ಸರಗಳ್ಳತನ ಮಾಡುವವನು ನನ್ನ ಗೆಳೆಯ,
ಸರ ಕಳೆದುಕೊಳ್ಳುವವಳು ನನ್ನ ಅಮ್ಮ,…
ಕೊಲೆ ಮಾಡುವವನು ನನ್ನ ತಮ್ಮ,
ಕೊಲೆಯಾಗುವವನು ನನ್ನ ಅಣ್ಣ,…
ಲಂಚ ಪಡೆಯುವವನು ನನ್ನ ಚಿಕ್ಕಪ್ಪ,
ಲಂಚ ಕೊಡುವವನು ನನ್ನ ದೊಡ್ಡಪ್ಪ,..
ವರದಕ್ಷಿಣೆ ಪಡೆಯುವವನು ನನ್ನ ಅಪ್ಪ,
ವರದಕ್ಷಿಣೆ ಕೊಡುವವನು ನನ್ನ ಮಾವ,…
ವಂಚಿಸುವವನು ನನ್ನ ಭಾವಮೈದ,
ವಂಚನೆಗೆ ಒಳಗಾಗುವವನು ನನ್ನ ಸೋದರಮಾವ,..
ಮಹಿಳೆಯರು ನನ್ನ ಬಂಧುಗಳೆ,
ಪುರುಷರೂ ನನ್ನ ರಕ್ತ ಸಂಬಂದಿಗಳೇ,…
ಆಡಳಿತ ನಡೆಸುವವರು ನನ್ನವರೇ,
ವಿರೋಧಿಸುವವರೂ ನನ್ನವರೇ,…
ಆಸ್ತಿಕರು ನನ್ನವರೇ,
ನಾಸ್ತಿಕರೂ ನನ್ನವರೇ,….
ಮೀಸಲಾತಿ ಪಡೆಯುವವರು ನನ್ನವರೇ,
ಮೀಸಲಾತಿ ವಿರೋಧಿಸುವವರೂ ನನ್ನವರೇ,….
ಎಲ್ಲರೂ ನಮ್ಮವರೇ,…..
ಆದರೂ ಆದರೂ ಆದರೂ…..
ಕಾಡುತ್ತಿದೆ ನನ್ನನ್ನು,
ಯಾವುದು ಸರಿ ಯಾವುದು ತಪ್ಪು,
ಕಾಡುತ್ತಿದೆ ನನ್ನನ್ನು,
ಯಾರು ನನ್ನವರು, ಯಾರು ಇತರರು,…
ಕಾಡುತ್ತಿದೆ ನನ್ನನ್ನು ಮತ್ತೆ ಮತ್ತೆ,
ನಾನ್ಯಾರೆಂಬ ಅನಾಥ ಪ್ರಜ್ಞೆ………
ಬೆಂಗಳೂರು : ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಮತ್ತು ಎ2 ಆರೋಪಿಯಾಗಿರುವ… Read More
ಮೈಸೂರು: ಸೆ. 24 ರಂದು ಸಂಜೆ 6 ಗಂಟೆಗೆ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ದಸರಾ ಮಹೋತ್ಸವ -2024 ರ ಯುವ… Read More
ಮೈಸೂರು : ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ 2024 ರ ಹಿನ್ನೆಲೆಯಲ್ಲಿ ದಸರಾ ಚಲನಚಿತ್ರೋತ್ಸವ ಪೋಸ್ಟರ್ ಗಳನ್ನು ಜಿಲ್ಲಾ… Read More
ಸ್ವಾವಲಂಬಿ ಸ್ತ್ರೀ ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ಅರ್ಹ ಮಹಿಳೆಯರು ಉಚಿತವಾಗಿ ಆಟೋ ರಿಕ್ಷಾ ಚಾಲನಾ ತರಬೇತಿಯನ್ನು ಪಡೆಯಲು ಮತ್ತು ಆದಾಯ… Read More
ಬೆಂಗಳೂರು : ಅಕ್ಟೋಬರ್ 3 ರಿಂದ 20 ತನಕ ಶಿಕ್ಷಣ ಇಲಾಖೆ ಶಾಲಾ ಮಕ್ಕಳಿಗೆ ದಸರಾ ರಜೆ ಘೋಷಿಸಿದ್ದು ,ರಾಜ್ಯದ… Read More
ನವದೆಹಲಿ ,ಸೆಪ್ಟೆಂಬರ್ 23 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 69,600 ರೂಪಾಯಿ ದಾಖಲಾಗಿದೆ. 24… Read More
This website uses cookies.
Leave a Comment