಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮುಂತಾದವರ ಮಾಹಿತಿಗಳನ್ನು ಕದ್ದು ಚೀನ ಸರ್ಕಾರಕ್ಕೆ ರವಾನೆ ಮಾಡುತ್ತಿತ್ತು ಎಂಬುದು ತಿಳಿದು ಬಂದಿದೆ.
ಭಾರತದ ಒಟ್ಟು ೨೪ ಮುಖ್ಯಮಂತ್ರಿಗಳು, ೩೫೦ ಸಂಸದರು, ೭೦೦ ರಾಷ್ಟ್ರೀಯ ನಾಯಕರ ಜೊತೆ ಇವರ ಕುಟುಂಬದ ಮೇಲು ಬೇಹುಗಾರಿಕೆ ಮಾಡುತ್ತಿತ್ತು. ಇದರಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಸೇರಿದ್ದಾರೆ ಎಂದು ತಿಳಿದು ಬಂದಿದೆ.
ಕೇವಲ ಭಾರತದ ರಾಜಕೀಯಕ್ಕೆ ನಿಲ್ಲಿಸದ ಚೀನಾ ಮೂಲದ ಸೈಬರ್ ಕಳ್ಳರು, ಭಾರತದ ಸೈನ್ಯದ ಮೇಲೆಯೂ ತನ್ನ ಬೇಹುಗಾರಿಕಾ ಕಣ್ಣುಗಳನ್ನಿಟ್ಟಿದೆ.
ಚೀನಾದ ಈ ಅಸಹ್ಯವಾದ ಕ್ರಿಯೆಯ ಮೂಲ ಉದ್ದೇಶ ಭಾರತದಲ್ಲಿ ಅರಾಜಕತೆ ಸೃಷ್ಠಿಸುವದೇ ಆಗಿದೆ ಎನ್ನುತ್ತದೆ ತನಿಖೆ. ಇನ್ನುಮುಂದಾದರೂ ಭಾರತವು ಜಾಗೃತೆಯಿಂದಿರಬೇಕು.
ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಗೋವಿಂದಪ್ಪ ಸಿದ್ದಾಪುರ ಎಂಬುವರು… Read More
ಮಂಗಳೂರು : ಬಂಟ್ವಾಳದ (Bantwal) ನಾವೂರಿನಲ್ಲಿ ಪೋಷಕರ ಎದುರೇ ಇಬ್ಬರು ಮಕ್ಕಳು ನೀರುಪಾಲಾದ ಘಟನೆ ನಡೆದಿದೆ. ಅನ್ಸಾರ್ ಅವರ ಪುತ್ರಿ… Read More
(ಬ್ಯಾಂಕರ್ಸ್ ಡೈರಿ) -ಡಾ. ಶುಭಶ್ರೀಪ್ರಸಾದ್ ಮಂಡ್ಯ ಅಂದೂ ಎಂದಿನಂತೆಯೇ ಬ್ಯಾಂಕಿನಲ್ಲಿ ವಿಪರೀತ ರಶ್ಶು. ಆ ಹುಡುಗಿ ಹೊಸ ಖಾತೆ ತೆರೆಯಲು… Read More
ಬೆಂಗಳೂರು : ವಿಶೇಷ ತನಿಖಾ ತಂಡ (SIT) ಮುಖ್ಯಸ್ಥ ಬಿ.ಕೆ.ಸಿಂಗ್ , ಹಾಸನದ ಅಶ್ಲೀಲ ಮತ್ತು ಶೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ… Read More
ನವದೆಹಲಿ: ಕುಸ್ತಿಪಟು ಭಜರಂಗ್ ಪುನಿಯಾ ( Bajrang Punia) ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (NADA )… Read More
ನವದೆಹಲಿ ,ಮೇ 5 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,750 ರೂಪಾಯಿ ದಾಖಲಾಗಿದೆ. 24… Read More
This website uses cookies.
Leave a Comment